ಬೇವು ಬೆಲ್ಲವ ಮೆಲ್ಲುತ...

ಬೇವು ಬೆಲ್ಲವ ಮೆಲ್ಲುತ...

ಕವನ

ಯುಗದೊಂದಿಗೆ ಜಗ ಕಂಡಿತು

ಮನ ಮನವೂ ಅರಳಿತು/

ವನ ಸೊಬಗೊಳು ಕೆಂಪೇರಲು

ಪಕ್ಷಿ ಸಂಕುಲ ಹಾಡಿತು//

 

ಪ್ರತಿವರುಷವು ಬೆಳಕಾಯಿತು

ಸೌರಮಾನವು ಉದಿಸಿತು/

ಯುಗಾದಿಯು ಹೊಸ ಹುರುಪಲಿ

ಜಗದ ತುಂಬಾ ನಡೆಯಿತು//

 

ಹೊಸಬಟ್ಟೆಯ ತೊಟ್ಟ ಜನರದು

ಹೊಸ ಪಂಚಾಂಗವನಿಟ್ಟರು/

ಬೆಳೆದ ಬೆಳೆಗಳನೆಲ್ಲ ಇರಿಸುತ

ದೇವ ಪೂಜೆಯ ಮಾಡುತ//

 

ವರುಷದಿಂದಿನ ತಪ್ಪನೆಲ್ಲವ

ಮರೆತು ಹೊಸತನ ತುಳಿಯುತ/

ಗಂಧ ಚಂದನ ತಳಿರು ತೋರಣ

ಬೇವು-ಬೆಲ್ಲವ ಮೆಲ್ಲುತ/

 

ಸಿಹಿ-ಕಹಿಯನು ಉಣ್ಣುತುಣ್ಣುತ

ಸಮಾನ ದೃಷ್ಟಿಲಿ ನೋಡುತ/

ಕಾಲಮಾನದ ಆದಿ ದಿನವಿದು

ಸೃಷ್ಟಿಯ ಆರಂಭವೆನ್ನುತ//

 

ಚೈತ್ರಮಾಸದ ಶುಕ್ಲಪಕ್ಷದ

ಪಾಡ್ಯ ದಿನ ವಿಶೇಷವೆನ್ನುತ/

ಹಿಂದೂ ಬಾಂಧವರ   ಸಂಭ್ರಮ

ಕುಲಕೋಟಿಗೆ  ಸಡಗರವೆನ್ನುತ//

 

ಕಹಿಬೇವಿನ ಎಲೆಯ ಸ್ನಾನದಿ

ತನುವ ಕಾಂತಿಯು  ಹೊಳೆಯುತ/

ಬಡವ-ಬಲ್ಲಿದ ಭೇದವಿಲ್ಲದ

ಬುವಿಯೊಳು ಸ್ವರ್ಗವೆನ್ನುತ//

 

ಚಿಣ್ಣರೆಲ್ಲರು ಕುಣಿದು ಸುತ್ತಲ

ಹಿರಿಯ ಜೀವಕೆ ನಮಿಸುತ/

ಜೀವ ಜೀವನ ತನುವ ಮನಸಿಗು

ಯುಗಾದಿ ಬಂದಿತು ಹರಸುತ//

 

-ರತ್ನಾ ಕೆ.ಭಟ್,ತಲಂಜೇರಿ, ಪುತ್ತೂರು

ಚಿತ್ರ ಕೃಪೆ; ಇಂಟರ್ನೆಟ್ ತಾಣ

ಚಿತ್ರ್