ಯುಗದ ಕವಿ ಕುವೆಂಪು

ಯುಗದ ಕವಿ ಕುವೆಂಪು

ಕವನ

ಅರಿಯಲೇಬೇಕು ಯುಗದ ಕವಿ ಕುವೆಂಪುರವರನ್ನು,

ಓದಲೇಬೇಕು ಜಗದ ಕವಿ ಕುವೆಂಪುರವರ ಸಾಹಿತ್ಯವನು/ಬರಹವನು,

ಅರಿತು-ಓದಿದಾಗ ಪ್ರತಿಯೋರ್ವನು ಬಯಸುವನು ಮನುಜನಾಗಬೇಕೆಂಬುದನು...

 

ಸೃಷ್ಟಿಸಿಹರು ಅಕ್ಷರ ಲೋಕದಲಿ  ಹೊಸದೊಂದು ಸಂಚಲನವನು,

ಜಗದಗಲ ಹರಡಿಸಿದರು ಕನ್ನಡ ಭಾಷೆಯ  ತತ್ವ-ಸತ್ವ- ಹಿರಿಮೆಯ ಕಂಪನು,

ಆರಾಧಿಸಿ-ಪೂಜಿಸಿದರು ಈ ನಿಸರ್ಗ ಮಾತೆಯನು,

ಬರೆದಿಹರು ವಿಶ್ವಮಾನವ ಗೀತೆಯನು,

ಸಾರಿಹರು ವಿಶ್ವಮಾನವನಾಗೆಂಬ  ಸಂದೇಶವನು,

 

ಓ ನನ್ನ ಚೇತನ ಆಗು ನೀ ಅನಿಕೇತನ ಗಾಯನದ ಜೊತೆಗೆ ಬದುಕಿನ ಬಂಡಿಯ ಸಾಗಿಸಿ,

ಜಾತಿ-ಮತ-ಕಟ್ಟುಪಾಡುಗಳ ದಿಕ್ಕರಿಸಿ,

ಪ್ರತಿಯೊಬ್ಬರನು ಜಾತ್ಯಾತೀತರನ್ನಾಗಿಸಿ ನೈತಿಕರನ್ನಾಗಿ ರೂಪಿಸಿ,

ನಾವು - ನಮ್ಮವರೆಂದು ನಾವೆಲ್ಲಾ ಮಾನವ ಕುಲ ಬಾಂಧವರೆಂದು ಎಲ್ಲರನು ಪ್ರೀತಿಸಿ...

 

"ಮನುಷ್ಯಜಾತಿ ತಾನೊಂದೆ ವಲಂ "ಎಂಬುದನು ಅರಿತು ಸ್ವೀಕರಿಸಬೇಕು,

ಪ್ರತಿಯೊಬ್ಬರೂ ಸ್ವಂತ ವೈಚಾರಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು,

ವರ್ಣಗಳಿಂದ ರೂಪಿತ ಮನುಷ್ಯರನ್ನು ಗುರುತಿಸುವ ವ್ಯವಸ್ಥೆ ತೊಲಗಿಸಬೇಕು,

ಜಾತಿ-ಮತ ತೊಲಗಿ ಆಧ್ಯಾತ್ಮವು ವೈಜ್ಞಾನಿಕ ತತ್ವವಾಗಬೇಕು,

 

ಪ್ರತಿಯೊಬ್ಬ ವ್ಯಕ್ತಿಯೂ ಬಾಳಿ ಬದುಕಬೇಕು,

ಬದುಕಿನಲ್ಲಿ ಎಲ್ಲವನೂ ಅರಿಯಬೇಕು-ತಿಳಿಯಬೇಕು-

ಓದಬೇಕು,

ತನ್ನ ತಾನರಿತು ತನ್ನ ಬಗೆಗಿನ ದರ್ಶನವನು ತಾನೇ ಕಂಡುಕೊಳ್ಳಬೇಕು,

ಮತವೆಂಬುವುದು ಮನುಜಮತವಾಗಬೇಕು,

ಪಥವೆಂಬುವುದು ವಿಶ್ವಪಥವಾಗಬೇಕು,

ಮನುಷ್ಯ ವಿಶ್ವಮಾನವನಾಗಬೇಕು,

ಮನುಷ್ಯನಾಗಿ ರೂಪಿತವಾಗಬೇಕು...

 

ಸಾಗುವ ದಾರಿಯಲಿ ಎಲ್ಲಿಯೂ ನಿಲ್ಲದಿರು,

ಮನೆಯ ಬಗ್ಗೆ  ಅತಿ ಆಸೆ ಹೊಂದದಿರು,

ಕೊನೆಯನೆಂದು ಮುಟ್ಟದಿರು- ಇವುಗಳನ್ನೆಲ್ಲ ಮೀರಿದ ಬದುಕಿನ ಗುರಿಯನ್ನು ತಲುಪುತಿರು,

ಸಾಗುವ ದಾರಿ ಅನಂತವಾಗಿಹುದು ಎಲ್ಲರೊಂದಿಗೆ ಹೊಂದಿಕೊಂಡು ಪ್ರೀತಿಯಿಂದ ಬದುಕುತಿರು....

 

-ಶಾಂತಾರಾಮ ಶಿರಸಿ, ಉತ್ತರ ಕನ್ನಡ.

 

ಚಿತ್ರ್