ಪ್ರತಿನಿಧಿ

ಪ್ರತಿನಿಧಿ

ಕವನ

ಸಾಕ್ಷಿಯಾಗಿದೆ ಕಲ್ಲುಗಂಬ

ಅರಸನ ಕಲಾವಂತಿಕೆಗೆ

ಸಂಸ್ಕೃತಿಯ ಶ್ರೀಮಂತಿಕೆಯ 

ಪ್ರತೀಕವಾಗಿ

ಕಾಣದ ರಮ್ಯತೆಯ ಮಾಧುರ್ಯವನ್ನು

ಕಾಣುವಂತೆ ಕಂಡರಿಸಿದ

ಕಲಾಪ್ರೌಢಿಮೆಗೆ

ಉರಿಬಿಸಿಲಲ್ಲಿ ಕಲ್ಲು ಹೊತ್ತು ನೊಂದ

ಜೀವಗಳ ಬೆವರಿಗೆ ಬೆಲೆಯಾಗಿ

ಕಾಲನದಿಯ ಓಘಕ್ಕೆ ಸಿಲುಕಿದರೂ

ಸ್ಥಿರವಾಗಿ ನಿಂತಿದೆ-ಜೀವಂತವಾಗಿ

ಈ ತಲೆಮಾರಿಗೆ ಪಳಮೆಗಳ

ನೆನಪನ್ನು ತರಿಸಿ

ತುಂಬಿಕೋ ಮೊಗೆಮೊಗೆದು

ಈ ಬತ್ತದ ಸಲಿಲವ

ನಿನ್ನ ಜಿಜ್ನಾಸು ಮನಕ್ಕೆ

ತುಂಬಿಸು ನಿನ್ನ ಕಣ್ಣ ಬಿಂಬಕ್ಕೆ

ಕಿರುಗಣ್ಣು ತೆರೆದು

ನೆರಳ ತೆರೆಯ ಮೇಲೆ ದಾಖಲಿಸಲು

ಎಲ್ಲರಿಗೂ ಬೆನ್ನು ತಿರುಗಿಸಿ

ಏಕಾಗ್ರ ಚಿತ್ತದಲಿ

ಈ ನಿಧಿಯ ಪ್ರತಿನಿಧಿಯ

ತನ್ನದಾಗಿಸಿಕೊಳ್ಳಲು

Comments