ವಿವಿಧ ದರ್ಶನ

ವಿವಿಧ ದರ್ಶನ

ಕವನ

ಚುಟುಕುಗಳು: 

          ಹಣೆ ಬರಹವೇ      

ಬಡವರಿರುವರು ಭಾರತದಲ್ಲಿ

ಅಸಂಖ್ಯಾತ ಮಂದಿ 

ಸರಕಾರಗಳ ನಿರ್ಲಕ್ಷ್ಯತನದಿಂದ 

ದಾರಿದ್ರ್ಯದಲ್ಲೇ ಬಂಧಿ

***

             ಸಹಮತ

ಜಾತಿ ಧರ್ಮಗಳ ಹೆಸರಿನಲ್ಲಿ 

ಕಚ್ಚಾಟ ನಮಗೇಕೆ ಬೇಕು ?

ಸಮರಸ ಸೌಹಾರ್ದದಿಂದ 

ಅನುಭೂತಿ ಪಡೆಯಬೇಕು 

***

 

ಕವನ- ವಿವಿಧ ದರ್ಶನ     

ಓ ದೇವನೇ ಈ ಪೃಥ್ವಿಯಲಿ

ಹಲವರನು ಅನಾಥವಾಗಿಸಿದೆ

ಯಾಕೆಂದು ತಿಳಿಯದೆ ನಾನು

ಹಲವು ಬಾರಿ ಚಿಂತಿಸಿದೆ

 

ಓ ದೇವನೇ ಈ ಧರೆಯಲ್ಲಿ

ಅದೆಷ್ಟೋ ಬಡವರನ್ನಾಗಿಸಿದೆ

ಇದರ ಒಳಗುಟ್ಟು ತಿಳಿಯದೆ

ನಾನು ಯೋಚಿಸಿದೆ

 

ಓ ದೇವನೇ ಈ ಇಳೆಯಲ್ಲಿ

ಕಷ್ಟ ನಷ್ಟಕ್ಕೊಳಪಡಿಸಿದೆ

ಈ ಮರ್ಮ ಅರಿಯದೆ

ನಾ ಅಭಯ ಯಾಚಿಸಿದೆ

 

ಓ ದೇವನೇ ಈ ಲೋಕದಲ್ಲಿ 

ನರಕಯಾತನೆಗೆ ಒಳಪಡಿಸಿದೆ

ಮನುಜರ ವೇದನೆಗೆ ನೀ

ಇರಲಾರೆ ಸ್ಪಂದಿಸದೆ

***

-ಎಂ.ಎ.ಮುಸ್ತಫಾ ಬೆಳ್ಳಾರೆ

ಚಿತ್ರ: ಇಂಟರ್ನೆಟ್ ತಾಣ

 

ಚಿತ್ರ್