ಬೆಂಗಳೂರಿನ ಮೊದಲ ಸುರಂಗ ಯೋಜನೆಗೆ ಹಲವು ಸವಾಲು

ಸಂಚಾರ ದಟ್ಟಣೆಯ ಕಾರಣದಿಂದ ಕುಖ್ಯಾತಿಗೀಡಾಗಿರುವ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಸುರಂಗ ರಸ್ತೆ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಐಟಿ ಕಾರಿಡಾರ್ನಲ್ಲಿ ಬರುವ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ೧೬.೭ ಕಿ.ಮೀ. ಉದ್ದದ ಮಾರ್ಗವನ್ನು ೧೭,೭೮೦ ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. ಬೆಂಗಳೂರು ಕರ್ನಾಟಕದ ಆರ್ಥಿಕ ಬೆನ್ನೆಲುಬು. ರಾಜ್ಯದ ಒಟ್ಟಾರೆ ತೆರಿಗೆ ಸಂಗ್ರಹಣೆಯಲ್ಲಿ ಸಿಂಹಪಾಲು ನೀಡುವ ನಗರದಲ್ಲಿ ಸಂಚಾರ ದಟ್ಟಣೆಯಂತಹ ಸಮಸ್ಯೆ ನಿವಾರಣೆ ಸೇರಿದಂತೆ ಮೂಲಸೌಲಭ್ಯ ಯೋಜನೆಗಳು ಜಾರಿಯಾಗಬೇಕು ಎಂಬುದು ನಗರದಲ್ಲಿ ನೆಲೆಸಿರುವವರ ಅತ್ಯಂತ ಹಳೆಯ ಕೂಗು. ಅದಕ್ಕೆ ಸರ್ಕಾರವೇನೋ ಸ್ಪಂದಿಸುತ್ತಿದೆ. ಆದರೆ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣವಾಗುತ್ತಿರುವ ರಸ್ತೆ ಸುರಂಗ ಕಾಮಗಾರಿ ಅಷ್ಟು ಸುಲಭವಾಗಿ ಇದ್ದಂತೆ ಕಾಣುತ್ತಿಲ್ಲ. ಸಾಲು ಸಾಲು ಸವಾಲುಗಳನ್ನೇ ಎದುರಿಸಬೇಕಾಗಿದೆ. ಅದಕ್ಕೂ ಮಿಗಿಲಾಗಿ ಈ ಯೋಜನೆ ಜಾರಿಗೆ ಸರ್ಕಾರ ನಿಗದಿಪಡಿಸಿಕೊಂಡಿರುವ ಮೂರು ವರ್ಷಗಳ ಕಾಲಮಿತಿ. ಅಷ್ಟರೊಳಗೆ ಈ ಯೋಜನೆ ಸಾಕಾರಗೊಂಡರೆ ಸಂಚಾರ ದಟ್ಟಣೆ ತಗ್ಗಲೂಬಹುದು.
ವಿಪರೀತ ದಟ್ಟಣೆಯಿಂದ ಬೆಂಗಳೂರು ನರಳುತ್ತಿದೆ. ಅದನ್ನು ತಗ್ಗಿಸುವ ಸಲುವಾಗಿ ಸುರಂಗ ಮಾರ್ಗ ನಿರ್ಮಿಸಿದರೂ ಅದರಲ್ಲಿ ಎಲ್ಲರೂ ಓಡಾಡಲು ಕಷ್ಟವಾಗಬಹುದು. ಏಕೆಂದರೆ, ನಿರ್ಮಾಣಕ್ಕೆ ಮಾಡುವ ವೆಚ್ಚವನ್ನು ಸರ್ಕಾರ ಟೋಲ್ ರೂಪದಲ್ಲಿ ಸಂಗ್ರಹಿಸಲಿದೆ. ನಿಗದಿಪಡಿಸಿಕೊಂಡಿರುವ ಮೂರು ವರ್ಷಗಳ ಕಾಲಮಿತಿ. ಅಷ್ಟರೊಳಗೆ ಈ ಯೋಜನೆ ಸಾಕಾರಗೊಂಡರೆ ಸಂಚಾರ ದಟ್ಟಣೆ ತಗ್ಗಲೂಬಹುದು.
ಆದರೆ ಅದು ಸಾಧ್ಯವೇ? ಈಗಾಗಲೇ ಮೆಟ್ರೋ ರೈಲು ಯೋಜನೆಗಾಗಿ ಹಲವು ಸುರಂಗಗಳನ್ನು ನಿರ್ಮಾಣ ಮಾಡಲಾಗಿದೆ. ಆ ಯಾವ ಕಾಮಗಾರಿಗಳೂ ಗಡುವಿನೊಳಗೆ ಮುಗಿದಿಲ್ಲ. ಅದೂ ಅಲ್ಲದೆ ಈಗಾಗಲೇ ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಂತಿರುವ ಸ್ಥಳದ ಭೂಗರ್ಭದಲ್ಲಿ ಸುರಂಗ ತೋಡುವುದರಿಂದ ಎದುರಾಗುವ ಸಮಸ್ಯೆಗಳು ಸಾಕಷ್ಟಿವೆ.
ಹೊಸದಾಗಿ ನಿರ್ಮಾಣವಾದ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಮಳೆ ನೀರು ತುಂಬಿಕೊಂಡು ಸಮಸ್ಯೆಯಾಗಿತ್ತು. ಹಿಮಾಚಲಪ್ರದೇಶದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಿರುವ ಅಟಲ್ ಸುರಂಗ ಕೂಡ ಇಂತಹುದ್ದೇ ಸಮಸ್ಯೆಗೆ ಸಿಲುಕಿತ್ತು. ಮಹಾನಗರದಲ್ಲಿ ಅದೂ ಗಂಟೆಗೆ ಸಹಸ್ರಾರು ವಾಹನಗಳು ಓಡಾಡುವ ಮಾರ್ಗದಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿಪರೀತ ದಟ್ಟಣೆಯಿಂದ ಬೆಂಗಳೂರು ನರಳುತ್ತಿದೆ. ಅದನ್ನು ತಗ್ಗಿಸುವ ಸಲುವಾಗಿ ಸುರಂಗ ಮಾರ್ಗ ನಿರ್ಮಿಸಿದರೂ ಅದರಲ್ಲಿ ಎಲ್ಲರೂ ಓಡಾಡಲು ಕಷ್ಟವಾಗಬಹುದು. ಏಕೆಂದರೆ, ನಿರ್ಮಾಣಕ್ಕೆ ಮಾಡುವ ವೆಚ್ಚವನ್ನು ಸರ್ಕಾರ ಟೋಲ್ ರೂಪದಲ್ಲಿ ಸಂಗ್ರಹಿಸಲಿದೆ. ಅದು ದುಬಾರಿಯಾದರೆ ಜನರು ಆ ರಸ್ತೆಯಿಂದಲೇ ದೂರ ಉಳಿಯುವ ಸಾಧ್ಯತೆ ಇದೆ. ಸರ್ಕಾರ ಈ ಬಗ್ಗೆ ಇನ್ನಷ್ಟು ವಿಸ್ತ್ರತವಾಗಿ ಸಮಾಲೋಚನೆ ನಡೆಸಿ ಮುಂದಡಿ ಇಡುವುದು ಒಳಿತು.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೪-೦೫-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ