ವೃದ್ದೆಯ ಕಲಾಕುಂಚ
ಕವನ
ಅರಳಿದೆ ಪಟದಲಿ ಕುಂಚದ ಕಲೆಯದು
ತಳೆದಿದೆ ನೂತನ ಭಾವವದು|
ಕರೆದಿದೆ ಸಹೃದಯ ಮನವನು ತಣಿಸುತ
ವೃದ್ದೆಯ ಬಿಡಿಸಿದ ಚಿತ್ರವದು||
ಹಾಳೆಯ ಮೇಲೆಯೆ ರಂಗಿನ ಕುಂಚವು
ಬಿಡಿಸಿದೆ ಚಿತ್ರದ ಪುಷ್ಪವಿದು|
ನಾಳೆಯ ಜೀವನ ನೋಡುವ ವಯಸದು
ತೋರಿಸಿ ನಿಂತಿದೆ ಕುಂಚವಿದು||
ವೃದ್ದೆಯ ಆಸೆಯ ನೋಡುತ ನಿಂತರು
ಹಾದಿಗೆ ಹೋಗುವ ಲೋಗರದು|
ಸುದ್ದಿಯ ಮಾಡದೆ ಎತ್ತರ ಬೆಳೆಯುತ
ಕನಸದು ಕಮರದ ಹೃದಯವದು||
ಬಣ್ಣಿಸೆ ನಿಲ್ಲಲು ಪದಗಳೆ ಇಲ್ಲವು
ಅದ್ಬುತ ಕಾವ್ಯದ ಲಹರಿಯದು|
ಕಣ್ಣಲಿ ಕುಣಿದಿದೆ ನೀಲಿಯ ಪುಷ್ಪವು
ಸೌರಭ ಸೂಸುತ ನಿಲ್ಲುವದು||
ಮೆಚ್ಚಿದೆ ಕಲೆಯನು ಹೃದಯದಿ ನಾನಲಿ
ಎಂತಹ ಮೋಹಕ ಕೈಚಳಕ|
ಹೆಚ್ಚಿದೆ ಬೆಲೆಯದು ಬಣ್ಣದ ಕುಂಚಕೆ
ನೋಡಿದ ಚಣದಲಿ ಮೈಪುಳಕ||
-ಶಂಕರಾನಂದ ಹೆಬ್ಬಾಳ
ಚಿತ್ರ್
