ಭಾಸ್ಕರ ಎಂಬ ಗಝಲ್
ಕವನ
ಬೆಳಗಿನ ತಮಂದ ಸರಿಸುತ ಬಂದನು ಭಾಸ್ಕರ
ಬೆಳ್ಳಿಯ ಬೆಳಕನು ಚೆಲ್ಲುತ ನಿಂದನು ಭಾಸ್ಕರ||೨||
ಬೆಟ್ಟಗುಡ್ಡ ಗಿಡಮರ ಎಲ್ಲವೂ
ನವಚೈತನ್ಯ ಪಡೆದವು
ನೆಟ್ಟಿಹ ಸಸಿಯಲಿ ಮೊಳಕೆ ತಂದನು ಭಾಸ್ಕರ||೨||
ಜಗದ ಜನಕೆ ಜಡವನು ತೊಲಗಿಸಿ ಸಲುಹಿದ
ಜೀವಕೋಟಿಗೆ ಶಕ್ತಿಯ ನೀಡಿ
ನಿಶ್ಯಕ್ತಿ ಕೊಂದನು ಭಾಸ್ಕರ||೩||
ನೇಸರನ ಬಲದಿಂದ ಜೀವನಚಕ್ರ ನಿತ್ಯವು ಸಾಗಿದೆ.
ನರರಿಗೆಲ್ಲ ಸೋಮಾರಿಯಾಗದೆ
ದುಡಿಯಿರಿ ಎಂದನು ಭಾಸ್ಕರ||೪||
ಅರುಣನ ಮಾತಿಂದ ನಿರಾಸೆ ಮನದಿ ಬಿಜಲಿ ಮೂಡಿತು
ಕರುಣಾಕರ ಸರ್ವಜೀವಿಯ
ಹೃದಯದಿ ಮಿಂದನು ಭಾಸ್ಕರ||೫||
*ಶ್ರೀ ಈರಪ್ಪ ಬಿಜಲಿ*
ಚಿತ್ರ್
