ಬದಲಾದ ಮನುಷ್ಯ
ನನಗೆ ಅನ್ನಿಸೋ ಹಾಗೆ ಇವತ್ತು ಹೊಸತನ್ನು ಹುಡುಕ್ತ ಇದಿವಿ ಅಂತ ಅನ್ಕೊಂದಿದಿವಿ. ಆದರೆ ನಾವು ಮಾಡ್ಲಿಕತ್ತಿದ್ದು ಇತಿಹಾಸದ ಮರು ಅನ್ವೇಷಣೆ ಅನ್ನೋದು ನನ್ನ ಅಂಬೋಣ. ನಾವಂತೂ ಇವಾಗ ಈ ಕಲದಾಗ ನಮ್ಮ ಹಿರಿಯರು ಕಂಡು ಹಿಡಿದಿದ್ದನ್ನೇ ಮರು ಅನ್ವೇಷಣೆ ಮಾಡಕತ್ತಿವಿ.ಈ ಥರದ ಮನೋಭಾವಕ್ಕೆ ನಮ್ಮಲ್ಲಿರೋ ಸವಲತ್ತು ಬಹಳ ಮುಖ್ಯ, ಮೊದಲನೆಯದಾಗಿ ಸಂಪರ್ಕ ಕ್ಷೇತ್ರದ ಬೆಳವಣಿಗೆ, ಎರಡನೆಯದಾಗಿ ಮಾಹಿತಿಯ ನಿಲುಕುವಿಕೆ ಕಾರಣ.
ಆಮೇಲೆ, ಏನೇ ಹೊಸ ಮತ್ತು ವೈವಿಧ್ಯತೆ ಹುಟ್ಟಿಕೊಳಿಕ್ಕೆ ಒಂದು ಹೊಸ ನಾಗರಿಕತೆ ಕಾರಣವಾಗುತ್ತಿತ್ತು. ಈಗಿನ ಪರಿಸ್ತಿತಿಯಲ್ಲಿ ಎಲ್ಲ ನಾಗರಿಕತೆಗಳು ಒಂದೇ. ಅಂದಿನ ಜನರ ಹೋರಾಟ ಕೇವಲ ಆಹಾರ, ರಕ್ಷಣೆ, ಸಂತಾನೋತ್ಪತ್ತಿ ಆಗಿತ್ತು. ಆದರೆ ಈಗ ಜೀವನದ ಪ್ರಾಮುಖ್ಯತೆ ಬದಲಾಗ್ಯದ. ಈ ಪ್ರಾಮುಖ್ಯತೆಯ ಬದಲಾವಣೆಗೆ ಹಲವಾರು ಕಾರಣಗಳಿವೆ.ಮೊದಲನೆಯದಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಆದ ಮಹತ್ತರ ಬೆಳವಣಿಗೆ ಮತ್ತು ತಾಂತ್ರಿಕ ಕ್ಷೆತ್ರದಲ್ಲದ ಬೆಳವಣಿಗೆ. ಅದೇ ರೀತಿ ನಾವು ನೋಡಿದಾಗ ಕಲೆಯ ಕ್ಷೇತ್ರದಲ್ಲಿ ಅದರಲ್ಲೂ ಸಾಹಿತ್ಯದ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿನ ಕುಂಠಿತ ಕಾಣ ಸಿಗುತ್ತೆ.
ಇಂದು ಎಲ್ಲ ವೈದ್ಯಕೀಯ ಮತ್ತು ತಾಂತ್ರಿಕ ಬೆಳವಣಿಗೆಗಳು ಮನುಷ್ಯನ ಜೀವ ಉಳಿಸುತ್ತಿದೆಯೇ ಹೊರತು ವ್ಯಕ್ತಿಯ ಆಯುಷ್ಯ ಮತ್ತು ಮೂಲ ಆರೋಗ್ಯವನ್ನಲ್ಲ.
------ರಾಮಚಂದ್ರ