ಪ್ರೀತಿಯಮರ ಮತ್ತು ಇತರೆ ಹನಿಗಳು
ಕವನ
ಸತ್ಯ
ಯಾರು
ನಿಷ್ಠಾವಂತ
ಬದುಕಲ್ಲೆ
ಇದ್ದು
ಕಷ್ಟದ ಜೀವನ
ನಡೆಸುತ್ತಿದ್ದಾರೋ ?
ಅವರಿಂದ
ಇನ್ನೂ
ಸತ್ಯವೆನ್ನುವುದು
ಈ ಭೂಮಿಯಲ್ಲಿ
ಉಳಿದಿದೆಯೆಂದು
ತಿಳಿಯಬಹುದು !
*
ಸ್ವ- ತಂತ್ರ
ಇಂದಿನ
ಪ್ರಜಾಪ್ರಭುತ್ವ
ನೋಡಿ
ಅದರಿಂದ
ಪ್ರಾಮಾಣಿಕತೆ
ಕಲಿತಿರುವೆ
ಕಲಿಯುತ್ತೇನೆ
ಎನ್ನುವಷ್ಟು
ದೊಡ್ಡ
ಮೂರ್ಖತನ
ಇನ್ನೊಂದಿಲ್ಲ!
*
ಪ್ರೀತಿಯಮರ
ಮಾತುಗಳ ನಡುವೆ ಮೋಹ
ಇಣುಕಿ ಬಂತು ಇಂದು ನೋಡೆ
ಜಾಣತನದ ನುಡಿಗಳಿಂದ
ಬೆಸುಗೆ ಭಾಗ್ಯದೊಳಗೆ ಹಾಡೆ
ನದಿಯ ತೀರ ಹೊಲದ ಬದು
ವಿನಲ್ಲಿ ಕೈಯ ಹಿಡಿದು ಕೊಂಡು
ಬಾಚಿತಬ್ಬಿ ನಡೆದ ಚೆಲುವೊಳು
ನಲಿವ ಸೆಡವು ಕಂಡಿತಿಂದು
ಕಾಡು ಮೇಡು ಸುತ್ತಿ ಸುಳಿದು
ಪೇಟೆಯೊಳಗೆ ಅಲೆದು ದಣಿದು
ಮನೆಯ ಸೇರೊ ಸಮಯದಲ್ಲಿ
ಬೇರಾದೆವು ನಾವು ದೂರವಾದೆವು
ಪ್ರೇಮದೊಳಗೆ ಸೇರುತಿರಲು
ಪ್ರೀತಿಯಮರ ಹೇಳುತಿರುವ
ಬದುಕು ನಮಗೆ ಕೊಟ್ಟ ಮಧುರ
ಸವಿಯ ಪಡೆದು ಬಾಳುವ
-ಹಾ ಮ ಸತೀಶ
ಚಿತ್ರ್
- Log in to post comments