ವಿದ್ಯೆಯಿದ್ದರೇನು ಫಲ..?

ವಿದ್ಯೆಯಿದ್ದರೇನು ಫಲ..?

ಕವನ

ಪಡೆದಿರುವ ಶಿಕ್ಷಣದ ಮಹತ್ವ ಅರಿವಿಗಿರಲಿ

ಕೀಳಿರಿಮೆ ಕುನ್ನಿಗಳ ಮನವು ಬದಲಾಗಲಿ;

ಮಡಿಕೆ ಮುಟ್ಟಿದ ಮಾತ್ರಕ್ಕೇಕೆ ಸಾವಿನ ಶಿಕ್ಷೆ?

ಇದೆಯೋ..? ಅಮೃತ ಮಹೋತ್ಸವದ ರಕ್ಷೆ ||೧||

 

ಮೀಸಲಾತಿಗೆ ಕೊಂಕು ನುಡಿಯುವ ಮುಗ್ಧರೆ

ಎಲುಬಿಲ್ಲದ ನಾಲಿಗೆಯನ್ನೊಮ್ಮೆ ತಿರುವಿರಿ;

ಇದಾಗಿದೆ ಭವ್ಯ ಭಾರತದ ಸ್ವಾತಂತ್ರ್ಯ ವಿಚಾರ

ಕಪ್ಪಾಗಿದೆ ಅಲ್ಲಲ್ಲಿ ಶಾಂತಿ ಪಾರಿವಾಳಗಳ ಗರಿ ||೨||

 

ಅನಕ್ಷರಸ್ಥ ಇದ್ದರೆ ತಿಳುವಳಿಕೆ ಇಲ್ಲವೆನ್ನುವುದು 

ಅಕ್ಷರ ತಿದ್ದುವವರೆ ಜಾತಿ-ಮತಕೆ ಬಿದ್ದಿರುವುದು;

ಆದರೂ ಹೇಳುವೆವು ನಾವೆಲ್ಲ ಒಂದೇ ಎಂದು

ಬದಲಾಗಿ ನನ್ನ ಜನಗಳೇ ತಡೆಯಲು ಮುಂದು ||೩||

 

ಏರದಾ ಗುಡಿ ಕಟ್ಟೆಗೆ, ಮುಟ್ಟದ ಊರ ನಲ್ಲಿಗೆ

ಸಿಗಲಿಲ್ಲ ಸ್ವಾತಂತ್ರ್ಯ, ನರಕ ಅನುಭವಿಸಿದಾಗ;

ಇದ್ದವರು ಇದ್ದಲ್ಲೇ ಇದ್ದು ತಲೆಯೆತ್ತಿದೆ ದೇಶ,

ಇಳಿಯುವುದು ಅವುಡುಗಚ್ಚಿ ತಡೆದ ರೋಷ ||೪||

-ದ್ಯಾವಪ್ಪ ಎಂ. (ದ್ಯಾಮು)

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್