ಬಾಳಿಗೊಂದು ಚಿಂತನೆ -88

ನಾವು ಕೆಲಸ ಮಾಡುವುದನ್ನು ರೂಢಿಗತ ಮಾಡಿಕೊಂಡರೆ ಗಳಿಕೆ ತಾನಾಗಿಯೇ ಬರುವುದು. ಕೆಲಸವೇ ಮಾಡದಿದ್ದರೆ ಗಳಿಕೆ ಎಲ್ಲಿಂದ? ಬದುಕಿನಲಿ ಜಯ ಸಾಧಿಸಲು ಕರ್ಮ, ಕೆಲಸ ಮುಖ್ಯ. ಹವ್ಯಾಸವಾಗಿ ಮಾಡಿಕೊಳ್ಳೋಣ. ನಮ್ಮ ನಮ್ಮ ಬುದ್ಧಿವಂತಿಕೆ, ಕಲಿಯುವಿಕೆಗೆ ತಕ್ಕ ಗಳಿಕೆಯ ಬಗ್ಗೆ ಆಲೋಚನೆಯಿರಲಿ. ‘ಮನೆಯಿಂದ ದೊಡ್ಡ ಮೆಟ್ಟಿಲು’ ಯೋಚಿಸಲೂ ಬಾರದು. ಎಡವಿ ಬೀಳಬಹುದು. ನಮ್ಮ ಜೀವನ ಜೀವಿಸಲು ಇರುವುದೆಂಬ ನಂಬಿಕೆ ನಮಗಿದ್ದರೆ ಕಾಯಕದ ಒಲವು ಮೂಡಬಹುದು. ನಮ್ಮ ಬದುಕು ಎಂಬುದು ಒಂದು ಅನುಭವಗಳ ಸಾಗರ. ಅದರಲ್ಲಿ ಬೇಕಾದ್ದು ಬೇಡದ್ದು ಎಲ್ಲಾ ಇರಬಹುದು. ಬೇಡದ್ದನ್ನು, ನಮಗೆ ಉಪಯೋಗವಿಲ್ಲದ್ದನ್ನು ಬಿಟ್ಟು, ಬೇಕಾದ್ದನ್ನು ಆಯ್ಕೆ ಮಾಡಿಕೊಂಡು ಸಂಸಾರ ಶರಧಿಯನ್ನು ಈಜುತ್ತಾ ಸಾಗುವುದು ಬುದ್ಧಿವಂತಿಕೆ. ನೋವು-ನಲಿವುಗಳ ನಡುವೆ ತೂಗುವ ಪೆಂಡ್ಯುಲಮ್ ತರ ಇರುವ ಬಾಳ ದಾರಿಯಲಿ ಸಾಗೋಣ.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ