ಬಿಡುಗಡೆ ದೊರಕಿದ ಮೇಲು ಕೂಡ‌

ಬಿಡುಗಡೆ ದೊರಕಿದ ಮೇಲು ಕೂಡ‌

ಕವನ

ಬಿಡುಗಡೆ ದೊರಕಿದ ಮೇಲು ಕೂಡ‌

ಬಂಧನದೊಳಗಿರಬೇಕೆ?

ಓ ಭಾರತ ದೇಶದ ಜನಗಳಿರಾ

ಈ ಪುಣ್ಯ ಭೂಮಿಯ ಮಕ್ಕಳಿರಾ ||

 

ಧರ್ಮದ ಬಂಧನ‌, ವೇಷದ‌  ಬಂಧನ‌

ಭಾಷೆಯ‌  ಬಂಧನ‌ ಬೇಕೆ?

ಓ ಭಾರತ ದೇಶದ ಜನಗಳಿರಾ

ಈ ಪುಣ್ಯ ಭೂಮಿಯ ಮಕ್ಕಳಿರಾ ||

 

ನಾನು ನನ್ನದು ಎಂಬುದನ‌

ಕೊಂಚ ಮನಸಿನಿಂದ ಆಚೆಗೆ ತಳ್ಳಿರಿ

ದೇಶ ಪ್ರೇಮವೆಂಬುದನ‌ 

ನಿಮ್ಮ ಮನಸಿನ ಒಳಗೆ ತುಂಬಿರಿ ||

 

ಎಷ್ಟೋ ಜನರ ನೆತ್ತರ ಕಾಣಿಕೆ

ನಮ್ಮ ನಾಡಿನ ಬಿಡುಗಡೆಯು

ಕಣ್ಣೀರಿನ ಹೊಳೆಯಲಿ ತೇಲಿ ಬಂದ‌

ಮುತ್ತದು ನಾಡಿನ ಬಿಡುಗಡೆಯು ||

 

ಮುತ್ತದು ಜಾರಿ ಮತ್ತೆ ಒಡೆಯದಾಂಗ‌

ಕಾಯಬೇಕು, ಎಲ್ಲಾ ಕೇಳಿರಿ

ದೇಶದ ಕೀರ್ತಿಯ ಬೆಳಗಿಸಲು

ತ್ಯಾಗದಿಂದ ಎಲ್ಲಾ ಬಾಳಿರಿ ||

 

ಮನಸು ತುಂಬಲಿ, ಕನಸು ತುಂಬಲಿ

ನಮ್ಮ ನಾಡಿನ ಉನ್ನತಿಯು

ಅದ ಸಾಧಿಸಲೋಸುಗ ತುಂಬಲಿ 

ನಮ್ಮ ಹೆಜ್ಜೆ‍‍‍ ಹೆಜ್ಜೆಯಲಿ ಜಾಗ್ರುತಿಯು ||

 

ರಾಮಾಯಣ ನಡೆದ ಈ ನಾಡಿನಲಿ

ಮತ್ತೆ ರಾವಣ ಬಾರದೆ ಇರಲಿ

ಭಾರತ ನಡೆದ ಭವ್ಯ ಭೂಮಿಯಲಿ

ಮಹಾಭಾರತ ಮರುಕಳಿಸದೆ ಇರಲಿ ||

 

ಬಿಡುಗಡೆ ದೊರಕಿದ ಮೇಲು ಕೂಡ‌

ಬಂಧನದೊಳಗಿರಬೇಕೆ?

ಓ ಭಾರತ ದೇಶದ ಜನಗಳಿರಾ

ಈ ಪುಣ್ಯ ಭೂಮಿಯ ಮಕ್ಕಳಿರಾ ||