ಬಾಳಿಗೊಂದು ಚಿಂತನೆ - 60

ಬಾಳಿಗೊಂದು ಚಿಂತನೆ - 60

* ಮರ್ಯಾದೆ ಸಿಗದ ಜಾಗದಲ್ಲಿ ಚಪ್ಪಲಿಯನ್ನು ಸಹ ಇಡಬಾರದು.

* ದುಡ್ಡಿಲ್ಲದವ ಬಡವನಲ್ಲ. ಗುರಿ ಮತ್ತು ಕನಸು ಇಲ್ಲದವ ನಿಜವಾದ ಬಡವ. ಮೊದಲು ಎಲ್ಲರೂ ಚಾರಿತ್ರ್ಯ ಸರಿ ಇರುವಂತೆ    ನೋಡಿಕೊಳ್ಳೋಣ.

* ಶೀಲವೇ ಬಹು ದೊಡ್ಡ ಸಂಪತ್ತು. ಅದುವೇ ಇಲ್ಲದವರಿಗೆ, ಬೇರೆ ಏನಿದ್ದರೂ ನಗಣ್ಯ. ಶೀಲವು ನವರತ್ನಗಳಿಗಿಂತಲೂ ಮಿಗಿಲು.

* ಸಾಲ ಮಾಡಿ ಶೂಲಕ್ಕೇರದಿರಿ. ಸಾಧಿಸಿ, ಹಿಂತಿರುಗಿ ನೋಡದಿರಿ, ಸದಾ ಮುನ್ನುಗ್ಗಿ.  

* ಭೀತಿಯೇ ದುಃಖಕ್ಕೆ ಕಾರಣ. ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ಹೋರಾಡಿ.

* ಆತ್ಮವಿಶ್ವಾಸವೇ ನಮ್ಮ ಪರಮಾಪ್ತ ಸ್ನೇಹಿತ.

* ಪರಿಪೂರ್ಣತೆಯೇ ನಮ್ಮ ಯಶಸ್ಸಿನ  ಮೆಟ್ಟಿಲು.

* ಜೀವನದಲ್ಲಿ ಸೋತೆ ಎಂದು ದುಃಖಿಸದೆ, ಬೆಳಕಿನ ದಾರಿ ಅರಸುವುದ ಕಲಿಯಬೇಕು.

* ಬಡತನ ಎಂಥ ಕಾಠಿಣ್ಯವನ್ನು ಬೇಕಾದರೂ ಕಲಿಸುತ್ತದೆ.

* ಗುರುಹಿರಿಯರಿಗೆ ತಲೆಬಾಗು, ಸಮಾಜದಲ್ಲಿ ತಲೆತಗ್ಗಿಸುವಂತೆ ಮಾಡದೆ, ತಲೆಯೆತ್ತಿ ನಡೆ.

* ಹಸಿವಿಗೆ ಎಷ್ಟು ಬೇಕೋ ಅಷ್ಟೇ ಉಣ್ಣು. ಉಳಿದದ್ದು ನಮ್ಮದಲ್ಲ.

* ಕೋಪದಲ್ಲಿ ಕೊಯಿದ ಮೂಗು ಮತ್ತೆ ಬಾರದು.

* ಅವಹೇಳನ, ಅಪಹಾಸ್ಯ, ಉದ್ಧಟತನ ಅಣ್ಣ ತಮ್ಮಂದಿರು. ಅವುಗಳ ಸ್ನೇಹ ಮಾಡುವಾಗ ಜಾಗ್ರತೆ ಮತ್ತು ಆಲೋಚನೆಯಿಂದ ವ್ಯವಹರಿಸು.

ಆಕರ:ನಿತ್ಯ ವಾಣಿ ಸಂಗ್ರಹ

-ರತ್ನಾ ಭಟ್.ತಲಂಜೇರಿ

ಚಿತ್ರ: ಜಾನೆಟ್, ಮಂಗಳೂರು