ಮೂರು ಹನಿಗಳು...!

ಮೂರು ಹನಿಗಳು...!

ಕವನ

೧. ಸಲಹೆ

ಉದರದೊಳಗಿನ ಭ್ರೂಣ

ಧ್ಯಾನಸ್ಥ

ಮುನಿ...!

ಅನುಭವ ಕೊಟ್ಟು ಪಡೆದು

ಜ್ಞಾನಿಯಾಗು ನೀ!

 

ಬೀಜದ ಸ್ವಗತ 

 ಹನಿಯೊಳಗಿತ್ತೇ

ಬೆಳಕ ಸುಳಿ...

ಕಳಚಿ ಬಿಟ್ಟಿತ್ತಲ್ಲಾ

ಕತ್ತಲ ಸರಪಳಿ!

 

ಅಧ್ಯಯನ 

ಎರೆಹುಳದ

ಒದ್ದಾಟ ರೈತನ

ಹೃದಯ ಹಿಂಡಿತು!

ದಪ್ಪ ಪುಸ್ತಕದೊಳಗೆ

ಬೆಳೆಯಿತು!

-’ಪದ್ಮ’ ಬೆಂಗಳೂರು

ಚಿತ್ರ ಕೃಪೆ: ಅಂತರ್ಜಾಲ ತಾಣ

ಚಿತ್ರ್