ಬೆತ್ತಲೆ ಜಗತ್ತು ೧೬

ಬೆತ್ತಲೆ ಜಗತ್ತು ೧೬

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರತಾಪ್ ಸಿಂಹ
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ಜುಲೈ ೨೦೧೩

ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನಾರನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ ಒದಗಿಸುತ್ತಿದ್ದುದು ಇವರ ಹೆಗ್ಗಳಿಕೆ. 

ಈ ಪುಸ್ತಕದಲ್ಲಿ ೨೮ ಅಧ್ಯಾಯಗಳಿವೆ. ಶತಾವಧಾನಿ ಗಣೇಶ್, ಸರ್ದಾರ್ ಪಟೇಲ್, ನೇತಾಜಿ ಸುಭಾಷ್ ಚಂದ್ರ ಭೋಸ್, ನರೇಂದ್ರ ಮೋದಿ, ಟಿಪ್ಪು ಸುಲ್ತಾನ್, ರಾಹುಲ್ ಗಾಂಧಿ, ಯಡ್ಯೂರಪ್ಪ, ಅಂಬೇಡ್ಕರ್ ಮುಂತಾದವರ ಬಗ್ಗೆ ಅಪರೂಪದ ಮಾಹಿತಿಗಳು ಇವೆ. ಇದರ ಜೊತೆಗೆ ಫುಟ್ಬಾಲ್ ಆಟಗಾರ ಲಿಯೋ ಮೆಸ್ಸಿ, ಸ್ವಾಮೀ ವಿವೇಕಾನಂದ, ಸಚಿನ್ ತೆಂಡೂಲ್ಕರ್ ಬಗ್ಗೆಯೂ ಮಾಹಿತಿಗಳಿವೆ. 

ಈ ಪುಸ್ತಕದಲ್ಲಿರುವ ಬರಹಗಳನ್ನು ೨೦೧೨-೧೩ರ ವರ್ಷದಲ್ಲಿ ಪತ್ರಿಕೆಗಳಲ್ಲಿ ಅಂಕಣ ರೂಪದಲ್ಲಿ ಪ್ರತಾಪ್ ಸಿಂಹ ಬರೆದಿದ್ದಾರೆ. ಪ್ರತೀ ಲೇಖನಕ್ಕೆ ಪೂರಕ ಛಾಯಾ ಚಿತ್ರಗಳಿವೆ. ಪುಸ್ತಕಕ್ಕೆ ಅಂದಿನ ಮುಖ್ಯಮಂತ್ರಿಗಳ ಮಾಧ್ಯಮ ಸಲಹಗಾರರಾಗಿದ್ದ ಆರ್.ಪಿ.ಜಗದೀಶ್ ಹಾಗೂ ಗುಲ್ಬರ್ಗಾದ ಸ.ಸ.ನರಸಣಗಿ ಇವರ ಬೆನ್ನುಡಿಗಳಿವೆ. ಸುಮಾರು ೨೦೦ ಪುಟಗಳ ಈ ಪುಸ್ತಕವನ್ನು ಪ್ರತಾಪ್ ಸಿಂಹ ಇವರು ಮೈ.ಚ.ಜಯದೇವರು ಇವರಿಗೆ ಅರ್ಪಿಸಿದ್ದಾರೆ.