ಬದುಕು ಎಂದರೇನು?

ಬದುಕು ಎಂದರೇನು?

ಈ ಜಗತ್ತಿನ ಗಣ್ಯರ ಅಭಿಪ್ರಾಯದಂತೆ ಒಬ್ಬೊಬ್ಬರದು ಒಂದೊಂದು ರೀತಿ:  

ಬುದ್ಧ ಹೇಳುತ್ತಾನೆ, *"ಪ್ರೀತಿ ಮತ್ತು ಶಾಂತಿ".* 

ದುರ್ಯೋಧನ ಹೇಳುತ್ತಾನೆ, *"ಹಠ ಮತ್ತು ಛಲ".*

ಏಕಲವ್ಯ ಹೇಳುತ್ತಾನೆ, *"ಗುರಿ".

ಯುಧಿಷ್ಠಿರ ಹೇಳುತ್ತಾನೆ, *"ಧರ್ಮ"*

ಶ್ರೀ ಕೃಷ್ಣ ಹೇಳುತ್ತಾನೆ, *"ಸಮದರ್ಶಿತ್ವ".*

ಭೀಷ್ಮ ಹೇಳುತ್ತಾನೆ, *"ಪ್ರತಿಜ್ಞೆ".*

ಒಬ್ಬ ಸಂತ ಹೇಳುತ್ತಾನೆ, *"ಭಕ್ತಿ".*

ಒಬ್ಬ ಸನ್ಯಾಸಿ ಹೇಳುತ್ತಾನೆ, *"ವೈರಾಗ್ಯ".*

ಅಲೆಕ್ಸಾಂಡರ್ ಹೇಳುತ್ತಾನೆ, *"ಯುದ್ಧ".*

ಶ್ರೀಮಂತ ಹೇಳುತ್ತಾನೆ, *"ಮೋಜು ಮತ್ತು ಮಸ್ತಿ".*

ಮಧ್ಯಮ ವರ್ಗದವನು ಹೇಳುತ್ತಾನೆ, *"ಉದ್ಯೋಗ".*

ಹಸಿದವನು ಹೇಳುತ್ತಾನೆ, *"ತನ್ನ ಪಾಲಿನ ಅರ್ಧ ರೊಟ್ಟಿ".*

ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ. 

ಅವರವರ ಆಲೋಚನೆಯಂತೆ ಅವರವರು  ಬದುಕನ್ನು ಸಮರ್ಥಿಸುತ್ತಾರೆ. 

ಬದುಕೆನ್ನುವುದು  ಸುಂದರವಾದ ಅನುಭವ. ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ ಎಲ್ಲವೂ ಅಮೂಲ್ಯ.  ಈ ಯಾವುದೂ ಹಿಂತಿರುಗಿ ಬರುವುದಿಲ್ಲ.  ಒಮ್ಮೆ ಕಳೆದರೆ ಮುಗಿಯಿತು.  ಆದ್ದರಿಂದಲೇ ಪ್ರತಿ ಕ್ಷಣದ ಬದುಕು ನವ ನವೀನ. ಹೀಗೆಯೇ  ನಮ್ಮ ಬದುಕು ಅನಿಶ್ಚಿತ ಕೂಡಾ.  ಮುಂದಿನ ಕ್ಷಣ ಏನೆಂದು ಯಾರಿಗೂ  ತಿಳಿಯದು.  ಈ ಕ್ಷಣವೇ ಪರಮ ಪವಿತ್ರ. ಈ ಕ್ಷಣವನ್ನು ಸಂಪೂರ್ಣ  ಅನುಭವಿಸುವುದೇ  ಬದುಕು. ಸಂಘರ್ಷ, ಮನಸ್ತಾಪ, ಕೋಪ, ದ್ವೇಷ ಇವುಗಳನ್ನು ಕಡಿಮೆ ಮಾಡುತ್ತಾ  ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ, ಮತ್ತು ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ.    ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ.                                  

ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ  ಮಧ್ಯೆ ಸಂತೋಷದಿಂದ , ತೃಪ್ತಿಯಿಂದ ಬದುಕುವುದೇ  ಜೀವನ...!

*ಮುಗುಳ್ನಗುತ್ತಿರಿ. ನಿಮ್ಮ ನರಗಳು ಸಡಿಲಗೊಳ್ಳುತ್ತವೆ.*  

*ಪ್ರಾರ್ಥಿಸುತ್ತಿರಿ. ನಿಮ್ಮ 'ಭಾರ'ಗಳು ಕಡಿಮೆಯಾಗುತ್ತವೆ* 

*ಜೋರಾಗಿ ನಕ್ಕುಬಿಡಿ. ನಿಮ್ಮ ಹೃದಯ ಹಗುರಾಗುತ್ತದೆ.* 

*ಕ್ಷಮಿಸಿಬಿಡಿ. ಕೋಪ, ದ್ವೇಷಗಳು ಕಡಿಮೆಯಾಗುತ್ತದೆ*

ಒಳ್ಳೆಯ ಬದುಕಿನ ಸಂಗಾತಿಗಳಿವು. ಇವುಗಳನ್ನು ಎಂದಿಗೂ ಬಿಟ್ಟು ಬದುಕಬೇಡಿ.

(ಸಂಗ್ರಹ)