ಭಿಕ್ಷುಕರಿಗೆ ದಾನ ನೀಡುವುದು ತಪ್ಪಾ?

ಭಿಕ್ಷುಕರಿಗೆ ದಾನ ನೀಡುವುದು ತಪ್ಪಾ?

ಇಂಗ್ಲೆಂಡಿನಲ್ಲಿ ಸಂಚರಿಸುತ್ತಿದ್ದಾಗ ಸ್ವಾಮಿ ವಿವೇಕಾನಂದರನ್ನು, ದಾನ ಮಾಡುವುದರಿಂದ ಸೋಮಾರಿಗಳಿಗೆ ಉತ್ತೇಜನ ಕೊಟ್ಟಂತಾಗುವುದಿಲ್ಲವೇ ಎಂದು ಒಬ್ಬ ಪ್ರಶ್ನಿಸಿದ. ನಿಮ್ಮ ನೆಲೆಗಟ್ಟಿನಿಂದಲೇ ಈ ಸಮಸ್ಯೆಯನ್ನು ನೋಡೋಣವೆಂದು ಹೇಳಿ ಸ್ವಾಮಿ ವಿವೇಕಾನಂದರು ಹೀಗೆ ಉತ್ತರಿಸಿದರು. ಒಂದು ವೇಳೆ ನೀವು ಭಿಕ್ಷುಕರಿಗೆ ದಾನ ಮಾಡುವುದು ದಂಡವೆಂದುಕೊಂಡು ಎಲ್ಲರೂ ದಾನ ಮಾಡುವುದನ್ನೇ ನಿಲ್ಲಿಸಿಬಿಡುತ್ತೀರೆಂದುಕೊಳ್ಳೋಣ. ಆಗ ಏನಾಗುತ್ತದೆ, ಕೆಲಸ ಮಾಡಲು ಶ್ರದ್ದೆಯಿಲ್ಲದವನು ತನಗೆ ಯಾರೂ ಭಿಕ್ಷೆ ಹಾಕುತ್ತಿಲ್ಲವೆಂದು ಕಷ್ಟಪಡದೇ ಹಣ ಸಂಪಾದಿಸುವ ಸುಲಭ ಮಾರ್ಗವಾದ ಕಳ್ಳತನಕ್ಕೆ ಇಳಿಯುತ್ತಾನೆ. ಆಗ ನಾವು ನಮ್ಮ ವಸ್ತುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸ ಬೇಕಾಗುತ್ತದೆ ಮತ್ತು ಹಲವು ವೇಳೆ ನಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುತ್ತೇವೆ. ಹೀಗಾಗಿ ನಮ್ಮ ವಸ್ತುಗಳನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪೋಲಿಸ್ ವ್ಯವಸ್ಥೆ ಬೇಕಾಗುತ್ತದೆ ಮತ್ತು ಸಿಕ್ಕಿಹಾಕಿಕೊಂಡ ಕಳ್ಳರನ್ನು ಬಂಧಿಸಿಡಲು ಹೆಚ್ಚಿನ ಜೈಲುಗಳು ಹಾಗು ಸಿಬ್ಬಂದಿಯನ್ನು ಸರ್ಕಾರ ನೇಮಕಮಾಡ ಬೇಕಾಗುತ್ತದೆ. ಇದಕ್ಕೆಲ್ಲಾ ಸಂಪನ್ಮೂಲಗಳನ್ನು ಸರ್ಕಾರ ನಮ್ಮ ಮೇಲೆ ಸುಂಕ ವಿಧಿಸಿ ವಸೂಲು ಮಾಡುತ್ತದೆ; ಆಗ ನಾವು ಪರೋಕ್ಷವಾಗಿ ಇನ್ನೂ ಹೆಚ್ಚಿನ ಹಣವನ್ನು ತೆರಬೇಕಲ್ಲವೇ. ಅಲ್ಪ ದಾನದಿಂದಾಗುವ ಕಾರ್ಯಕ್ಕೆ ಹೆಚ್ಚಿನ ಸುಂಕವನ್ನೇಕೆ ಕಟ್ಟಬೇಕು ಆಲೋಚಿಸಿ ಎಂದರಂತೆ.
 

Comments