ನಿಸರ್ಗದಾಟ

ನಿಸರ್ಗದಾಟ

ಕವನ

ಮುಂಜಾವಿನ ಮಂಜದು ಮುಸುಕಿರಲು

ರಂಗಿನ ಓಕುಳಿಯದು ಹರಡಿರಲು...

ಬಾನು- ಭುವಿಯ ಸಂಗಮದಲ್ಲಿ

ನಲಿದವು ಮರಗಳು ಹರುಷದಲಿ.!

 

ಕಣ್ಮನ ತಣಿಸುವ ಸುಂದರ ಚಿತ್ರ

ಸೃಷ್ಟಿಯ ಸೊಬಗಿನ ಬಹು ಪಾತ್ರ

ವರ್ಣ ವೈಭವವು ಕಣ್ಮನದಲ್ಲಿ...

ಮುಗಿಲಿಗೆ ಹಾಸಿದ ಚಪ್ಪರವಲ್ಲಿ. !

 

ಮುಗಿಲನು ಮುಟ್ಟುವ ಬಯಕೆಯಲಿ

ಮರಗಳು ಚಾಚಿತು ಕೊಂಬೆಗಳನಲ್ಲಿ

ಬಾನೆತ್ತರಕೆ ಹಸಿರಿನ ತೋರಣವು...

ಬಾನಂಗಳದ ತುಂಬಾ ರಂಗಿನಾಟವು.!

 

ಚುಮು,ಚುಮು,ಚುಮು ಚಳಿಯಲ್ಲಿ

ಮಸುಕಲಿ ಮರಗಳು ಮರೆಯಲ್ಲಿ....

ನಿಸರ್ಗದ ಮನೋಹರ ಚಿತ್ತಾರವು

ಕವಿ ಮನಸಿಗದು ರಸದೌತಣವು. !!

 

ಬಾನು- ಭುವಿಯ ನಿತ್ಯದ ಕಾಯಕವು

ಅನುದಿನ ನಡೆಯುವ ರೂಪಕವು...

ಹಗಲಿಗಿರುವ ಹಲವು ಬಣ್ಣ ಬಣ್ಣವು

ಇರುಳಿಗಲ್ಲಿಹ ಒಂದೇ ಕರಿ ವರ್ಣವು.!

 

-ವೀಣಾ ಕೃಷ್ಣಮೂರ್ತಿ ದಾವಣಗೆರೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್