ವಿಶ್ವ ಸಾಕ್ಷರತಾ ದಿನ

ವಿಶ್ವ ಸಾಕ್ಷರತಾ ದಿನ

ಹುಟ್ಟಿದ ಪ್ರತಿಯೊಂದು ಮಗುವಿಗೂ ವಿದ್ಯೆ ಕಲಿಯುವ ಅಗತ್ಯ ಮತ್ತು ಹಕ್ಕು ಎರಡೂ ಇದೆ. ಹಾಗೆಯೇ ಅವಲೋಕನಕ್ಕೆ ಒಳಪಡಿಸಿದಾಗ ದೊರೆತ ಅಂಕಿ ಅಂಶಗಳ ಹೇಳಿಕೆ ವಯಸ್ಕರಲ್ಲಿ ಬಹಳಷ್ಟು ಜನರಿಗೆ ರುಜು ಮಾಡಲು ಸಹ ಬರುವುದಿಲ್ಲವೆಂದು. ಓರ್ವನಿ/ಳಿಗೆ ಓದಲು ಬರೆಯಲು ಬಾರದಿದ್ದರೆ ಅದು ಅನಕ್ಷರತೆ. ಹಾಗಾದರೆ ಓದಲು ಬರೆಯಲು ಕಲಿಸುವ, ಪ್ರೇರೇಪಿಸುವ, ಪ್ರೋತ್ಸಾಹಿಸುವ ಕೆಲಸವಾಗಬೇಕು. ಯಾರು ಇದರ ಜವಾಬ್ದಾರಿ ವಹಿಸುವುದೆಂಬ ಪ್ರಶ್ನೆ ಬರುವುದು ಸಹಜ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ಜಾರಿಗೆ ಬಂತು. ಆದರೆ ವಯಸ್ಕರಿಗೆ. ಸಂಘಸಂಸ್ಥೆಗಳು, ರಾತ್ರಿಶಾಲೆಗಳು, ವಠಾರಗಳಲ್ಲಿ, ಗ್ರಂಥಾಲಯಗಳಲ್ಲಿ ಕಲಿಸುವ ವ್ಯವಸ್ಥೆಗೆ ಸ್ಥಳೀಯ ಪಂಚಾಯತ್ ಅಡಿಯಲ್ಲಿ ಕ್ರಮ ಕೈಗೊಳ್ಳಲಾಯಿತು. ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಣ ಸಂಪನ್ಮೂಲ ಕೇಂದ್ರಗಳು ಹೆಚ್ಚಿನ ಮುತುವರ್ಜಿ ವಹಿಸಿ ಅನುಷ್ಠಾನ ಗೊಳಿಸಿದವು. ಮನಮನೆ ಸಮೀಕ್ಷೆ ನಡೆಸಿ, ಓದುವ ಚಿತ್ರಪುಸ್ತಕಗಳನ್ನು ,ಕಥೆ ಪುಸ್ತಕಗಳನ್ನು ನೀಡಲಾಯಿತು. ಇದಲ್ಲದೆ ಪ್ರತಿನಿತ್ಯ ಆಯ್ದ ಕೇಂದ್ರಗಳಲ್ಲಿ ಸಂಜೆಯ ಅವಧಿಯಲ್ಲಿ ಬೋಧನೆಯ ವ್ಯವಸ್ಥೆಯನ್ನು ಮಾಡಿದರು.

ಮುಖ್ಯವಾಗಿ ಸಮಾಜದ ಮುಖ್ಯವಾಹಿನಿಗೆ ಅವರನ್ನು ತರುವುದು, ಅವರ ಹಕ್ಕು ಮತ್ತು ಕರ್ತವ್ಯಗಳ ಅರಿವು ಮೂಡಿಸುವುದು, ಅನಕ್ಷರತೆಯಿಂದಾಗುವ ತೊಂದರೆಗಳನ್ನು ತಿಳಿಸುವುದು, ಹಿಂಜರಿಕೆ ಹೋಗಲಾಡಿಸುವುದು. ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಸಾಧಿಸುವುದು. ಎಲ್ಲರೊಂದಿಗೆ ಬೆರೆಯಲು ಕಲಿಯುವುದು. ಇಂದಿನ ತಂತ್ರಜ್ಞಾನವನ್ನು ಅರ್ಥೈಸಿಕೊಳ್ಳಲು ಸಹಕರಿಸುವುದು.ಅಸಮಾನತೆ ಹೋಗಲಾಡಿಸುವುದು, ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು. ದುರ್ಬಲರ ಸಬಲೀಕರಣ.ತಮ್ಮ ಬಗ್ಗೆ ತಾವೇ ಅರಿಯುವುದು.ಬಡತನ,ನಿರುದ್ಯೋಗ ಸಮಸ್ಯೆಯಿಂದ ಹೊರಬರುವುದು, ಹೀಗೆ ಎಲ್ಲವನ್ನೂ ಮನದಟ್ಟು ಮಾಡುವುದೇ ಸಾಕ್ಷರತೆಯ ಮೂಲ ಆಶಯ. ಮೋಸಹೋಗುವುದನ್ನು ತಡೆಗಟ್ಟುವುದೂ ಒಂದು ಕಾರಣ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಬಲೀಕರಣ ಸಾಧಿಸುವುದು.ಲಿಂಗ ತಾರತಮ್ಯನಿರ್ಮೂಲನೆ. ಯುನೆಸ್ಕೋದಲ್ಲಿ ಮೊದಲು ಆರಂಭವಾದ ಈ ಚಳವಳಿ ಇಂದು ವಿಶ್ವಕ್ಕೆಲ್ಲ ಹಬ್ಬಿದೆ. ದೇಶದ ಪ್ರಗತಿಗೆ ಶಿಕ್ಷಣ ಬೇಕೇ ಬೇಕು

-ರತ್ನಾ ಕೆ ಭಟ್ ತಲಂಜೇರಿ.

ಚಿತ್ರ ಕೃಪೆ: ಇಂಟರ್ನೆಟ್ ತಾಣ