ವಾಯಸ - ಮನುಜ ಸ್ನೇಹಿ  ಭೋಗ ಷಟ್ಪದಿ ಕವನ 

ವಾಯಸ - ಮನುಜ ಸ್ನೇಹಿ  ಭೋಗ ಷಟ್ಪದಿ ಕವನ 

ಕವನ
ಅಲೆದು ಕಾಳನುಡಿಕಿ ಬಂದ
ಹೊಳೆವ ಬೂದು ಕಂಠದಲ್ಲಿ
ಬಳಗದಲ್ಲಿ ಬರುವ ಕಾಗೆ ಕಪ್ಪು ಬಣ್ಣವು
ಕೊಳವು ತುಂಬಿ ಸುರಿದ ಮಳೆಗೆ 
ನೆಲದ ಪಚ್ಛೆ ಪೈರು ನಡುವೆ 
ನಳವು ಹೊಡೆದು ಹರಿದ ನೀರು ದಣಿವ ನೀಗಿತು  
ಊರು ಕೇರಿಯೆಲ್ಲ ಸುತ್ತಿ 
ದೂರ ಸಾಗಿ ವೇಗದಲ್ಲಿ   
ಹಾರಿ ಬಂದು ಗೂಡನೆಂದು ಮರೆತು ಕೊರಗದು 
ತೀರದಲ್ಲಿ ಮಿನ ಹಿಡಿದು 
ಸೂರಿನಲ್ಲಿ ಮರಿಗೆ ಕೊಟ್ಟು 
ಬಾರಿ ಹೆಮ್ಮೆಯಿಂದ ಕೂಗಿ ನಲಿದು ಕುಣಿವುದು 
ಅಂತೆ ಕಂತೆಯೇನೆಯಿರಲಿ 
ದಂತ ಕತೆಯ ಹಿರಿಯ ನುಡಿದ   
ಚಿಂತೆಯಿರದು ತಿಥಿಯ ದಿವಸ ಬರಲು ವಾಯಸ 
ಪಂತ ಬೇಡ ಮನುಜ ಸ್ನೇಹಿ
ನಿಂತು ನುಡಿವೆ ವೈರಿಯಲ್ಲ 
ಸಂತ ಕೂಡ ಮೆಚ್ಚಿಕೊಂಡ ಶನಿಯ ವಾಹನ 
ಕಾ ವಿ ರಮೇಶ್ ಕುಮಾರ್