ಬಿಡುಗಡೆ ದೊರಕಿದ ಮೇಲು ಕೂಡ
ಕವನ
ಬಿಡುಗಡೆ ದೊರಕಿದ ಮೇಲು ಕೂಡ
ಬಂಧನದೊಳಗಿರಬೇಕೆ?
ಓ ಭಾರತ ದೇಶದ ಜನಗಳಿರಾ
ಈ ಪುಣ್ಯ ಭೂಮಿಯ ಮಕ್ಕಳಿರಾ ||
ಧರ್ಮದ ಬಂಧನ, ವೇಷದ ಬಂಧನ
ಭಾಷೆಯ ಬಂಧನ ಬೇಕೆ?
ಓ ಭಾರತ ದೇಶದ ಜನಗಳಿರಾ
ಈ ಪುಣ್ಯ ಭೂಮಿಯ ಮಕ್ಕಳಿರಾ ||
ನಾನು ನನ್ನದು ಎಂಬುದನ
ಕೊಂಚ ಮನಸಿನಿಂದ ಆಚೆಗೆ ತಳ್ಳಿರಿ
ದೇಶ ಪ್ರೇಮವೆಂಬುದನ
ನಿಮ್ಮ ಮನಸಿನ ಒಳಗೆ ತುಂಬಿರಿ ||
ಎಷ್ಟೋ ಜನರ ನೆತ್ತರ ಕಾಣಿಕೆ
ನಮ್ಮ ನಾಡಿನ ಬಿಡುಗಡೆಯು
ಕಣ್ಣೀರಿನ ಹೊಳೆಯಲಿ ತೇಲಿ ಬಂದ
ಮುತ್ತದು ನಾಡಿನ ಬಿಡುಗಡೆಯು ||
- Log in to post comments