ನಾವ್ಯಾರು ಬಡವರಲ್ಲ ! (ಭಾಗ 2)

ನಾವ್ಯಾರು ಬಡವರಲ್ಲ ! (ಭಾಗ 2)

ನಿಸರ್ಗ ಹೇಗೆ ರೂಪಿಸಿದಿಯೋ ಹಾಗೆ ಶುಚಿಯಾಗಿ ಇಟ್ಟುಕೊಳ್ಳಬೇಕು. ಮೈ, ಹಲ್ಲು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೈಸರ್ಗಿಕ ಆಹಾರ ಸೇವಿಸಬೇಕು, ಆನಂದ ಪಡಬೇಕು. ಇದಕ್ಕೆ ಸಂಪತ್ತು ರಕ್ಷಣೆ ಎನ್ನುವರು. ಚೆನ್ನಾಗಿರುವುದನ್ನು ಎಷ್ಟು ಬೇಕು ಅಷ್ಟು ಸಂತೋಷವಾಗಿ ಊಟ ಮಾಡುವುದು ಶರೀರದ ಸಂಪತ್ತಿನ ರಕ್ಷಣೆ. ಎರಡನೇ ಸಂಪತ್ತು ಇಂದ್ರಿಯ ಸಂಪತ್ತು. ಕಣ್ಣು, ಕಿವಿ, ನಾಲಿಗೆ, ನಾಸಿಕ, ಚರ್ಮ ಚೆನ್ನಾಗಿರಬೇಕು, ಕ್ರಿಯಾಶೀಲವಾಗಿರಬೇಕು. ಚೆನ್ನಾಗಿ ಬಳಸಬೇಕು. ಚೆನ್ನಾಗಿರುವುದನ್ನು ನೋಡುವುದು. ಚೆಂದಾಗಿರುವುದನ್ನು ಕೇಳುವುದು. ಚೆಂದಾಗಿರುವುದನ್ನು ಮೂಸುವುದು. ಚೆಂದಾಗಿರುವುದನ್ನು ರುಚಿಸುವುದು. ಚಂದ ಇರುವುದನ್ನು ಸ್ಪರ್ಶಿಸುವುದು. ಇವೆ ಸಂಪತ್ತು. ಶಬ್ದ ಸಂಪತ್ತು. ಸ್ಪರ್ಶ ಸಂಪತ್ತು. ರೂಪ ಸಂಪತ್ತು. ಗಂಧ ಸಂಪತ್ತು. ರಸ ಸಂಪತ್ತು. ಇವುಗಳನ್ನು ಅನುಭವಿಸುವ ಇಂದ್ರಿಯ ಸಂಪತ್ತು. ಸಿಕ್ಕಿದ್ದನ್ನು ನೋಡಬಾರದು. ಸಿಕ್ಕಿದ್ದನ್ನು ಕೇಳಬಾರದು. ಸಿಕ್ಕಿದ್ದನ್ನು ರುಚಿಸಬಾರದು. ಸುಂದರ- ಸುಂದರವಾಗಿರುವುದನ್ನು ನೋಡಿ, ಕೇಳಿ, ಮಾಡಿ, ಆನಂದ ಪಡಬೇಕು. ಈ ಆನಂದ ಹೆಚ್ಚಾಗಬೇಕು. ಹೀಗೆ ಐದು ಅನುಭವ, ದಿನಪೂರ್ತಿ ಆಗಬೇಕು. ಆಗ ಅನುಭವ ಶ್ರೀಮಂತವಾಗುತ್ತದೆ. ಸುತ್ತಮುತ್ತ ಗಿಡ, ಹಣ್ಣು ನೋಡಿದರೆ ರೂಪ ಸಂಪತ್ತು, ಮನಸ್ಸನ್ನು ತುಂಬಿ ಸಂತೋಷ ಕೊಡುತ್ತದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಇವು 5 ಸಂಪತ್ತುಗಳು. ಈ ಐದನ್ನು ದಿನಪೂರ್ತಿ ಮಾಡುವುದಕ್ಕೆ ಪ್ರಪಂಚ ಎನ್ನುತ್ತೇವೆ. ಈ ಸಂಪತ್ತನ್ನು ದಿನಾಲು ಹೆಚ್ಚು ಮಾಡಿಕೊಳ್ಳುತ್ತಿರಬೇಕು. ಸಂಪತ್ತನ್ನು ಗಳಿಸಬೇಕೆಂದರೆ, ನೋಡಿ ಸಂಪತ್ತು ಗಳಿಸುವುದು, ರೂಪ ಸಂಪತ್ತು. ಕೇಳಿ ಸಂಪತ್ತು ಗಳಿಸುವುದು, ಶಬ್ದ ಸಂಪತ್ತು. ರುಚಿಸಿ ಸಂಪತ್ತು ಗಳಿಸುವುದು ರಸ ಸಂಪತ್ತು. ಸುವಾಸನೆ ಆಗ್ರಾಣಿಸಿ ಸಂಪತ್ತು ಗಳಿಸುವುದು, ವಾಸನೆ ಸಂಪತ್ತು. ಚೆಂದಾಗಿರುವುದನ್ನು ಸ್ಪರ್ಶಿಸಿ ಸಂಪತ್ತು ಗಳಿಸುವುದು, ಸ್ಪರ್ಶ ಸಂಪತ್ತು. ಹೀಗೆ ಐದು ಅನುಭವ ಮನ ತುಂಬಿದರೆ. ನಾವು ಶ್ರೀಮಂತರು. ನೋಡಿ ಮನಸ್ಸು ಕೆಡಿಸಿಕೊಂಡರೆ ನಾವು ಬಡವರಾಗುತ್ತೇವೆ. ಬದುಕು ಹಾಳಾಗುತ್ತದೆ. ಬಸವಣ್ಣ ಹೇಳಿದರು, "ಅತ್ತಲಿತ್ತ ಹೋಗದಂತೆ ಯಳವನ ಮಾಡಯ್ಯ ತಂದೆ" ಇದರ ಅರ್ಥ ನೋಡಬೇಡ, ಆ ಕಡೆ, ಈ ಕಡೆ ಹೋಗಬೇಡ ಅಂತ ಅಲ್ಲ. ಆ ಕಡೆ ಈ ಕಡೆ ಹೋಗಬೇಡ. ಹೋಗಬೇಕಾದಲ್ಲಿ ಹೋಗು. ನೋಡಬಾರದನ್ನು ನೋಡಬೇಡ. ಚೆಂದಾಗಿರುವುದನ್ನು ನೋಡು. ಜಗತ್ತು ನಿಸರ್ಗದ ವೈವಿಧ್ಯಮಯ ಸಂಪತ್ತಿನಿಂದ ತುಂಬಿದೆ.

ಮೂರನೇ ಸಂಪತ್ತು ಮತಿ. ತಿಳಿದುಕೊಳ್ಳಬೇಕಲ್ಲ. ಇದು ಗಿಡ. ಇದು ಹೂವು. ಇದು ಕುರ್ಚಿ ಅಂತ ತಿಳಿದುಕೊಳ್ಳುತ್ತೇವೆ. ವಸ್ತುಗಳ ಜ್ಞಾನ ಮಾಡಿಕೊಳ್ಳುತ್ತೇವೆ. ಹೀಗೆ ಜ್ಞಾನ ಮಾಡಿಕೊಳ್ಳುವ ಮತಿ ಶ್ರೀಮಂತ ಸಂಪತ್ತು. ಅದನ್ನು ಬಳಸಿಕೊಳ್ಳುತ್ತಾ ಇರಬೇಕು. ತಿಳಿದುಕೊಳ್ಳುತ್ತಾ ಇರಬೇಕು. ನೋಡಿ, ಕೇಳಿ, ಮಾಡಿ ಜ್ಞಾನ ಮಾಡಿಕೊಳ್ಳಬೇಕು. ನಾವು ಇರೋತನಕ ಜ್ಞಾನ ಮಾಡಿಕೊಳ್ಳುವುದು. ಇದು ಜ್ಞಾನ ಸಂಪತ್ತು. ಹೊರಗಿನ ಸಂಪತ್ತು. ದೇಹ ಚೆನ್ನಾಗಿರಬೇಕಾದರೆ ಹೊರಗಿನ ಸಂಪತ್ತು ಬೇಕು. ದೇಹ, ಅವಯವ ಶ್ರೀಮಂತವಾಗಿರಬೇಕು. ನೋಡಲು, ಕೇಳಲು, ಮುಟ್ಟಲು ಮೂಸಲು, ರುಚಿಸಲು ಸಂಪತ್ತು ಬೇಕು. ಅನ್ನ , ನೀರು, ಗಾಳಿ , ಬೆಳಕು, ಹಣ್ಣು , ಹಂಪಲ ಮತ್ತು ಧಾನ್ಯ ಇವು ದೇಹ ಶ್ರೀಮಂತ ಮಾಡಲು ಬೇಕು. ಇವು ದೇಹ ಪೋಷಣ ಸಂಪತ್ತುಗಳು. ಇವು ದೇಹ ಪೋಷಣೆಗೆ ಬೇಕಾದ ಸಂಪತ್ತುಗಳು. ಇವು ನಮಗೆ ಯಾರಿಗೂ ಕೊರತೆ ಇಲ್ಲ. ಹಾಗಾಗಿ ನಾವು ಬಡವರಲ್ಲ. ನಮ್ಮ ದೇಹದಲ್ಲಿ ಶಕ್ತಿ ಇದ್ದರೆ, ಯಾರು ಕರೆಯಲು ಸಾಧ್ಯವಿಲ್ಲ. ನಮ್ಮ ಅನುಭವ ಸಂಪತ್ತನ್ನು ಯಾರು ಕದಿಯಲು ಆಗುವುದಿಲ್ಲ. ನಮ್ಮ ಜ್ಞಾನ ಸಂಪತ್ತನ್ನು ಯಾರು ದೋಚಲು ಆಗುವುದಿಲ್ಲ. ಇಂಥ ಸಂಪತ್ತನ್ನು ಗಳಿಸಬೇಕು. ಯಾರು ಕದಿಯಲಾರದು, ಮುಟ್ಟಲಾರದ ಅಂತಹ ಸಂಪತ್ತುಗಳನ್ನು ಗಳಿಸಬೇಕು. ಇದೇ ನಿಜವಾದ ಸಂಪತ್ತು. ಇದರ ಬಗ್ಗೆ ಅಭಿಮಾನ ಇರಬೇಕು. ನಾವು ಶ್ರೀಮಂತರಲ್ಲಿ ಶ್ರೀಮಂತರು ಅಂತ ಭಾವಿಸ ಬೇಕು. ಅಲ್ಲವೇ?

(ಮುಗಿಯಿತು)

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ