ಬೆಳಕು...

ಬೆಳಕು...

ಕವನ

ಒಳಗಿರುವ ಹುಳುಕುಗಳ ಹುಡುಕಿ ಗುಡಿಸದೇ ಬೆಳಕು/

ತಳಹಿಡಿದ ಖುಷಿಗಳನು ಮರಳಿ ಕೊಡಿಸದೇ ಬೆಳಕು/

 

ನೆರವಾದವರ ನೆರಳ ಮರೆತ ಮಂದಿಯ ನೆನಪು ಯಾಕೆ/

ಉತ್ತಮರ ಬಾಳಲಿ ಇಳಿದು ಮೆರವಣಿಗೆ ನಡೆಸದೇ ಬೆಳಕು/

 

ಗೆಲುವುಗಳ ಕೊಲುವವರ ಕೊರಳಿಗೇತಕೆ ಜಯದ ಮಾಲೆ/

ನೊಂದ ಎದೆಯಲಿ ಗೆಲುವಿನ ರಂಗೋಲಿ ಬಿಡಿಸದೇ ಬೆಳಕು/

 

ಮುಳ್ಳುಗಳ ದಾರಿಯನು ಮಾಡಿದವರ ಮೇಲೇಕೆ ಸೇಡು/

ಕಲ್ಮಷದ ಕೊಳದಿಂದ ಮೇಲೆತ್ತಿ ಮುಕ್ತಿ ಕೊಡಿಸದೇ ಬೆಳಕು/

 

ಕಾಲಹರಣವು ಸೋಲ ಸಾಲಾಗಿದೆ ಕೃಷ್ಣನಿಗಿದೆ ಅರಿವು/

ಜ್ಞಾನದ ಕಾವಲಲಿ ಮೌಢ್ಯಕೆ ಬೇಡಿ ತೊಡಿಸದೇ ಬೆಳಕು/

 

- ಕಾ.ವೀ.ಕೃಷ್ಣದಾಸ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್