ಮತ್ತಷ್ಟು ಹನಿಗಳು...!

ಮತ್ತಷ್ಟು ಹನಿಗಳು...!

ಕವನ

ಮಹಾ ಸಾಗರ...

ವಿಶಾಲ ಸಾಗರದ

ಗಾಂಧಿಯೆಂಬ

ಮಹಾತ್ಮನನೇ

ಈ ಜಗ ಮರೆತು

ಮೋಜಿನಲಿ

ಮೈ ಮರೆತಿರುವಾಗ...

 

ಪರಿಮಿತಿಯ

ಬಾವಿಯಲಿರುವ

ಮದೋದಕ

ಮಂಡೂಕಗಳ

ಸ್ಥಿತಿಯದೇನೋ

ಮಹದೇಶ್ವರಾ...?

***

ನಮ್ಮದೇನು ಮಹಾ...?

ಬಾ ಪ್ರಿಯೇ-

ವಿಶ್ವದ ಅತಿರಥ

ಮಹಾರಥರಾದ

ಆಮ್ಲಜನಕ

ಇಂಗಾಲ

ಜಲಜನಕಗಳೆಂಬ ಹವಾ...

 

ಸೋತು ಸಹಕರಿಸಿ

ಸಹ ಬಾಳ್ವೆಯಲಿ ಬೆರೆತು

ಸಹಸ್ರ ಸಹಸ್ರ

ವಸ್ತುಗಳ ಸೃಷ್ಟಿಗೆ

ಕಾರಣರಾಗಿಹರಲ್ಲ-

ನಮ್ಮದೇನು ಮಹಾ...?

***

ತೊಳೆಯೆ ಬಾ...

ಎನ್ನ

ಹೊರಗೆಲ್ಲಿದೆ

ಕೊಳೆ...?

ಅಂತರಂಗದಲ್ಲಿಹುದೇ

ಕೊಳೆಯ

ಹೊಳೆ...

 

ನನ್ನ

ಅಂತರಂಗ

ಬಹಿರಂಗಗಳ

ತೊಳೆಯ ಬಾ

ಓ ಸದ್ಬುದ್ಧಿಯ

ಮಳೆ!

***

ಅಸಾಧ್ಯ 

ನನ್ನ ನೋವು-ನಲಿವು

ಭಾವವ ನೀನರ್ಥ

ಮಾಡಿಕೊಳ್ಳುವುದು

ಅಷ್ಟು

ಸುಲಭವಲ್ಲ

ಗೆಳೆಯಾ...

 

ನನ್ನಂತರಾಳಕೆ

ನೀನಿಳಿಯಲಾರೆ;

ನೀನಿಳಿದೊಡೆ-

ನಾನಾಗಿಬಿಡುವೆ!

ಈ ಜನ್ಮದಲಿ

ಆದಾಗದು ತಿಳಿಯ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್