ಬನ್ನಿ ಪತ್ರೆ

ಬನ್ನಿ ಪತ್ರೆ

ಕವನ

ಬನ್ನಿ, ಬನ್ನಿ, ಬನ್ನಿ ಬನ್ನಿರೆಲ್ಲಾ.....

ಬನ್ನಿ ಪತ್ರೆ ಹಂಚೋಣ ನಾವೆಲ್ಲಾ

ಸರ್ವರ ಬಾಳು ಬಂಗಾರವಾಗಲೆಂದು

ಹಾರೈಸೋಣ ನಾವೆಲ್ಲಾ ಕೂಡಿಯಿಂದು

 

ಇತಿಹಾಸದ ಪುಟಗಳಲ್ಲಿ ಬನ್ನಿ ಮರವು

" ಪತ್ರೆ ಪತ್ರೆ" ಯಲ್ಲಿ ಅದರ ಸಿರಿತನವು

ಪ್ರೀತಿ, ಪ್ರೇಮ ಭಾವದಲ್ಲಿ ಹೃನ್ಮನವು

ಬೆಸೆಯೋಣ ಭಾವೈಕ್ಯತೆ ಅನುದಿನವು.

 

ಪಾಂಡವರವರ ಪರಾಕ್ರಮದ ಜಯದಲ್ಲಿ

ನ್ಯಾಯ ನೀತಿ,ಸತ್ಯ, ಧರ್ಮದ ವಿಜಯದಲ್ಲಿ

ಅಸುರ ಸಂಹಾರದ ವಿಜಯೋತ್ಸವವು

ಶ್ರೀರಾಮ, ಹನುಮರಿಗೆ ಮಹಾ ಸುದಿನವು.

 

ನವ ದುರ್ಗೆಯರು- ನವ ಭಾವದಲ್ಲವರು

ಹರಸುತ್ತಾ ಸಕಲರನ್ನು ಬಲುಮೆಯಲ್ಲವರು

ನಾಡದೇವಿಯ ದಿವ್ಯದೃಷ್ಟಿ ಅಂಬಾರಿಯಲ್ಲಿ

ಬನ್ನಿ ಮುಡಿಯ ಮಹಿಮೆ ವಿಜಯದಶಮಿಯಲ್ಲಿ.

 

ಬನ್ನಿರಿ ಬನ್ನಿರಿ ಬನ್ನಿರೆಲ್ಲಾ........

ಬನ್ನಿ ಪತ್ರೆ ಹಂಚೋಣ ನಾವೆಲ್ಲಾ

ಸಕಲ ಜೀವರಾಶಿಗೆ ಶುಭವ ಕೋರುತ್ತಾ

ಬನ್ನಿ ಪತ್ರೆ ಹಂಚೋಣ ಪ್ರೀತಿ ಸಾರುತ್ತಾ.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

 

ಚಿತ್ರ್