ಮತ್ತೊಂದಿಷ್ಟು ಹನಿಗಳು
ನಾನು ಯಾರನ್ನು
ನನ್ನಷ್ಟಕ್ಕೇ ನಂಬೆನು
ಸಾವ ದಿನವು !
ಕಲ್ಲಿಗೂ ಜೀವ
ಬರುತ್ತದೆ ನೋಡಯ್ಯಾ
ಬಿಸಿಯಾದಾಗ !
ಉಟ್ಟ ಬಟ್ಟೆಗೆ
ಇರುವ ಬೆಲೆಯಿಂದು
ಮನುಜಗಿಲ್ಲ !
ರಸ್ತೆಯಲ್ಲಿಯೆ
ಉಗಿಯುತ್ತಾರೆ ಜನ
ತಾಂಬೂಲವನ್ನು !
ಕಷ್ಟದಲ್ಲಿಹ
ಜನರಿಗೆ ಸ್ಪಂಧಿಸಿ
ಜಾಣರಾಗಿರಿ !
ಬಾಳು ಎಂದರೆ
ದಾರಿಯಲ್ಲಿ ಸಿಗುವ
ಕಲ್ಲು ಮುಳ್ಳುವು !
ಚಿಂತೆಯಿಲ್ಲದೆ
ಸಾಗಿದವನಿಗಂತು
ನಿಂತಲ್ಲೆ ನಿದ್ರೆ !
ನಾನು ಕೋತಿಯು
ಸಂಸಾರ ನಡೆಸುವ
ಜವಾಬ್ದಾರಿಲಿ !
ಕೋಪ ತಾಪವು
ಸಲ್ಲದೆಂದಿಗು ತಿಳಿ
ಸ್ನೇಹಿಯಾಗೆಂದು !
ವಿಮರ್ಶೆಯಲಿ
ಕವಿ ಬೆಳಗಬೇಕು
ಬಾಡ ಬಾರದು !
ಭಟ್ಟಂಗಿಗಳ
ಬರಹಗಳ ನಡುವೆ
ನಾವಿರುವೆವು !
ಬರೆದುದೆಲ್ಲವು
ಸಾಹಿತ್ಯವಲ್ಲ, ಸತ್ಯ
ಕಲಿಯಬೇಕು !
ಕೃತಿ ಚೌರ್ಯದ
ಕರಾಮತ್ತಿನ ನಡೆ
ಪ್ರಶಸ್ತಿ ಕಡೆ !
***
ಹೀಗೆ
ಹಲವಾರು
ವಿಮರ್ಶಕರು
ಸಾಹಿತ್ಯವ ಕೊಂದಿಲ್ಲ
ಬದಲಿಗೆ
ಬಾಡಿಸಿದ್ದಾರೆ !
***
ಮುಕ್ತಕ
ಉದಯಿಸಿದ ಸೂರ್ಯನಂತಿರುತಲೇ ನೀನಿಂದು
ಹದವಿರುವ ಭೂಮಿಯನು ಉಳುಮೆಯನು ಮಾಡು|
ಕದವನ್ನು ಹಾಕದೆಯೆ ಅತಿಥಿಯನು ಸತ್ಕರಿಸು
ಮುದುಕನಾಗುವ ಮೊದಲು --- ಛಲವಾದಿಯೆ||
***
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
