ರಾಷ್ಟ್ರಪಿತನ ಸ್ಮರಣೆಯಲ್ಲಿ…

ರಾಷ್ಟ್ರಪಿತನ ಸ್ಮರಣೆಯಲ್ಲಿ…

ಕವನ

ಬಾ ಬಾಪು ಬಾ

ರಾಷ್ಟ್ರಪಿತ ನೀನಾದೆ

ಜಗದ ದೇವನಾದೆ

ನಿನ್ನ ಆಗಮನವೇ

ನಮಗೆ ವರದಾನ//

 

ಬಾ ಬಾಪು ನೀನೊಮ್ಮೆ

ವ್ಯವಸ್ಥೆಗಳ ಸರಿಪಡಿಸು

ಮೌಲ್ಯಗಳ ಕಗ್ಗೊಲೆ

ನಿರಂತರ ಹಾಹಾಕಾರಗಳ ಮಾಲೆ//

 

ಶ್ರಮ ಬದುಕು ಬಿತ್ತಿದೆ 

ಅಹಿಂಸೆಯ ಸಾರಿದೆ

ಸರಳ ಜೀವಿಯಾದೆ

 ಜನಮನಕೆ ಹತ್ತಿರವಾದೆ//

 

ರಾಮರಾಜ್ಯದ ಕನಸು

ನನಸಾಗಲೇ ಇಲ್ಲ

ಆತಂಕದ ಜೀವನ

ಸಾವು ನೋವೇ ಎಲ್ಲ//

 

ಮೇಲಿಂದ ಇಳಿದು ಬಾ

ನಮ್ಮೊಡನೆ ಬೆರೆಯು ಬಾ

ಶಾಂತಿ ಮಂತ್ರವ ಬಿತ್ತು ಬಾ

ಅನ್ಯಾಯವ ಅಳಿಸು ಬಾ//

 

-ರತ್ನಾ ಭಟ್ ತಲಂಜೇರಿ

******

ಗಝಲ್

ನಿನ್ನಯ ಆಗಮನಕೆ

ಕಾಯುತ್ತಿದ್ದೇನೆ ಬಾಪು|

ಮನದ ನೋವನ್ನು

ಹೇಳುತ್ತಿದ್ದೇನೆ ಬಾಪು||

 

ಅಹಿಂಸೆ ಸತ್ಯಗಳ

ಸಾಕಾರ ಮೂರ್ತಿಯಾದೆ|

ಕಹಿಯ ನೆನೆಪುಗಳ

ಅರುಹುತ್ತಿದ್ದೇನೆ ಬಾಪು||

 

ಮರೆಯಾಗದೆ ಹೃದಯದಿ

ಉಳಿದಿರುವೆ ನೀನು|

ಕರವನು ಮುಗಿದು

ಹಾಡುತ್ತಿದ್ದೇನೆ ಬಾಪು||

 

ಪರಂಗಿಯವರ ಬಂಧನದ

ದಾಸ್ಯವನು ಬಿಡಿಸಿಕೊಟ್ಟೆ|

ಚರಣಕ್ಕೆ ಬಾಗುತಲಿ

ನಮಿಸುತ್ತಿದ್ದೇನೆ ಬಾಪು||

 

ಮೇರುಗಿರಿ ಕವಿಯಾದ

ಅಭಿನವನ ಗಝಲಿನಲ್ಲಿರುವೆ|

ಸಾರುತಲಿ ನುಡಿಗಳ

ಹೇಳುತ್ತಿದ್ದೇನೆ ಬಾಪು||

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್