ವೈರಾಣುವಿನಾಟ

ವೈರಾಣುವಿನಾಟ

ಕವನ

ವಸುಂಧರೆಯ ಮಡಿಲಲ್ಲಿ

ನೀರವ ಮೌನದ ನೆರಳಲ್ಲಿ

ಪರ ಲೋಕಕೆ ಅಂತಿಮ ಯಾತ್ರೆ !

 

ಮಹಾ ಮಾಯಾವಿ ಲೀಲೆಯಲಿ

ಸಾವು,ಲಕ್ಷಾಂತರ ಆರಿದ ಜ್ಯೋತಿ ಯಲ್ಲಿ

ವೈರಾಣುವಿನ ಕಾಣದ ಮಹಾಜಾತ್ರೆ !

 

ಕುಡಿಗಳ ಮೇಲಿನ ಅತ್ಯಚಾರ

ನಿಸರ್ಗದ ಮೇಲಿನ ಅನಾಚಾರ

ತರದಿರದೆ ವಸುಧೆಗೆ ಆಕ್ರೋಶ ?

 

ಕ್ರಿಮಿ,ಕೀಟ, ಜಂತುಗಳ ನೋವಿಗೆ

ಕಾಡು,ನಾಡು ಪ್ರಾಣಿಗಳ ಸಾವಿಗೆ

ನೊಂದು,ಬೆಂದು ಹೊರೆಯನ್ನಿಳಿಸಿದಳೇ?

 

ದುಗ್ಗಾಣಿಯ ಮೋಹದ ನಾಟಕಕೆ

ದುಷ್ಟತನದ ಹಮ್ಮಿನ ಪರಮಾವಧಿಗೆ

ತಪರಾಕಿ ಬೀಸಿತೆ ನಿಸರ್ಗವು  !?

 

ಹುಟ್ಟು ಕೊಟ್ಟ- ಮಣ್ಣ ಹೊಳಪು

ಮಳೆಯ ಹನಿಯ ಸಂಗದಲ್ಲಿ

ಪರಮಾನ್ನ ಉಂಡ ಬಯಕೆಯಲ್ಲಿ !

 

ನಿನ್ನದೇನಿದೆ ಹೇಳು ಮಾನವ ?

ಹೊತ್ತೊಯ್ದುಕೊಂಡು ಹೋಗಲು

ಪಾಪ ತುಂಬಿದ ಮೂಟೆ ಬಿಟ್ಟು !!

 

ಪಂಚಭೂತಗಳ ಆಸರೆಯಲ್ಲಿ

ವಸುಧೆ ಗರ್ಭದೊಳಗೆಳೆದೆಳೆದು

ಕರ್ಮದ ಮಣ್ಣು ಉಣ್ಣು ನೀ ಎಂದಳೇ !?

 

ನಂಬಿಕೆ ಕುಸಿದು- ಭಯವು ಬೆಸೆದು

ಹೆಣಗಳಡಗಿದ ಕಾಫೀನುಗಳಲ್ಲಿ--

ವೈರಾಣುವಿನಾಟದ ಮಹಾ ತಂತ್ರ !!

ಮಾನವನಾದ ಅತಂತ್ರ !!!!!

-ವೀಣಾ ಕೃಷ್ಣಮೂರ್ತಿ, ದಾವಣಗೆರೆ.

 

ಚಿತ್ರ್