ಯಶುಪ್ರಿಯರ ಐದು ಹನಿಗಳು

ಯಶುಪ್ರಿಯರ ಐದು ಹನಿಗಳು

ಕವನ

ಮನಸ್ಸು

ಅವನು ಸಿದ್ಧನಿರಲಿಲ್ಲ

ತಪ್ಪೊಪ್ಪಿ ಬಾಗಲು..

ಟೀಕೆಗಳು ಬರುತ್ತಲೇ 

ಮುಚ್ಚಿದ ಬಾಗಿಲು.!

 

ಸಾಮರಸ್ಯ

ಒಗಟು ಒಗಟಾಗಿರಲಿ

ಅದೇ ಅದರ ಸವಿಸ್ವಾರಸ್ಯ!

ಒರಟು ಒಳಗಿಂದ ಹೊರಗಿರಲಿ

ಬೆಸೆದು ಭಾವಗಳ ಸಾಮರಸ್ಯ!!

 

ತಪ್ಪು

*ಅವರೇಕೆ ನಿನ್ನ ದೂರುವರು*

*ನಿನ್ನದೇನೋ ತಪ್ಪಿರಬೇಕು*

*ಇಲ್ಲವೆಂದಾದರೆ ಅವರ ಲೆಕ್ಕ*

*ಎಲ್ಲೋ ತಪ್ಪಿರಬೇಕು!!*

 

ಅಂತರ 

*"ಗೆಲ್ಲಲೇ ಬೇಕೆಂಬ*

*ಕೆಚ್ಚಿರುವವನಿಗೂ*

*ಸೋಲಿಸಲೇ ಬೇಕೆಂಬ*

*ಹುಚ್ಚಿರುವವನಿಗೂ*

*ಅಜಗಜಾಂತರವಿದೆ"*

 

*ದೇವರು ಮತ್ತು ಅಹಂ

ಸೋತಾಗ ದೇವರ ದೂರುವಿರಿ

ಬೇಕಾದಾಗ ಮಂಡಿಯೂರುವಿರಿ

ಅವನು ಕೊಟ್ಟರೆ ಮರೆಯುವಿರಿ

ತಾನೇ ಸಾಧಿಸಿದೆನೆಂದು ಮೆರೆಯುವಿರಿ

 

- *ಯಶುಪ್ರಿಯ ಪಕ್ಷಿಕೆರೆ*

 

ಚಿತ್ರ್