ಬರೆದೆ ಪದವ ಪೋಣಿಸಿ

ಬರೆದೆ ಪದವ ಪೋಣಿಸಿ

ಕವನ

ಮುರಳಿಯನ್ನು ಬದಿಯಲಿಟ್ಟು

ಹೆರಳ ಹೆಣೆವ ನೆಪದಲಿ

ಕರೆವ ಮೊದಲೆ ಬಂದೆ ನೀನು

ತರುಣಿ ಮನವು ಖುಷಿಯಲಿ

 

ಹರಡಿ ನಿಂತ ಹೆರಳನೆಲ್ಲ

ಕರದಲೊಟ್ಟುಗೂಡಿಸಿ

ಸರಿಯದಂತೆ ನೇಯ್ದ ಜಡೆಯ

ಪರಿಯನೆಂತು ಪೇಳಲಿ

 

ತುರುಬಿನಲ್ಲಿ ಹೂವನಿಟ್ಟೆ

ಮರೆಯಲಾರೆನೀಕ್ಷಣ

ತಿರುಗದಂತೆ ನನ್ನ ತಡೆದು

ಕರದಲಿಟ್ಟೆ ದರ್ಪಣ

 

ಅರಿಯಲಾರೆ ಹರಿಯೆ ನಿನ್ನ

ಬರೆದೆ ಪದವ ಪೋಣಿಸಿ

ಬಿರಿದ ಹೂವ ತಂದು ನಿನ್ನ

ಚರಣಕಿರಿಸಿ ಪೂಜಿಸಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್