ನಾಳೆ ಎನುವ

ನಾಳೆ ಎನುವ

ಕವನ

ನಾಳೆ ಎನುವ

ಪದವ ಬಿಟ್ಟು

ಇಂದು ಎನುತ ಸಾಗುವ

ನಿನ್ನೆ ತನಕ

ಏನು ಇತ್ತೊ

ಮರೆತು ಮುಂದೆ ಹೋಗುವ

 

ಬಾಳ ಬಂಡಿ

ಇರುವ ಪದದ

ಜೊತೆಗೆ ನಾವು ಹಾಡುವ 

ಮುರಳಿ ಗಾನ

ಕೇಳಿ ಮನದಿ

ತತ್ವ ಪದವ ಕಲಿಯುವ

 

ಮರುಗ ಎಲೆಯ

ಒಳಗೆ ಎಲ್ಲಾ

ಚೆಲುವ ಕಂಪು ಚೆಲ್ಲಿದೆ

ಹಿರಿಮೆ ಒಳಗೆ

ಗರಿಮೆ ಇರಲು

ಮಲಿನ ದಾರಿ ತುಳಿಯದೆ

 

ಮರೆಯ ಬೇಡ

ಮಮತೆ ಒಲವ

ತಾಯ ಒಡಲ ಭಾವನೆ

ಮನುಜ ಗುಣದಿ

ಮರೆವು ಇರದೆ

ಇರಲಿ ನೂರು ಸ್ಪಂದನೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್