ಬಿಡುಗಡೆಯ ಹಾಡುಗಳು (ಭಾಗ ೨೩) - ಸೀತಾತನಯ

ಬಿಡುಗಡೆಯ ಹಾಡುಗಳು (ಭಾಗ ೨೩) - ಸೀತಾತನಯ

ಕಳೆದ ವಾರ ‘ಸೀತಾತನಯ’ ಕಾವ್ಯನಾಮಾಂಕಿತ ಶ್ರೀಧರ್ ಖಾನೋಲ್ಕರ್ ಅವರ ಕವನವನ್ನು ಆಯ್ದು ಪ್ರಕಟ ಮಾಡಿದ್ದೆವು. ‘ದೇಶೀಯ ದುಮದುಮ್ಮೆ’ ಎನ್ನುವ ನೀಳ್ಗವಿತೆಯ ಇನ್ನಷ್ಟು ಭಾಗವನ್ನು ಈ ವಾರ ಪ್ರಕಟ ಮಾಡಲಿದ್ದೇವೆ.

ಆಂಗ್ಲರ ರಾಜ್ಯಭಾರ

ದಾಸ್ಯಪಾಶವು ಬಂದು ಕೊರಳನು ಬಿಗಿದಿತು ನಾಡೆಲ್ಲ ದುಃಖದಿ ಮರುಗುವಂತೆ ।

ಅಮಾ । ವಾಸ್ಯೆಯು ಜಗವನು ಮುತ್ತುವಂತೆ । ಯಮದಾಸ್ಯವು ಜನರನ್ನು

ನುಂಗುವಂತೆ । ಹಾಸ್ಯದ ಮಾತಲ್ಲ ರೈತರ ದಾಸ್ಯವು ಯಮರಾಜನಾಸ್ಯದ ತಲೆಯು

ಮೇಲಾಯ್ತು ॥

 

ಕೂಳಿಲ್ಲದಂತಹ ರೈತರ ಗೋಳನ್ನು ಬಣ್ಣಿಸಬೇಕ್ಯಾರು ಜಗದೊಳಗೇ । ವಿಷ ।

ಚೇಳಿನ ತಾಪವ ಮನದೊಳಗೇ । ನೀವು । ತಿಳಿದುಕೊಳ್ಳಿರಿ ಮಾತು ಒಡ

ಲೊಳಗೇ । ಜೋಳವಿಲ್ಲದ ಬಡ ರೈತರ ಧನವನು ಹೀರುವ ಸರಕಾರ ಸರಕಾರ

ವಲ್ಲಾ ॥

 

ಗವರ್ನರ ಜನರಲ್ಲನೆಂಬುವ ದಾಸಗೆ ಎರಡೂವರಿಲಕ್ಷ ರೂಪಾಯ್ಗಳೂ । ಎಂಟು  ।

ಗವರ್ನರ ಜನರೀಗೆ ಲಕ್ಷಗಳೂ । ಅವರ । ನೂರಾರು । ದಾಸರ ಕೋಟಿಗಳೂ ।

ಎಷ್ಟೆಂದು ಹೇಳಲಿ ಕಷ್ಟದಿ ಹೇಳುವೆ ಕರಡಿಯ ನುಣುಪಾದ ಕೂದಲ

ದಷ್ಟು ॥

 

ಎರಡೆರಡು ಸಾವಿರ ಕಲೆಕ್ಟರ ಜನರಿಗೆ ತಿಂಗಳದೊಳಗಿಷ್ಟು ಬರಿದಾಯಿತು ॥

ನಮ್ಮ । ಕರಿಗಾಲದೊಳು ಪ್ಲೇಗ್ ತಲೆಯೆತ್ತಿತು । ನಾಡ । ಗಾರರು ತೊಳಲುವ

ಕಾಲ ಬಂತು । ಪರದೇಶದಿಂ ಬಂದ ಪರಕೀಯ ಜನರಿಗೆ ಸೂರಿಯಾಯಿತು

ನಮ್ಮ ದ್ರವ್ಯದ ಸುಗ್ಗಿ ॥

 

ಭಾರತ ದೇಶವ ಪರತಂತ್ರ ಕೆಸರೊಳು ಹಾಕಿ ತುಳಿಯುವಂಥ ಬಿಳಿಯರಿಗೆ ।

ನಮ್ಮ । ನೂರಾರು ಸೋಲ್ಜರ ಗೆಳೆಯರಿಗೆ । ಮತ್ತೆ । ಕರಿಯಾಳುಗಳ ಕೋಟಿ 

ಜನಗಳಿಗೆ । ಕರುಣದ ಸರಕಾರ ಒಡಲೊಡೆಯುವ ಹಾಗೆ ಸುರಿದಿತು ರೈತರ

ರಕ್ತದ ಧನವಾ ॥

 

ಕಷ್ಟವ ಮಾಡುತ ಹೊಟ್ಟೆಯ ಹೊರೆಯುವ ಆಂಗ್ಲ ದೇಶದ ಕೀಳು । ಜನ

ಗಳನು ನೀತಿ ಭ್ರಷ್ಟರಾಗಿರುವಂಥ ಮನುಜರನು ಅತೀ । ದುಷ್ಟತನದ 

ಹಾಳು ಮನುಜರನು । ಕಷ್ಟದಿ ಬಾಳುವ ಧರ್ಮವ ದೇಶದಿ ತಡೆಯಲ್ಲದಲೆ

ತಂದು ತುಂಬುತ್ತಲಿಹರೈ ॥

 

ಬಡವರ ಕಡೆಗೊಮ್ಮೆ ನೋಡಿರಿಯೆಂದರೆ ಕಾಲೊಳು ಬೇಡಿಯ ಜಡಿಯುವರು ।

ಕಪ್ಪು । ಕಡಲಿನ ನೀರನು ಕುಡಿಸುವರು । ತಮ್ಮ । ಬಡಿವಾರ ನಾಡೊಳು ನಡಿ

ಸುವರು । ಪೊಡವಿಯೊಳಗೆ ಯಶಬಡೆದಂಥ ಬಡವರ ಒಡಲಿಗೆ ಕರುಣದಿ 

ಬಡೆವರು ಕೇರು ॥