ಪ್ರಸಾದು ಹೋಗಿಬಿಟ್ ನಂತೆ

ಪ್ರಸಾದು ಹೋಗಿಬಿಟ್ ನಂತೆ

ಬರಹ

ಭಾನುವಾರ ಬೆಳಿಗ್ಗೆ ಬೆಳಿಗ್ಗೆ ಒಂದು ಎಂಟು ಗಂಟೆಗೆಲ್ಲಾ ಎದ್ದು, ನಾರಾಯಣ, ಶ್ರೀಹರಿ ಕಾಪಾಡಪ್ಪ ಅಂತ ಮನೆಯ ಮುಖ್ಯದ್ವಾರ ತೆಗೆದೆ.
"ಇನ್ನೂ ಮಲಿಗಿದಿಯೇನೋ" ಅಂತ ನಮ್ ಸತ್ಯಣ್ಣ ಬಂದ್ರು
ಓ ಏನೋ ಗ್ರಹಚಾರ ಇದೆ.  ಬೆಳಿಗ್ಗೆನೇ ಆಣ್ಣಾ‌ಅವ್ರ್ ಕ್ಯೆಲಿ ಸಿಕ್ಕಿಹಾಕಿಕೊಂಡೆನಲ್ಲ ಅಂತ ಅನ್ಕೊಂಡು,
"ಬಾ ಕಾಫಿ ಕುಡಿಯೋಣ" ಆಂದೆ,
"ಇನ್ನೂ ಕಾಫಿ ಕುಡಿದಿಲ್ವ" ಅಂದ್ರು
"ಇಲ್ಲಾ, ಈಗಿನ್ನೂ ಇವಳು ಸ್ನಾನಕ್ ಹೋದ್ಲು" ಎಂದೆ.  ನಾವು ಸಿಕ್ಕಾಪಟ್ಟೆ ಸ್ಟ್ರಿಕ್ಟ್.  ಸ್ನಾನ ಮಾಡದೆ ಆಡುಗೆ ಮನೆಗೆ ಹೋಗಲ್ಲ ಅಂತ ತಿಳಿದುಕೊಳ್ಳಲಿ, ಸ್ವಲ್ಪ ನಮ್ಮ ಬಗ್ಗೆ ಅಣ್ಣವ್ರಿಗೆ ಇರುವ ಅಸಡ್ಡೆಯಾದರೂ ನಿವಾರಣೆಯಾಗಲಿ ಅಂದುಕೊಂಡೆ.
"ಅಯ್ಯೋ, ಇಷ್ಟ್ ಬೇಗ ಯಾಕೋ ಸ್ನಾನ, ಸ್ವಲ್ಪ ಕರಿ" ಅಂದ್ರು.
ಸ್ನಾನಕ್ಕೆ ಹೋಗಿರೋರನ್ನ ಕರಿ ಅಂದ್ರೆ!? ಏನೋ ಗಂಭೀರ ವಿಚಾರನೇ ಇರಬೇಕು, ಮೂದ್ಲೆ ನಮ್ ಕಡೆ ಎಂಬತ್ತು ದಾಟಿದವರು ೩ ಜನ ಹಾಸಿಗೆ ಹಿಡಿದಿದ್ದರು? ಅಂದ್ಕೊಂಡು ಅಣ್ಣಾ‌ಅವರನ್ನೇ ದಿಟ್ಟಿಸಿದೆ.
"ಅದೇ ಎದುರು ಮನೆ ರಂಗಪ್ಪನವರ ಮಗ, ಪ್ರಸಾದು ಪಾಪ ಹೋಗ್ಬಿಟ್ಟನಂತೆ" ಅಂದ್ರು
"ಅಯ್ಯೋ, ಗ್ರಹಚಾರವೇ,  ಇದೇನು, ನೆನ್ನೆ ನಾನು ನೋಡಿದೆ ಅವ್ನ, ಕಾರಲ್ಲಿ ಹೋಗ್ತಾ‌ಇದ್ದಾ,  ಏನಾಗಿತ್ತು" ಎಂದೆ
"ಹಾರ್ಟ್ ಆಟ್ಯಾಕ್" ಅಂದ್ರು
"ಪಾಪ, ತುಂಬಾ ಚಿಕ್ಕವನು" ಎಂದೆ
"ಇಲ್ಲಾ ೪೨ ಅಗಿತ್ತೇನೋಪ್ಪಾ" ಅಂದ್ರು ಅಣ್ಣಾವ್ರು
"ಪಾಪ, ಒಬ್ಬಳೇ ಹೆಂಡತಿ, ದಪ್ಪ ಬೇರೆ, ಒಬ್ಬಳೇ ಮಗಳು" ಎಂದೆ
"ಅದಕ್ಕೊ ಇದಕ್ಕೂ ಎನೋ ಸಂಭಂದ, ಹುಚ್ಚು ಹುಚ್ಚಾಗಿ ಮಾತಾಡ್ಬೇಡ" ಎಂದು ಗದರಿದರು ಆಣ್ಣಾವ್ರು.
"ಪಕ್ಕದ ಮನೆ ವೆಂಕಟಪ್ಪನವ್ರಿಗೆ ತಿಳಿಸಿದ್ಯಾ" ಎಂದೆ.
"ಇಲ್ಲಾ ಬಾ ಹೋಗಿ ಹೇಳೋಣ" ಆಂದ್ರು.
ವೆಂಕಟಪ್ಪನವರು ರಿಟೇರ್ ಇಂಜಿನಿಯರ್, ಬೆಳಿಗ್ಗೆ ಹೊತ್ತು ಹೂ ಬಿಡಿಸೋದು ಅವರ ರೂಢಿ.
"ನಮಸ್ಕಾರ" ಎಂದೆ,
"ಓಹೋ, ಬಾರಯ್ಯ, ಚೆನ್ನಾಗಿದಿಯಾ,  ಇದೇನು, ಅಣ್ಣ ತಮ್ಮ ಒಟ್ಟಿಗೆ" ನಾವು ಪಂಚೆ ಬನಿಯನಿನಲ್ಲೇ ಹೋಗಿದ್ದು ನೋಡಿ ಅನುಮಾನಿಸಿದರು.
"ವಿಷಯ ತಿಳಿತಾ" ಎಂದೆ,
"ಇಲ್ಲಾ,  ಏನಾದರು, ವನಜಮ್ಮನವ್ರು ಹೋಗ್ಬಿಟ್ರಾ ಪಾಪ, ೮೦ ಆಗಿತ್ತು, ತುಂಬಾ ದಿನದಿಂದ ಹಾಸಿಗೆ ಹಿಡಿದಿದ್ದರು" ಆಂತ ಅವರ ಪಕ್ಕದ ಮನೆ ವನಜಮ್ಮನವರ ಬಗ್ಗೆ ವಿಚಾರಿಸಿದರು.
" ಇಲ್ಲಾ ಆಂದೆ"
"ಎದುರು ಮನೆ ರಂಗಪ್ಪನವರ್ ಮಗ, ಪ್ರಸಾದು, ಹೋಗ್ಬಿಟ್ನಂತೆ" ಎಂದು ನನ್ನ ಅಗ್ರಜರು ಒಂದೇ ಉಸಿರಿನಲ್ಲಿ ಹೇಳಿದರು.
"ಅರರೇ, ಇದೇನು,  ಏನಾಗಿತ್ತು" ಎಂದರು ವಂಕಟಪ್ಪ
"ಅದೇ ಹಾರ್ಟ್ ಅಟ್ಯಾಕ್ ಅಂತೆ,  ನೆನ್ನೆ ಅವರ್ ಮಾವನ ಮನೆಗೆ ಹೋಗಿದ್ನಂತೆ, ಅಲ್ಲಿ ಆಗಿರೋದು" ಅಂದ್ರು ನಮ್ಮಣ್ಣ
"ಅಯ್ಯೋ ಪಾಪ, ಒಂದೇ ಹುಡುಗಿ, ಇನ್ನು ಚಿಕ್ಕದು ಪಾಪ,  ಅವನ ಹೆಂಡತಿ ಬೇರೆ ಅತ್ತೆ ಮಾವನವರ ಜೊತೆ ಹೊಂದ್ಕೊಳಲ್ಲ" ಅಂದ್ರು ವೆಂಕಟಪ್ಪ
"ಈ ನಡುವೆ ಕುಡಿತಿದ್ನಂತೆ" ಅಂದ್ರು ಅಲ್ಲೇ ನಿಂತಿದ್ದ  ಆಂಟಿ,
"ಹೌದು, ನಮ್ಮ ಸೀನ ನೋಡಿದಾನೆ,  ಅದೇನು ಅವರ್ ಮನೆ ಮುಂದೆ ಬಾಟ್ಲಿಗಳು ಇರುತ್ತೆ ಅಂತಿದ್ದ" ಎಂದು ವೆಂಕಟಪ್ಪನವ್ರು ಅವರ್ ಮಗ ಕಂ
scientist ಅನ್ನೂ ಕರೆದರು. ಇವರು ಗಣಕ ಯಂತ್ರ ವಿಜ್ಝಾನದಲ್ಲಿ ಡಾಕ್ಟರೇಟ್.
"ಏನಾಯ್ತು" ಎಂದು ಸೀನ ಪೇಪರ್ ಓದಿತ್ತಿದ್ದವರು ಬಂದ್ರು.
ನಾವುಗಳು ಎಲ್ಲಾ ಹೇಳಿದ್ದು ಆಯ್ತು.
"ಅದಕ್ಕೇ ಇರಬೇಕು ರಂಗಪ್ಪನವ್ರು ಬೆಳಿಗ್ಗೆನೇ, ಗಾಬರಿಯಿಂದ ಓಡ್ತಿದ್ರು,  ಆ ದೇವಸ್ಥಾನದಲ್ಲಿ ಏನೋ ವಿಚಾರಿಸ್ತಿದ್ರು" ಅಂದರು ಸೀನ.
"ಹೌದು, ನಾನು ನೋಡಿದೆ, ನಾನು ಕಾರು ತೊಳಿತಿದ್ದೆ, ಯಾಕೋ ಓಡಿಹೋದರಲ್ಲಾ  ರಂಗಪ್ಪನವ್ರು, ಅಂದುಕೊಂಡೆ"
"now a days heart attack is quite common,  you see in India no body bothers for their health,  It is not so in US,
Every one gets regular health check up done.  They are very conscious about their helath" ಎಂದರು scientist ಸೀನ.
"ಏನಂದ್ರೂ, ತುಂಬಾ ಕುಡಿತ್ತಿದ್ದರೆ ಏನ್ ಮಾಡೋಕಾಗುತ್ತೆ" ಎನುತ್ತಾ ವೆಂಕಟಪ್ಪನವ್ರು ಎಲ್ರಿಗೊ ಹೇಳಿ ಬರ್ತೀನಿ ಅಂತ ಹೊರಟರು.
"ಇಷ್ಟಕ್ಕೂ ಈ ವಿಷಯ ಹೇಗೆ ಗೊತ್ತಾಯ್ತು" ಆಂದೆ.
"ಪಕ್ಕದ ಮನೆ ಸೊಸೆಗೆ,  ರಂಗಪ್ಪನವರೇ ಹೇಳಿದ್ರಂತೆ" ಆಂದ್ರು ಸತ್ಯಣ್ಣ.
"ಹೌದಾ, ನಾನ್ ವಿಚಾರಿಸಿಕೊಂಡು ಬರ್ತೀನಿ" ಆಂತ ಹೊರಟೆ
ಪಕ್ಕದ್ ಮನೆ ಮಾಲಾ ಆಂಟಿ,  "ಆದೇನೋ ನಮ್ಮ ವಾಚ್ ಮನ್ ಹತ್ರ  ರಂಗಪ್ಪನವರೇ ಹೇಳಿದ್ರಂತೆ. ಅವ್ನು ಇನ್ನು night duty ಗೆ ಬರೋದು.
ಯಾವುದಕ್ಕೊ ರಂಗಪ್ಪನವ್ರಿಗೆ ಫೋನ್ ಮಾಡಿ, ಹೆಣ ಇಲ್ಲೇ ತರ್ತಾರೋ ಹ್ಯಾಗೋ ಕೇಳು". ಆಂದ್ರು.
"ಪಾಪ ,  ಎಷ್ಟು ಚಿಕ್ಕವನು,  ಹೀಗಾಗಬಾರದಿತ್ತು; ಎಂದೆ.
" ಅಯ್ಯೋ ಸುಮ್ನಿರು,  ಆದದ್ದೇ ಒಳ್ಳೇದು,  ಏನು ಕುಡಿದು ಮನೇಲಿ ಸಿಕ್ಕಾಪಟ್ಟೆ ಗಲಾಟೆ ಆಂತೆ,  ಅವನ್ ಹೆಂಡ್ತಿ ಬೇರೇ ಈ ನಡುವೆ ಕ್ಲಬ್ಬು, ಗಿಬ್ಬು ಅಂತ ಹೋಗಿತಿದ್ಲು" ಅಂದರು ಮಾಲ ಆಂಟಿ
ಅಷ್ಟರಲ್ಲಿ ಸೀನ ಅವರು  ರಂಗಪ್ಪ ನವರ ಫೋನ್ ನಂಬರ್ ತಂದ್ರು.
"ಈಗ ಯಾರು ಫೋನ್ ಮಾಡೋದು, ಪಾಪ ರಂಗಪ್ಪನವರನ್ನ ಏನು ಆಂತ ಕೇಳೋದು" ಆಂದ್ರು ನಮ್ಮಣ್ಣ
"ಏ ಕೊಡಿಲ್ಲಿ ನಾನು ದೊಡ್ಡವನು, ನಾನು ಮಾತಾಡ್ತೀನಿ, ಎಲ್ಲಾ ವಿಚಾರಿಸಿ ಹೇಳ್ತೀನಿ" ಆಂದ್ರು ವೆಂಕಟಪ್ಪನವರು.
"No, you dont' call him,  he is very short tempered person.  Rangappa may not speak properly,  whenever i have spoken to him he does not even look properly and speak" ಆಂದ್ರು ಸೀನ.
ಸುಮಾರು ನಮ್ಮ ರೋಡಿನವರೆಲ್ಲಾ ಸೇರಿದ್ದರು. ಎಲ್ಲರದ್ದೂ ಒಂದೂಂದು ಮಾತು.
"ಅಯ್ಯೋ ಈ ನಡುವೆ ಅವನು ಸರಿಯಾಗಿರಲಿಲ್ಲಂತೆ"
"ಗಂಡ, ಹೆಂಡತಿ ಯಾವಾಗಲೂ ಜಗಳ,  ಏನೋ ಅದೇ ಬೇಜಾರಲ್ಲಿ ಕುಡಿತಿದ್ನೇನೋಪ್ಪ"
"ಅದೇನೋ, ಹೊರ ದೇಶದಲ್ಲಿ ಇದ್ನಲ್ಲಾ ಅವಾಗ ಎಲ್ಲಾ ಕಲಿತಿರೋದು,  ಪಾಪ ರಂಗಪ್ಪನವ್ರು ಎಷ್ಟು ಪೂಜೆ ಪುನಸ್ಕಾರ ಒಳ್ಳೇ ಸಂಪ್ರದಾಯಸ್ತರು"
"ಅಯ್ಯೋ  ರಂಗಪ್ಪ, ಅವರ ಅಪ್ಪ ಅಮ್ಮನ್ನೇ ಸರಿಯಾಗಿ ನೋಡ್ಕೋತಿರಲಿಲ್ಲ, ಅವ್ರ ಅಮ್ಮ ಸಿಕ್ಕಾಗಲೆಲ್ಲಾ ಹೇಳ್ಕೂಂಡು ಬೇಜಾರುಮಡ್ಕೋತಿದ್ದರು"
"ಅವ್ರಪ್ಪ ಸತ್ತಾಗ ಅವಯ್ಯಾ ಕಾಪಿ ಕುಡಿತಿದ್ದ ಹೋಟಲಲ್ಲಿ,  ನಾನ್ ನೋಡೀವ್ನಿ" ಆಂತ ಅವ್ರ್ ಮನೆ ಹೊ ಮಾರೋಳ ಆಂಬೋಣ
ಹೀಗೆ ತಲೆಗೂಂದೂಂದು.
ಅಷ್ಟರಲ್ಲಿ,  ಫೋನ್ ಮಾಡಲು ನಾನೇ ಸರಿ ಎಂದು ಎಲ್ಲರೊ ನನ್ನ ಆಯ್ಕೆ ಮಾಡಿದರು.
ಮಾಹಾ ಜನಗಳ ಕೋರಿಕೆ ಮೇರೆಗೆ ನಾನು ಒಪ್ಪಿದೆ
"ಮಗನ ಸತ್ತ ಸುದ್ದಿ ಬಗ್ಗೆ ಸಂತಾಪ ಸೂಚಿಸಿ ಹೆಣ ಬರುವ time ಕೇಳಬೇಕು, ಎಲ್ಲರೊ ಅವ್ರ ಮನೆ ಮುಂದೆ ಇದೀವಿ, ಧ್ಯೆರ್ಯ ತೊಗೊಳಿ ಆಂತ ಹೇಳು, ಏನೇನೂ ಮಾತಾಡ ಬೇಡ" ಎಂದು. ನಮ್ಮ ಅಣ್ಣಾವ್ರ ಆದೇಶ.
ಸರಿ ಎಂದು ಫೋನಾಯಿಸಿದೆ.
"ಹಲೋ" ಎಂದೆ,
"ಹಲೋ ಯಾರು, ನಾನು  ರಂಗಪ್ಪ" ಆಂದರು ಆ ಕಡೆ ಇಂದ
"ನಾನು, ನಿಮ್ಮ ಎದುರು ಮನೆ......." ಎಂದೆ,
"ಗೊತ್ತಾಯ್ತು, ಹೇಳು,  ಏನ್ ಸಮಾಚಾರ" ಅಂದ್ರು ರಂಗಪ್ಪ.
"ಅದೇ ನೀವು ಬೆಳೆಗ್ಗೆನೇ ಓಡಿ ಹೋದರಲ್ಲಾ, ಯಾಕೆ" ಎಂದೆ,
ಸುತ್ತಲೂ ನೆರೆದಿದ್ದವ್ರು,  ಹೋಗಿ ಹೋಗಿ, ಈ ತಲೆ ಹರಟೆ ಕ್ಯೆಲಿ ಕೊಟ್ವಲ್ಲಾ ನಾವು,  ಈಗ ಅವರಿಗೆ Condolense ಹೇಳಿ, ಬಾಡಿ ಇಲ್ಲಿಗೆ ಬರತ್ತೋ ಇಲ್ವೋ ಕೇಳು ಅನ್ನೋ ಹಾಗೆ ಲುಕ್ ಕೊಟ್ಟರು.
ಆ ಕಡೆ ಇಂದ  ರಂಗಪ್ಪನವರು " ಓ, ನೀನು ನೋಡಿದ್ಯಾ ಬೆಳಿಗ್ಗೆ" ಆಂದ್ರು,
"ಹೌದು,  ನಾನು ಕಾರು ತೊಳಿತಿದ್ದೆ,  ನೀವು ಏನಾದ್ರು ಅರ್ಜೆಂಟ್ ಇದ್ರೆ ನನ್ನೇ ಕರೀಬಹುದಾಗಿತ್ತಲ್ಲಾ ಆಂತ " ಎಂದು ಎಲ್ಲರ ಕಡೆ ನೋಡಿ ಸ್ವಲ್ಪ ಮುಗುಳುನಗೆ ಬೀರಿದೆ
ಇವನಿಗೆ ಮಾನ ಮರ್ಯಾದಿನೇ ಇಲ್ಲಾ ಯಾವಗಲೊ ತಲೆಹರಟೇನೆ ಅನ್ನೋ ಲುಕ್ ಕೊಟ್ಟರು ನಮ್ಮಣ್ಣಾ!
"ತುಂಬಾ ಥ್ಯಾಂಕ್ಸ್, ಆತರಹ ಏನಿಲ್ಲಾ, ಪ್ರಸಾದು ಮಾವ ಹೋಗ್ಬಿಟ್ರು ಬೆಳಗ್ಗೆ" ಆಂದ್ರು,
"ಅಯ್ಯೋ, ಪಾಪ,  ಏನಾಗಿತ್ತು" ಎಂದೆ.  ನೆರೆದಿದ್ದವರೆಲ್ಲಾ ನ್ಯೊಸ್ ಕನಫರ್ಮ್ ಅಂದುಕೊಂಡು ನನ್ನನ್ನೇ ದಿಟ್ಟಿಸಿದರು.
"Heart attack,  ಒಂದು ತಿಂಗಳಿಂದ ಹಾಸಿಗೆ ಹಿಡಿದಿದ್ದರು, ಇವತ್ತು ಬೆಳಿಗ್ಗೆ ಹೋಗ್ಬಿಟ್ರು" ಆಂದ್ರು  ರಂಗಪ್ಪ.
"Heart attackಕ, ನಮಗೆ ಗೊತ್ತೇ ಅಗ್ಲಿಲ್ಲಾ,  ಎಲ್ರೂ ಅಲ್ಲೇ ಇದ್ದಿರಾ" ಎಂದೆ.
ವೆಂಕಟಪ್ಪನವ್ರು,  ಅವರ ಎರಡೊ ಕ್ಯೆಯನ್ನು ಮೇಲಕ್ಕೆ ಎತ್ತಿ, ಓ ವಿಧಿಯೇ, ಇದೇನು ನಿನ್ನ ಆಟ ಎನ್ನುವಂತೆ ನಿಂತರು.
"ಬಾಡಿ ಇಲ್ಲಿಗೆ ಬರತ್ತೋ, ಎನೋ ಕೇಳು" ಎಂದು ಕಿವಿಯಲ್ಲಿ ಗೊಣಗಿದರು ನಮ್ಮಣ್ಣ
"ಇವಾಗ ನೀವು ಎಲ್ಲಿದ್ದೀರಾ" ಎಂದೆ, "ಓ ಸರಿ ಕೋರಮಂಗಲಾನ,  ಎಲ್ಲಾ ಮುಗಿಸಿ ಬನ್ನಿ" ಎಂದು ಫೋನ್ ಕಟ್ ಮಾಡಿದೆ.
ಅಷ್ಟರಲ್ಲಿ ಕೆಲವ್ರು, ಕೋರಮಂಗಲಕ್ಕೆ ಹೋಗೋಕಾಗಲ್ಲ ಅಂದ್ರು.
ಇನ್ನೊಬ್ಬರು "ನಮ್ ಮನೆ ಕಡೆ ಒಂದು ಮದುವೆ ಬೇರೆ ಇದೆ, ಇಲ್ಲೇ ಬಂದಿದ್ರೆ ನೋಡ್ ಕೊಂಡ್ ಹೋಗಿ ಸ್ನಾನ ಮಾಡೋಣ ಆಂತಿದ್ದೆ" ಆಂದ್ರು.


ನಾನು ಈಗ ಬಾಯಿ ಬಿಟ್ಟೆ  "ಹೋಗಿರೋದು ಪ್ರಾಸಾದು ಅಲ್ಲ, ಅವ್ರ್ ಮಾವ" ಅಂತ


ಈಗ ಎಲ್ಲರದ್ದೊ ಒಂದೇ ಮಾತು.  "ಪಾಪ ತುಂಬಾ ಒಳ್ಳೇ ಹುಡುಗ, ಒಳ್ಳೇ ಕೆಲಸದಲ್ಲಿದ್ದಾನೆ, ಚೆನ್ನಾಗಿರಲಿ, ದೇವರು ದೊಡ್ಡವನು" ಎನ್ನುತ್ತಾ ಜಾಗ ಖಾಲಿ ಮಾಡಿದರು.


ಮರುದಿನ ಬೆಳಿಗ್ಗೆ, ಓರೆ ನೋಟದಿಂದ ಪ್ರಸಾದು ಮನೆಯನ್ನೊಮ್ಮೆ ನೋಡಣ ಅಂತ ನೋಡಿದೆ.
ಅವರ ಮನೆ ಹೊವಿನವಳು ನಮ್ಮ ಮನೆ ಕಡೆ ತೋರಿಸಿ, ಪ್ರಸಾದುಗೆ ಏನೋ ಹೇಳುತಿದ್ದಳು, ಅವನು ತಲೆ ಚೆಚ್ಚಿಕೊಳ್ಳುತಿದ್ದ!
ನಾನು ಮೆತ್ತಗೆ ಒಳ ನಡೆದೆ.
                                                                                   -ಮಧ್ವೇಶ್