ವಂದೇಮಾತರಂ ಕೋಮುವಾದ ಗೀತೆಯೆ?

ವಂದೇಮಾತರಂ ಕೋಮುವಾದ ಗೀತೆಯೆ?

Comments

ಬರಹ

"ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣಿ" ಎನ್ನುವ ಸಾಲುಗಳು ಇರುವುದರಿಂದ "ವಂದೇ ಮಾತರಂ" ಕೋಮುವಾದದ ಗೀತೆಯೆ?


ಹೌದು ಎನ್ನುತ್ತಾರೇ ಹೆಸರಾಂತ ಹೊಸ್ಟೋರಿಯನ್ ಆರ್.ಸಿ. ಮಜುಂದಾರ್. ಆತನ ಮಾತಿನಲ್ಲೇ ಹೇಳಬೇಕಂದರೇ "Bankimchandra converted patriatism into religion and religion into patriatism"


1937 ನಲ್ಲೇ "ತ್ವಂ ಹಿ ದುರ್ಗಾ..."ಇತ್ಯಾದಿ ಚರಣಗಳನ್ನ ಹಾಡುವುದು ನಿಲ್ಲಿಸಿದರು ಅಂದಿನ ಕಾಂಗ್ರೆಸ್ ನೇತಾರರು. ಯಾಕೇ ಎಂದರೇ ಅಲ್ಲಾ ಬಿಟ್ಟು ಬೇರೇ ದೇವರೇ ಇಲ್ಲವೆನ್ನುವ ಮುಸ್ಲಿಂ ಸೋದರರರನ್ನು, ವಿಗ್ರಹಾರಾಧನಯನ್ನು ನಿರಾಕರಿಸುವ ಪಾರ್ಸೀ, ಬ್ರಹ್ಮಸಮಜ ಮೊದಲಾದವರ ಪ್ರೀತಿಗಾಗಿ.


ಆದರೇ 1947ನಲ್ಲಿ ಮತವನ್ನು ಆಧಾರಿಸಿಯೇ ಹುಟ್ಟಿಕೊಂಡಿತು ಪಾಕಿಸ್ತಾನ್. ಇಷ್ಟಾದಮೇಲೂ "ತ್ವಂ ಹಿ ದುರ್ಗಾ...."ಮೊದಲಾದ ಸಾಲುಗಳು "ಕೋಮುವಾದ"ವನ್ನೇ ಪ್ರತಿಧ್ವನಿಸುತ್ತಾಯಿವೇ ಎಂದು ಹೇಳಿ ಆಚೆ ಇಡಲಾಗಿವೆ.


ಈ ನಿಟ್ಟಿನಲ್ಲಿ ನನ್ನಲ್ಲಿ ಹುಟ್ಟಿದ ಪ್ರಶ್ನಗೆಳು..


1. ಅಲ್ಲಾ ಅಥವಾ ಕ್ರೀಸ್ತನೇ ದೇವರೆನ್ನುವುದು ಸೆಕ್ಯುಲರ್ ಆಗಿದ್ದಾಗ "ತ್ವಂ ಹಿ ದುರ್ಗಾ" ಕೋಮುವಾದ ಹೇಗಾಗುತ್ತದೇ?


2. ಭಾರತ ಮೂಲಭೂತವಾಗಿ ಹಿಂದುಗಳ ನಾಡು. ಹಾಗಾಗಿ ತನ್ನ ನಾಡಿನ ಮಾತೆಯನ್ನು "ದುರ್ಗಾ" ಎಂದು ಭಾವಪೂರ್ವಕವಾಗಿ ಕರೆದರೇ "converting patriatism into religion" ಅನ್ನುವದು ಹೇಗೆ ಹುಟ್ಟುಕೊಳ್ಲುತ್ತದೆ?


3. ಅತಿ ಮುಖ್ಯವಾಗಿ ಒಬ್ಬ ಕವಿ ತನ್ನ ಕಲ್ಪನಾ ಸಾಮರ್ಥ್ಯದಿಂದ, ಊಹಾಶಕ್ತಿ ಯಿಂದ ರಚಿಸಿದ ಅತ್ಯುತ್ತಮ ಸಾಹಿತ್ಯದಲ್ಲಿ "ಇದು ಸೆಕ್ಯುಲರ್ ಭಾಗ, ಇದು ಕೋಮುವಾದದ ಭಾಗ" ಎಂದು ವರ್ಗಾಯಿಸಿಲಿಕ್ಕೇ ಯಾರಿಗೆ ಅಧಿಕಾರವಿದೆ? ಅದರಲ್ಲೂ ನಾಗರೀಕರ ಭಾವ ಸ್ವೇಛ್ಛಯನ್ನು ಕಾಪಾಡಬೇಕಾದ ಸರ್ಕಾರಕ್ಕೆ ಅಂತಹ ಅಧಿಕಾರ ಇದಿಯೇ?


ಗೆಳೆಯರೇ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ !


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet