ಬುದ್ಧಂ ಶರಣಂ ಗಚ್ಛಾಮಿ

ಬುದ್ಧಂ ಶರಣಂ ಗಚ್ಛಾಮಿ

ಬುದ್ಧನೆಂಬೋ ದೇವನಿದ್ದ 

  ಜನಸಾಗರದಿಂದಲೆದ್ದ;

 ಲುಂಬಿನಿಯಿಂದ ಬಂದ

  ಜನಮಲಗಿರಲು ಎದ್ದ!

 

ಸಂಸಾರದಿಂದ ಮೇಲೆದ್ದ

 ನೋವುಗಳನೇ ಉಂಡ

 ಸಿದ್ಧಾರ್ಥ ಗೌತಮನೆಂದ

 ಪಾಪ ಕರ್ಮಗಳಿಂದೆದ್ದ!

 

ಬೋಧಿವೃಕ್ಷದಡಿ ಕುಳಿತಿದ್ದ

 ಜ್ಞಾನೋದಯದಿಂದೆದ್ದ;

ಸಂಘಕೆ ನಾನು ಶರಣೆಂದ

 ನಾ ದೇವರೇ ಅಲ್ಲವೆಂದ!

 

ಆಸೆಯಿಂದ ದುಃಖವೆಂದ

 ಅಹಿಂಸೆಯನು ಸಾರಿದ;

ಶ್ರೇಷ್ಠ ದಾರ್ಶನಿಕನವನಾದ

   ಜ್ಞಾನದಲಿ ಪುಟಿದೆದ್ದ!

 

ಸಾಕ್ಷಾತ್ಕಾರವೇ ನಿಜವೆಂದ

 ಶರಣಂ ಗಚ್ಛಾಮಿ ಎಂದ;

ಮಾನವ ಧರ್ಮವ ಸಾರಿದ

ಮುಕ್ತಿಮಾರ್ಗಕೆ ಶರಣೆಂದ!

-ಕೆ ನಟರಾಜ್ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ