ಮುನಿದಿಹ ಚುಕ್ಕಿಯೇ?
ಕವನ
ಚಂದಿರನೂರಿನ ಚಂದದ ತಾರೆಗೆ
ಬಂದಿತೆ ಮನದಲಿ ಮುನಿಸು
ನೊಂದಿಹ ತರವಿದೆ ಬಂಧವು ಕಳಚಿತೆ
ಕುಂದಿತೆ ಒಲವಿನ ಕನಸು
ಕಂಪನು ಬೀರುವ ಕೆಂಪಿನ ಚುಕ್ಕಿಗೆ
ಕಂಪನ ತರಿಸಿತೆ ಗಗನ
ಸೊಂಪಿನ ಬಾನಲಿ ರಂಪವ ಮಾಡಿತೆ
ತಂಪಿದು ಎನಿಸಿತೆ ತಾಣ
ಚೆಲುವಿನ ವದನದೆ ಗೆಲುವದು ಕಾಣದೆ
ಕುಲವನು ತೊರೆಯುತ ಬಂತೆ?
ಛಲದಲಿ ಬಿರಿದಿಹ ಚೆಲುವಿನ ಹೂವಿದು
ಒಲವಲಿ ನೋಡುತ ನಿಂತೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
- Log in to post comments