*ಮಧು ವಿಹಾರಿ* - ಒಂದು ಭಾವಗೀತೆ
ಕವನ
ಭೃಂಗದಂತೆ ನಲಿದು ಬಂದೆ
ಮಧುವ ನೀನು ಸೇರಲು
ಕಂಗಳಲ್ಲಿ ನನ್ನ ಸೆಳೆದೆ
ಒಲವ ಗೀತೆ ಹಾಡಲು
ತನುವನಪ್ಪಿ ಮನವನಪ್ಪಿ
ಜೀವ ಜೀವ ಬೆರೆಯಲು
ಬಾಳಜೋಡಿಯಾಗಿ ನೀನು
ನನ್ನ ಹೃದಯ ಅರಿಯಲು
ಜೀವ ವೀಣೆ ನುಡಿಸಿ ಕರೆದೆ
ಒಲವಿನಮೃತ ಉಣಿಸಿದೆ
ಒಂದೆ ರಾಗ ಒಂದೆ ತಾಳ
ಬಾಳ ದೋಣಿ ಸಾಗಿದೆ
ಚಲುವ ಚಿನ್ನ ನೀನೆ ರನ್ನ
ಬಾಳ ಜ್ಯೋತಿ ಬೆಳಗಿದೆ
ನಿನ್ನ ಧ್ಯಾನದಲ್ಲಿ ಮನವು
ಹಗಲು ಇರುಳು ಮುಳುಗಿದೆ
-*ಶಂಕರಾನಂದ ಹೆಬ್ಬಾಳ*
ಚಿತ್ರ: ಇಂಟರ್ನೆಟ್ ಕೃಪೆ
ಚಿತ್ರ್
- Log in to post comments