ನೆನಪಿನ ಪಯಣ - ಭಾಗ 7

ನೆನಪಿನ ಪಯಣ - ಭಾಗ 7

 
ನೆನಪಿನ ಪಯಣ - ಭಾಗ 7
 
ರೂಮಿನೊಳಗೆ ಬಂದರೆ ಜ್ಯೋತಿ ಹಾಗೆ ಮಲಗಿದ್ದರು.
ಆನಂದನಿಗೆ ಸಣ್ಣ ದ್ವನಿಯಲ್ಲಿ ಎಲ್ಲವನ್ನು ತಿಳಿಸಿದೆ. ಸಮಯ ಆಗಲೆ ರಾತ್ರಿ ಒಂಬತ್ತರ ಸಮೀಪ. ಆರ್ಯನ ಹೆಂಡತಿ ಉಷಾ, ತಮಗೆ ಬೆಳಗ್ಗೆ ಆಪೀಸಿಗೆ ಹೋಗಬೇಕಾಗಿದೆ ಎಂದು ತಿಳಿಸಿದರು, ಹಾಗಾಗಿ ಆರ್ಯ ಹಾಗು ಉಷಾಗೆ ಹೊರಡಲು ತಿಳಿಸಿದೆವು. ಅವರು ಒಲ್ಲದ ಮನದಿಂದ ಹೊರಟರು. ಮೂರ್ತಿಗಳು ಸಪ್ಪೆಯಾಗಿಯೆ ಹೊರಟರು. ಸಂದ್ಯಾ ತನ್ನ ಮನೆಗೆ ಪೋನ್ ಮಾಡಿ, ಅವರ ಅಮ್ಮನ ಬಳಿ, ತಾನು ರಾತ್ರಿ ಎಲ್ಲ ಜ್ಯೋತಿಯ ಮನೆಯಲ್ಲಿ ಇರಬೇಕಾಗಬಹುದು ಎಂದು ತಿಳಿಸಿದರು.
ಈಗ ಮಲಗಿರುವ ಜ್ಯೋತಿಯ ಸುತ್ತ, ನಾನು ಆನಂದ ಹಾಗು ಸಂದ್ಯಾ ಕುಳಿತಿದ್ದೆವು.
ಜ್ಯೋತಿ ಪುನಃ ಕನಲಿದಳು, ಅದು ಅವಳು ಮಾತನಾಡುವ ಸೂಚನೆ ಎಂದು ಅರಿತೆವು,.
ನಿಜವಾಗಿತ್ತು ಆಕೆಯ ಮಾತು ಪುನಃ ಪ್ರಾರಂಭವಾಯಿತು
ಸೂರ್ಯನ ರಚನೆ ನಮ್ಮ ಭೂಮಿಯ ರಚನೆಗೆ ಮೂಲವಸ್ತುವಾಗಿ ಕಾಣುತ್ತದೆ. ಇದನ್ನ ಆಕಾಶವೆಂದು ಕರೆಯುವುದೊ ಬೇಡವೋ ತಿಳಿಯದು. ಅಗಾದವಾದ ಅವಕಾಶ. ಮೊಡ ದಟೈಸಿದಂತೆ ಬರಿಯ ಬಿಳಿಯ ಧೂಮ. ಆದರೆ ಅದು ಕೇವಲ ಧೂಮವಾಗದೆ ಶಕ್ತಿ ಸಂಚಯಗೊಂಡ ಮೂಲವಸ್ತು. ಒಳಗೆ ಅಗಣಿತ ವೇಗದಿಂದ ಸುತ್ತುತ್ತಿರುವ ಧೂಮ ಸುಳಿ. ನಡುಬಾಗದಲ್ಲಿ , ಎಂತದೋ ಕುಸಿತ. ಸೂರ್ಯನ ಮೂಲ ಸ್ವರೂಪ. ಕೋಟಿ ಕೋಟಿ ಜಲಜನಕ ಬಾಂಬುಗಳನ್ನು ಸಿಡಿಸಿದರು, ನಾವು ಉಹಿಸಲಾಗದ ಅಪಾರ ಶಕ್ತಿಯ ಸಂಚಯ ಸೂರ್ಯ. ಅಂತಹ ಅಂತರ್ ವಿಸ್ಪೋಟಗಳಿದಂಲೆ ತನ್ನ ಜೀವಿತ ಹಾಗು ಆ ಶಕ್ತಿಯ ಮೂಲವೆ ಭೂಮಿ ಹಾಗು ಇತರೆ ಗ್ರಹಗಳಿಗೂ ಅಹಾರವೆನ್ನುವುದು ವಿಚಿತ್ರ. ಸೂರ್ಯನ ಪ್ರಾರಂಭಿಕ ರೂಪವನ್ನು ವರ್ಣಿಸುವುದು ಪದಗಳಿಂದ ಅಶಕ್ಯ. ಆ ಅಪಾರ ಶಕ್ತಿಯಾಗಲಿ, ಬೆಳಕಾಗಲಿ, ಅಲ್ಲಿಂದ ಹುಟ್ಟುತ್ತಿರುವ ಅಪರಿಮಿತ ಶಾಖದ ಶಕ್ತಿಯಾಗಲಿ ಹೋಲಿಕೆಯೆ ಇಲ್ಲದ ಅಸದೃಷ್ಯ ಘಟನೆ ಎನ್ನಿಸುತ್ತಿದೆ.
ಇಂತಹ ಒಂದು ಕ್ರಿಯೆ ಪೂರ್ಣವಾಗುವುದು ಮಾತ್ರ ಕೋಟಿ ಕೋಟಿ ಮನುಷ್ಯ ವರ್ಷಗಳ ಕಾಲಮಾನದಲ್ಲಿ, ಇಲ್ಲಿ ಕಾಲವೆಂಬುದೆ ಇಲ್ಲ. ಕಾಲಕ್ಕೆ ಅರ್ಥವೂ ಇಲ್ಲ. ಕಾಲದಲ್ಲಿ ಹಿಂದೆ ಹೋಗುವುದು ಅನ್ನುವ ಮಾತು ಅಸಂಗತವಾಗಿ ಕಾಣುತ್ತಿದೆ. .... ಜ್ಯೋತಿಯ ನಗು.... ಅಂತಹ ಸೂರ್ಯನ ನಿರ್ಮಾಣದ ಕ್ರಿಯೆಯನ್ನು ವರ್ಣಿಸಲು ಹೇಗೆ ಸಾದ್ಯ. ತಮಸೋಮ ಜ್ಯೋತಿರ್ಗಮಯ ಎನ್ನುವ ಮಾತೊಂದೆ ಸಾಕು ಅನ್ನಿಸುತ್ತಿದೆ ಅವನ ಸೃಷ್ಟಿಯನ್ನು ವರ್ಣಿಸಲು. ಅಂತಹ ಸೂರ್ಯನ ಅಗಾದ ಶಕ್ತಿಯೆ ಭೂಮಿಯಾಗಲಿ ಇತರ ಗ್ರಹಗಳಾಗಲಿ ರೂಪಗೊಳ್ಳಲು, ಇರಲು, ಅಲ್ಲಿ ಜೀವಿ ಎನ್ನುವ ವಸ್ತು ಕಾಣಿಸಿಕೊಳ್ಳಲು ಸಾದ್ಯವಾಗಿಸಿದೆ

 
ಜ್ಯೋತಿ ತನ್ನ ಮಾತನ್ನು ಮುಂದುವರೆಸಿದ್ದಳು. ಸೂರ್ಯನ ರಚನೆಯನ್ನು ಅವನ ಸ್ವರೂಪವನ್ನು , ಅವನ ಮನೋಹರ ಭೀಬಿತ್ಸ, ಉಗ್ರ ರೂಪಗಳನ್ನು ವರ್ಣಿಸುತ್ತಲೇ ಹೋದಳು..
ಆನಂದ
’ನಾನು ಹೊರಗೆ ಹೋಗಿ ಎಲ್ಲರಿಗೂ ತಿನ್ನಲು ಏನಾದರು ತರುತ್ತೇನೆ, ನೀವು ಜ್ಯೋತಿಯ ಬಳಿಯೆ ಇರಿ’ ’ ’
ಅವನು ಹೊರಗೆ ಹೋಗಿ ಸ್ಕೂಟರ್ ಸ್ಟಾರ್ಟ್ ಮಾಡಿ ಹೋದ ಶಬ್ದ ಕೇಳಿಸಿತು. ನಂತರ ನಿಶ್ಯಬ್ದ.
ಅಂತಹ ನಿಶ್ಯಬ್ದದ ರಾತ್ರಿಯಲ್ಲಿ ಜ್ಯೋತಿ ಮಾತ್ರ ಸಣ್ಣ ದ್ವನಿಯಲ್ಲಿ ಸೂರ್ಯನ ಮೇಲ್ಮೈಯನ್ನು ಅದರ ಅಸದೃಷ್ಯ ಹೋಲಿಕೆಯನ್ನು ವಿವರಿಸುತ್ತಿದ್ದಳು. ಕೆಲವು ಕ್ಷಣಗಳಲ್ಲಿ , ಅವಳು ಪುನಃ ಮೌನವಾದಳು.
ಹಿಂದಕ್ಕೆ ಅಂದರೆ ಜ್ಯೋತಿ ತನ್ನ ನೆನಪಿನ ಪಯಣದಲ್ಲಿ ಎಲ್ಲಿಯವರೆಗೂ ಹೋಗಲು ಸಾದ್ಯ? ಅನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಅಷ್ಟಕ್ಕೂ ಸೂರ್ಯನ ರಚನೆಯ ನಂತರ ಮತ್ತೂ ಹಿಂದೆ ಹೋಗುವುದು ಅಂದರೆ ಅರ್ಥವೇನು. ಇವಳು ಮಾತನಾಡುತ್ತಿರುವದಾದರು ಏನು, ಅದು ಆಕೆಗೆ ಹೇಗೆ ಕಾಣಿಸುತ್ತಿದೆ. ಕಾಣುತ್ತದೆ ಅನ್ನುವದಾದರೆ ಆಗ ಆಕೆಯ ಸ್ವರೂಪವಾದರು ಏನು, ಆಗಿನ್ನು ಜೀವಿಗಳೆ ಈ ಸೃಷ್ಟಿಯಲ್ಲಿರಲಿಲ್ಲ ಅನ್ನುವ ಭಾವ ಬಂದಿತು.
ನನ್ನ ಮನಸೀಗ ಹುಚ್ಚುಚ್ಚಾಗಿ ಚಿಂತಿಸುತ್ತಿತ್ತು. ಒಂದು ವೇಳೆ ಭೂಮಿಯಲ್ಲಿನ ಈ ಜೀವಿಗಳೆಲ್ಲ ಹೊರಗಿನ ಯಾವುದೋನಕ್ಷತ್ರ ಲೋಕದಿಂದ ಬಂದಿದೆಯೆಂದು ಉಹಿಸುವದಾದರೆ, ನಮ್ಮ ಮನುಷಯನ ಮೆದುಳಿನಲ್ಲಿ , ಸೂರ್ಯ ನಕ್ಷತ್ರಗಳ ರಚನೆಯ ವಿವರವೂ ಹುದುಗಿರಲು ಸಾದ್ಯವೇ ಎಂದೆಲ್ಲ ಚಿಂತಿಸುತ್ತಿದ್ದೆ. ನಾವೀಗ ಯಾವುದೋ ಭ್ರಮೆಯ ಲೋಕದಲ್ಲಿ ಇದ್ದಂತೆ ಇದ್ದೆವು. ಯಾವುದೋ ಸಣ್ಣ ಮಾತಿನಿಂದ ಪ್ರಾರಂಭವಾದ ನಮ್ಮ ಪರಿಸ್ಥಿತಿ ಇಂತಹ ವಿಚಿತ್ರ ಸಂದರ್ಭದಲ್ಲಿ ಸಿಲುಕುವಂತೆ ಮಾಡಿತ್ತು. ಬಹುಶಃ ನಾಳೆ ಬೆಳಗಾದರೆ ಈಕೆಯ ಮಗನೂ ಬರುವ , ಅವನು ಹೀಗೆ ಮಲಗಿರುವ ತನ್ನ ತಾಯಿಯನ್ನು ಕಂಡರೆ ಏನೆಂದು ಭಾವಿಸುವನೋ, ವಯಸ್ಸಿನಲ್ಲಿ ಹಿರಿಯರಾದ ನಾವೆಲ್ಲ ಸೇರಿ, ಯಾವುದೋ ಉದ್ದಟತನ, ಬಾಲಿಷವಾಗಿ ಚಿಂತಿಸಿ ಅವರ ಅಮ್ಮನನ್ನು ಇಂತಹ ಪರಿಸ್ಥಿತಿಗೆ ದೂಡಿದ್ದಾರೆ ಎಂದು ನೊಂದುಕೊಳ್ಳುವದಿಲ್ಲವೆ ?
ಆದರೆ ಸ್ವಸ್ಥವಾಗಿ ಮಲಗಿದ್ದ ಜ್ಯೋತಿ ಮಾತ್ರ ಎಲ್ಲ ಯೋಚನೆಗಳಿಂದ ಹೊರತಾದವರಂತೆ, ಸೂರ್ಯನ ರಚನೆಯನ್ನು ಅದರ ಭೀಕರತೆಯನ್ನು ಸೌಂದರ್ಯವನ್ನು ವರ್ಣಿಸುತ್ತಲೇ ಹೋದರು. ಕಡೆಗೊಮ್ಮೆ ಆಕೆಯ ಮಾತುಗಳು ನಿಂತವು.
ಹೊರಗೆ ಸ್ಕೂಟರ್ ನಿಂತ ಶಬ್ಧ, ಬಹುಶಃ ಆನಂದ ಬಂದ ಅನ್ನಿಸುತ್ತೆ ಅಂದುಕೊಳ್ಳುವಾಗಲೆ, ಆನಂದ ಊಟದ ಪಾರ್ಸಲ್ ಗಳನ್ನು ಹಿಡಿದು ಒಳಬಂದ. ನನಗಂತೂ ಸಂಕೋಚವೆನಿಸುತ್ತ ಇತ್ತು.

 
ನಾನು ಜ್ಯೋತಿಯನ್ನು ಊಟಕ್ಕೆ ಎಬ್ಬಿಸಿನೋಡೋಣಾ ಎಂದುಕೊಂಡೆ. ಡಾಕ್ಟರ್ ಹೇಳಿದ್ದು ನೆನಪಿತ್ತು, ಅವಳನ್ನು ಬಲವಂತ ಮಾಡಬೇಡಿ ಎಂದು.
ನಾನು ಮೆಲುದ್ವನಿಯಲ್ಲಿ
ಜ್ಯೋತಿ, ಆನಂದ ಊಟ ತಂದಿದ್ದಾರೆ, ಏಳಿ ಊಟ ಮಾಡೋಣಾವೆ ? ಏಳುತ್ತೀರಾ ಎಂದೆ
ಜ್ಯೋತಿಯ ಕಡೆಯಿಂದ ದೀರ್ಘಮೌನ, ಮತ್ತೆ ಕೇಳಿದೆ
ಜ್ಯೋತಿ ಏಳಿ ಊಟ ಮಾಡೋಣವೆ ? ನೋಡಿ ಆನಂದ ನಿಮಗಾಗಿ ಊಟ ತಂದಿದ್ದಾರೆ
ಅತಿ ನಿಧಾನ ಅನ್ನುವಂತೆ ಕೇಳಿದರು
ಆನಂದ ....... ಆನಂದ ಯಾರು ?
ನನಗೆ ಗಾಭರಿ ಅನ್ನಿಸಿತು.
ಇದೇನು ಹೀಗನ್ನುವಿರಿ, ಆನಂದ ನಿಮ್ಮ ಪತಿ, ಬೆಳಗ್ಗೆ ನಿಮ್ಮ ಮಗ ಶಶಾಂಕ ಬರುತ್ತಿದ್ದಾನೆ ಎಂದೆ
ಆಕೆ ಮತ್ತೆ,
ಆನಂದ...... ಶಶಾಂಕ...... ಯಾರು ..... ಹಿಂದೆ ಮತ್ತೂ ಹಿಂದೆ ........ ಹೋಗುತ್ತಿರುವೆ
ಎಂದರು
ನನ್ನ ಮುಖದಲ್ಲಿನ ಗಾಭರಿ ನೋಡುತ್ತಿದ್ದ, ಆನಂದ, ನಿಧಾನವಾಗಿ ಬಂದು ನನ್ನ ಹೆಗಲ ಮೇಲೆ ಕೈ ಇಟ್ಟು ಮೃದುವಾಗಿ ಅದುಮಿದ.
ಗಾಭರಿ ಬೇಡ ನೋಡೋಣ ಡಾಕ್ಟರ್ ಬಂದರೆ ಸರಿಹೋಗಬಹುದು ಎಂದ ,
ಸಂಧ್ಯಾರಿಗೆ ಊಟವನ್ನು ಸಿದ್ದಪಡಿಸಲು ತಿಳಿಸಿ, ಸುಮ್ಮನೆ ಕುಳಿತ. ಸಂದ್ಯಾ ನನಗೆ ಆನಂದನಿಗೆ ಇಬ್ಬರಿಗೂ ತಟ್ಟೆಯಲ್ಲಿ ಊಟ ಹಾಕಿ ಕೊಟ್ಟರು. ಅದೇನು ಅಂತಹ ಹಸಿವಿನಲ್ಲೂ ಸಹ ತಿನ್ನಲೂ ಕಷ್ಟವಾಗುತ್ತಿತ್ತು. ಇದೆಂತಹ ಪ್ರಮಾಧ ಮಾಡಿದೆ ಎನ್ನುವ ಆತಂಕ ನನ್ನ ಮನಸನ್ನು ತುಂಬಿತ್ತು. ಸಂದ್ಯಾರಿಗೆ ಸಹ ಊಟ ಮಾಡಲು ಆನಂದ ತಿಳಿಸಿದ. ನಾವು ಸೇರಿದಷ್ಟು ಊಟ ಮಾಡಿ ಮುಗಿಸಿದೆವು, ತಂದಿದ್ದ ಅಹಾರದಲ್ಲಿ ಅರ್ಧವಿನ್ನು ಪಾತ್ರೆಗಳಲ್ಲಿಯೆ ಉಳಿದಿತ್ತು.
ನಾನು ಸ್ವಲ್ಪ ಕಾಲ ಹಾಲಿನಲ್ಲಿ ಕುಳಿತಿದ್ದೆ. ಈಗ ಡಾಕ್ಟರ್ ಬರುವದನ್ನು ಕಾಯುವದರ ವಿನಃ ಬೇರೆನು ಮಾಡಲು ಸಾದ್ಯವಿಲ್ಲ ಎನ್ನುವ ಸ್ಥಿತಿ. ಮತ್ತೆ ರೂಮಿನಲ್ಲಿ ಹೋದೆ. ಸಂದ್ಯಾ ಜ್ಯೋತಿಯ ಪಕ್ಕ ಕುಳಿತಿದ್ದರು. ಸಂದ್ಯಾರ ಮುಖ ಕಳೆಗುಂದಿತ್ತು. ಏನು ಹೀಗಾಯಿತಲ್ಲ ಎನ್ನುವ ಚಿಂತೆ. ಜ್ಯೋತಿ ಮಾತ್ರ ಯಥಾ ಪ್ರಕಾರ ಮಲಗಿದ್ದರು. ಅವರ ಮುಖದಲ್ಲಿ ಯಾವುದೇ ತೊಂದರೆ ಇರದೆ ಸಾಮಾನ್ಯವಾಗಿ ಮಲಗುವ ಹಾಗೆ ಇದ್ದರು.

 
ನನ್ನ ಮೊಬೈಲ್ ರಿಂಗ್ ಆಯಿತು. ಓ ಅದೇ ಡಾಕ್ಟರ್ ನಂಬರಿನಿಂದ ಕಾಲ್ ಬಂದಿತ್ತು. ಅವರೇ ಹೇಳಿದರು,
’ನಾನೀಗ ರಸ್ತೆಯ ತುದಿಯಲ್ಲಿದ್ದೇನೆ, ಟೂ ವೀಲರ್ ನಲ್ಲಿಯೆ ಬರುತ್ತಿದ್ದೇನೆ, ನೀವು ಯಾರಾದರು ಮನೆಯಿಂದ ಹೊರಬಂದರೆ ನನಗೆ ಮನೆ ಗುರುತಿಸಲು ಆಗುತ್ತದೆ’
ನಾನು ಸರಿ ಎಂದೆ, ನಾನು ಹೊರಗೆ ಬರುತ್ತಿದ್ದೇನೆ ಎಂದು ತಿಳಿಸಿ. ಆನಂದನಿಗೆ ಹೇಳಿದೆ. ನಾನು ಆನಂದ ಇಬ್ಬರು ಬಾಗಿಲು ತೆರೆದು,ಹೊರಗೆ ಬಂದು ಗೇಟ್ ತೆಗೆದು ರಸ್ತೆಯಲ್ಲಿ ಬಂದು ನಿಂತೆವು. ಒಂದೆರಡು ನಿಮಿಷವಾಗಿರಬಹುದು, ರಸ್ತೆಯಲ್ಲಿ ಮೋಟಾರ್ ಬೈಕ್ ಬರುತ್ತಿರುವುದು ಕಾಣಿಸಿತು. ಹತ್ತಿರ ಬಂದು ನಿಲ್ಲಿಸಿದ ಅವರು
’ ನೀವೇ ಅಲ್ಲವೆ ಕಾಲ್ ಮಾಡಿದ್ದು, ನಾನು ಡಾಕ್ಟರ ಶ್ರೀಧರ್ ಎಂದು ಅವರನ್ನು ಪರಿಚಯಿಸಿಕೊಂಡರು
ಆನಂದ ಮತ್ತು ನಾನು ಅವರನ್ನು ಬನ್ನಿ ಎಂದು ಒಳಗೆ ಕರೆತಂದೆವು. ನಾನು ಅವರ ಸ್ನೇಹಿತ. ಅಚ್ಚುತ ನನ್ನ ತಮ್ಮನ ಮಗ ಎಂದು ತಿಳಿಸಿದೆ.
ಸರಿ ಈಗ ಸಮಸ್ಯೆ ತಿಳಿಸಿ, ಅಂದ ಹಾಗೆ ಪೇಷೆಂಟ್ ಎಲ್ಲಿದ್ದಾರೆ, ಎಂದರು
ಅವರು ಪೇಷೆಂಟ್ ಎಂದು ಕೇಳಿದ್ದು, ನನಗೆ ಒಂದು ರೀತಿ ಆಯಿತಾದರು ಏನು ಮಾಡುವುದು ಸುಮ್ಮನಾದೆ.
ನಾನು ಈಗ ಮೊದಲಿನಿಂದ ನಡೆದ ಕತೆಯನ್ನೆಲ್ಲ ಪುನಃ ತಿಳಿಸಿದೆ. ನಂತರ ಅವರು ಯೋಚಿಸುತ್ತ ಬನ್ನಿ ರೂಮಿನೊಳಗೆ ಹೋಗೋಣ ಎನ್ನುತ್ತ ಹೊರಟರು. ನಾವು ಹಿಂದೆ. ಒಳಗೆ ಜ್ಯೋತಿಯ ಪಕ್ಕ ಕುಳಿತಿದ್ದ ಸಂದ್ಯಾ ಎದ್ದು ಡಾಕ್ಟರಿಗೆ ಜಾಗಮಾಡಿಕೊಟ್ಟರು. ಅಲ್ಲಿ ಕುಳಿತ, ಡಾಕ್ಟರ್, ಜ್ಯೋತಿಯ, ನಾಡಿಯನ್ನುಪರೀಕ್ಷಿಸಿ, ನಂತರ ಮೃದುವಾಗೆ ರೆಪ್ಪೆಗಳನ್ನು ಬಿಡಿಸಿ ನೋಡಿದರು. ಜ್ಯೋತಿಯ ಕೈ ಬೆರಳುಗಳನ್ನು, ಕಾಲುಗಳ ಬೆರಳನ್ನು ಅಲುಗಿಸಿ, ಮತ್ತೇನೇನೊ ಕೆಲವು ದೈಹಿಕ ಪರೀಕ್ಷ ನಡೆಸಿ, ಅವಳ ಹೆಸರನ್ನು ನಮ್ಮಿಂದ ತಿಳಿದು, ಆಕೆಯ ಕಿವಿಯತ್ತ ಬಗ್ಗಿ
ಜ್ಯೋತಿ.... ಜ್ಯೋತಿ ಎಂದು ಕೂಗಿದರು.
ಆಕೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
ನಮ್ಮತ್ತ ತಿರುಗಿ ಹೇಳಿದರು,
ಆಕೆ ನನ್ನ ಮಾತನ್ನು ಕೇಳಿಸಿಕೊಳ್ಳುತ್ತಲೆ ಇಲ್ಲ ಅನ್ನಿಸುತ್ತಿದೆ, ಅಸಲಿಗೆ ಹೊರಗಿನ ಯಾವುದೇ ಶಬ್ದ ಕೇಳಿಸಿಕೊಳ್ಳುತ್ತಿಲ್ಲ ಎಂದರು.
ನಾನು ಇಲ್ಲ ಡಾಕ್ಟರ್ , ಕೆಲವು ಸಲ ನನ್ನ ಮಾತಿಗೆ ರಿಯಾಕ್ಟ್ ಮಾಡುತ್ತಿದ್ದಾರೆ ಎಂದೆ
ಹಾಗಿದ್ದರೆ ನೀವು ಆಕೆಯನ್ನು ಮಾತನಾಡಿಸಿ ನೋಡೋಣ ಎನ್ನುತ್ತ ಎದ್ದು, ರೂಮಿನಲ್ಲಿಯ ಎಲ್ಲ ದೀಪಗಳನ್ನು ಹಾಕುವಂತೆ ತಿಳಿಸಿದರು
ನಾನು ನಿಧಾನಕ್ಕೆ
ಜ್ಯೋತಿ.... ನೋಡಿ ಎದ್ದೇಳಿ, ಡಾಕ್ಟರ್ ಬಂದಿದ್ದಾರೆ, ನಿಮ್ಮನ್ನು ಪರೀಕ್ಷಿಸಬೇಕಂತೆ. ಎಚ್ಚರ ಮಾಡಿಕೊಳ್ಳಿ. ಎಂದೆ

 
ಜ್ಯೋತಿಯ ಮುಖದಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲ , ಒಂದು ನಿಮಿಶವಾಯಿತೇನೊ , ಏನು ಮಾಡುವುದು ಎಂದು ಚಿಂತಿಸುವಾಗ
ಕತ್ತಲು..... ಕತ್ತಲಿನತ್ತ ಪಯಣ ಎಂದು ಕನಲಿದರು ಜ್ಯೋತಿ
ಈಗ ಡಾಕ್ಟರ್ ಆಸಕ್ತಿಯಿಂದ ನೋಡುತ್ತಿದ್ದರು.
ಏನು ಕತ್ತಲು ಜ್ಯೋತಿ ಎಂದೆ

 
ಏನಿಲ್ಲ. ಸೃಷ್ಟಿಯ ಮೊಟ್ಟ ಮೊದಲ ಹಂತ. ಎಲ್ಲದಕ್ಕಿಂತ ಮೊದಲು. ಏನು ಇಲ್ಲದ ಸ್ಥಿತಿಯತ್ತ ಪಯಣ ಎಂದರು. ಈಕೆ ಏನು ಹೇಳುತ್ತಿದ್ದಾರೆ ಎಂದು ಚಿಂತಿಸುತ್ತಿದ್ದೆ. ಆಕೆ ಮುಂದುವರೆದರು

 
ಕತ್ತಲು, ಕತ್ತಲು ಹೊರತು ಏನಿಲ್ಲ. ಏನಿಲ್ಲ ಅಂದರೆ ಏನು ಇಲ್ಲ, ಖಾಲಿ ಜಾಗವು ಇಲ್ಲ, ಶೂನ್ಯವೂ ಇಲ್ಲ. ಆದರು ಸೃಷ್ಟಿಗೆ ಬೇಕಾದ ಎಲ್ಲ ಸಿದ್ದತೆಯೂ ನಡೆದಿದೆ. ನಾನು ಅದಕ್ಕೆ ಸಾಕ್ಷಿ ಆಗಲಿದ್ದೇನೆ
ಜ್ಯೋತಿಯ ಮುಖದಲ್ಲಿ ಅಪಾರ ಸಂತಸ.
ಇದೊಂದು ಸ್ಥಿತಿ, ಏನು ಇಲ್ಲ ಅಂದರೆ ಏನು ಇಲ್ಲ, ಬೆಳಕೂ ಇಲ್ಲ , ಕತ್ತಲೆಯೂ ಅಲ್ಲ. ಶಬ್ದವೂ ಇಲ್ಲ. ಇಲ್ಲಿ ಎಲ್ಲವೂ ನಿಶ್ಯಬ್ದವೇ. ಸಮಯವೆನ್ನುವುದು ಇಲ್ಲಿ ಸಮಾದಿಯಾಗಿದೆ. ಇಲ್ಲಿಂದ ಹಿಂದಕ್ಕೆ ಸಮಯವೂ ಇಲ್ಲ. ಬೆಳಕು ಸಮಯ ಶಬ್ದ ಎಲ್ಲವೂ ಬೀಜರೂಪದಲ್ಲಿ ಹುದುಗಿಹೋಗಿದೆ. ಅಸಲಿಗೆ ಆಕಾಶವೇ ಇಲ್ಲ , ಆಕೆಯ ಹೊರತಾಗಿಏನು ಇಲ್ಲ.

 
ನನಗೆ ಕೊಂಚ ಕುತೂಹಲವೆನಿಸಿತ್ತು
ಆಕೆಯೆ ಆಕೆ ಎಂದರೆ ಯಾರು?
ಶಕ್ತಿ .... ಶಕ್ತಿ ಯನ್ನು ಆಕೆ ಎಂದೆ. ಪೂರ್ಣ ಪ್ರಖಂಡ ಶೂನ್ಯದಲ್ಲಿ ಶಕ್ತಿಯೊಂದು ನಿಗೂಡವಾಗಿ ಹುದುಗಿದೆ. ಬೀಜರೂಪದಲ್ಲಿ ಶಕ್ತಿಅಡಗಿದೆ. ಅಂತಹ ಶಕ್ತಿಯ ಅವಿರ್ಭವಕ್ಕಾಗಿ ಕ್ಷಣ ಸಜ್ಜಾಗಿದೆ. ತನ್ನೊಳಗೆ ತಾನು ಅಸ್ತಂಗತವಾಗಿರುವ ಆ ಪ್ರಚಂಡ ಶಕ್ತಿ ಪ್ರಕಟಗೊಳ್ಳಲಿದೆ, ಮತ್ತು ಪರಿಪೂರ್ಣ ಭ್ರಹ್ಮಾಂಡದ ಉದಯಕ್ಕೆ ಕಾರಣವಾಗಲಿದೆ.

 
ಅಂದರೆ ನೀವು ಈಗ ಬಿಗ್ ಬಾಂಗ್ ಸ್ಪೋಟದ ಬಗ್ಗೆ ಹೇಳುತ್ತಿದ್ದೀರಾ ?
ಹೌದು. ಅಂತಹ ಪ್ರಚಂಡ ಸ್ಪೋಟಕ್ಕೆ ನಾನು ಸಹ ಸಾಕ್ಷಿಯಾಗಲಿದ್ದೇನೆ.
ನಾನು ಸಹ ಅಂದರೆ ನಿಮ್ಮ ಜೊತೆ ಮತ್ಯಾರು ಇದ್ದಾರೆ.
ನನಗೆ ಕುತೂಹಲ
ದೀರ್ಘ ಮೌನ
ತಿಳಿಯದು ,... ಹೇಳಲಾರೆ....... ಗೊತ್ತಿಲ್ಲ... ನಾನೀಗ ಸಮಯದ ಆಳದ ಸೆಳೆತದಲ್ಲಿ ಹುದುಗಿಹೋಗಿದ್ದೇನೆ. ಅಲ್ಲಿ ಯಾವ ಅನುಭವವೂ ಇಲ್ಲ ಬೆಳಕಿಲ್ಲ ಶಬ್ದವಿಲ್ಲ ಚಲನೆಯಿಲ್ಲ , ಸ್ಪೇಸ್ ಇಲ್ಲ, ಅಂತಹ ಮಹಾ ಸ್ಪೋಟದ ನಂತರ ನನ್ನ ಸ್ಥಿತಿ ಏನೋ ನನಗೂ ಗೊತ್ತಿಲ್ಲ.
ಮತ್ತೆ ನೀವು ಈ ಕಾಲದ ಪಯಣವನ್ನು ನಿಲ್ಲಿಸಿ ಹಿಂದೆ ಬರುವುದು ಯಾವಾಗ?
ಹಿಂದೆ ನಾನು ಹಿಂದೆ ಹೋಗುತ್ತಿದ್ದೆ ಇಷ್ಟು ಕಾಲ, ಈಗ ಸ್ಥಿರವಾಗಿದ್ದೇನೆ ..... ಮತ್ತೆ ಹಿಂದಕ್ಕೆ ಚಲಿಸಲಾರೆ.
ಹಾಗಲ್ಲ ನೀವು ಎಚ್ಚರಗೊಳ್ಳುವುದು ಯಾವಾಗ, ನಿಮಗಾಗಿ ಎಲ್ಲರೂ ಕಾಯುತ್ತಿದ್ದೇವೆ
ಗೊತ್ತಿಲ್ಲ ನಾನೀಗ ಕಾಲದ ಕೊನೆಯ ತುದಿ ತಲುಪಿರುವೆ. ಇಲ್ಲಿ ಎಲ್ಲವೂ ಸ್ಥಬ್ದ. ಇಲ್ಲಿ ಬೆಳಕಿಲ್ಲ ಶಬ್ದವಿಲ್ಲ ಚಲನೆಯಿಲ್ಲ ಸ್ಪೇಸ್ ಇಲ್ಲ ಮಹಾಸ್ಪೋಟಕ್ಕೆ ಕಾಯುತ್ತಿರುವೆ , ಯಾರಿಗೂ ಸಿಗದ ಅಪೂರ್ವ ಅವಕಾಶಕ್ಕಾಗಿ ಕಾದಿರುವೆ..... ಕತ್ತಲೆ ....... ನಿಗೂಡ ಕತ್ತಲೆ...

 
ಜ್ಯೋತಿಯ ಮಾತು ನಿಂತು ಹೋಯಿತು.
ನಂತರ ನಾನು ಮಾತನಾಡಿಸಲು ಎಷ್ಟೋ ಪ್ರಯತ್ನಪಟ್ಟೆ. ಆಗಲಿಲ್ಲ . ಆಕೆ ನನ್ನ ಮಾತಿಗೂ ಸಹ ಸ್ಪಂದಿಸುವದನ್ನು ನಿಲ್ಲಿಸಿದಳು.
ಡಾಕ್ಟರ್ , ಕುತೂಹಲದಿಂದ ನಮ್ಮ ಮಾತನ್ನು ಕೇಳುತ್ತಿದ್ದವರು ಏನು ಅರ್ಥವಾಗದಂತೆ ಕುಳಿತರು...
ಕಡೆಗೆ ಬಹಳ ಸಮಯದ ನಂತರ ಹೇಳಿದರು.
ಆಕೆಯ ಪರಿಸ್ಥಿತಿ ಅರ್ಥಮಾಡಿಕೊಳ್ಳಲಾಗುತ್ತಿಲ್ಲ . ನೀವು ನಿಮಾನ್ಸ್ ಗೆ ಅಡ್ಮಿಟ್ ಮಾಡಬೇಕಾಗಿದೆ ಅನ್ನಿಸುತ್ತೆ. ನಾನು ನನ್ನ ಸೀನಿಯರ್ ಜೊತೆ ಬೆಳಗ್ಗೆ ಮಾತನಾಡುವೆ. ಈಕೆಯ ದೇಹ ಸ್ಥಿತಿ ಸ್ಥಿರವಾಗಿದೆ. ಇವರ ಹಾರ್ಟ್ ಬೀಟ್ ಆಗಲಿ. ಪಲ್ಸ್ ಆಗಲಿ, ರಕ್ತದೊತ್ತಡವಾಗಲಿ ಅಂತಹ ವ್ಯೆತ್ಯಾಸವೇನಿಲ್ಲ ಅತ್ಯಂತ ಸಹಜವಾಗಿದೆ. ಈಕೆಯ ಮೆದುಳಿನ ಸ್ಥಿತಿ ಹಾಗು ಉಳಿದ ಪರೀಕ್ಷೆಗಳನ್ನು ಇಲ್ಲಿ ಮಾಡಲಾಗುವದಿಲ್ಲ. ನೀವು ಸಾದ್ಯವಾದರೆ ಈಗಲೆ ಅಥವ ನಾಳೆ ಬೆಳಗ್ಗೆ ಈಕೆಯನ್ನು ಇಲ್ಲಿಂದ ಸಾಗಿಸಿ, ಅಂಭ್ಯೂಲೆನ್ಸ್ ಗೆ ಕಾಲ್ ಮಾಡಿ. ನಿಮಾನ್ಸ್ ಗೆ ಅಡ್ಮಿಟ್ ಆದನಂತರ ಮುಂದಿನ ಕ್ರಮದ ಬಗ್ಗೆ ಚಿಂತಿಸೋಣ. ಸದ್ಯಕ್ಕೆ ಈಕೆಗೆ ಯಾವುದೇ ಮೆಡಿಸನ್ ಕೊಡುವ ಅವಶ್ಯಕತೆ ಕಾಣುತ್ತಿಲ್ಲ
ಮುಂದುವರೆಯುವುದು...
photo curtesy:https://www.google.co.in/url?sa=i&rct=j&q=&esrc=s&source=images&cd=&cad=...