ಶತಾವಧಾನದ ಸಮಸ್ಯೆಗಳು ಹಾಗೂ ಪೂರಣಗಳು

ಶತಾವಧಾನದ ಸಮಸ್ಯೆಗಳು ಹಾಗೂ ಪೂರಣಗಳು

ಕವನ

 

30-11-12 ರಿಂದ 02-12-12 ರ ವರೆಗೆ ಬೆಂಗಳೂರಿನಲ್ಲಿ ನಡೆದ 
ಶತಾವಧಾನದ ಸಮಸ್ಯೆಗಳು ಹಾಗೂ ಪೂರಣಗಳು
 
ದತ್ತಪದೀ : ಕ್ರೂರ, ವೈರ, ನೀರ, ಶೂರ ಪದಗಳನ್ನು ಬಳಸಿ ಮದನವಿಷಯಕ ಪದ್ಯ.
 
ಶತಾವಧಾನಿಯ ಪೂರಣ : (ಡಾ|| ರಾ ಗಣೇಶ್)
 
ಕ್ರೂರಂ ಮನೋಭವನದೆಂಬುದು ಚಿತ್ತವೇದ್ಯಂ 
ವೈರಕ್ಕಸಾಧ್ಯನಿದೊ ಸಾಕ್ಷಿ ಗಡಾರ್ಧಕಾಂತಮ್ |
ನೀರಂ ರತೀಶ್ವರಿಯೆನಲ್ ಮಿಗೆ ತೃಪ್ತಿತೋಷರ್ 
ಶೂರಾರ್ಧರಪ್ಪ ಸುತೆಸೂನುಗಳಲ್ತೆ ನೋಡಲ್ ||
 
ಪೃಚ್ಛಕ ಪೂರಣ : (ವಿ|| ಎಸ್ ಎನ್ ಸಿಂಹ, ಮೇಲುಕೊಟೆ)
 
ಕ್ರೂರಂ ಮತ್ತನಿವಾರ್ಯನೇ ಬಿಸುಡೆಲೋ ಫುಲ್ಲೋತ್ಪಲಂ ಮಾರನೇ
ವೈರಂ ನನ್ನೊಡನೇಕೆ ಬಾಣ ತೊರೆ ನೀನ್ ಆ ಬಿಲ್ಲು ಮತ್ತೇತಕೆ |
ನೀರಾಸಂಗವಿಯೋಗ ದುಃಖಝಳದಿಂದೀದೇಹ ಬೇಯುತ್ತಿರಲ್
ಶೂರರ್ಗೀಪರಿ ಧರ್ಮವೇ ಮೃತನನುಂ ಮತ್ತೊಮ್ಮೆ ನೀ ಕೊಲ್ವುದೇ ||
 
 
ಸಮಸ್ಯಾ ಪೂರಣ : ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್
 
ಗಡಿಯಂ ಕಾಯುತಲಿದ್ದರು
ನಾಡಾಳ್ವರ ಕೃಪೆಯಿಂ ಗೌಡೀತುರುಕರು ಬೆಂ-
ಗಡೆಯಿಂ ನುಸುಳುತೆ ಕಾವಲ್
ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್  !
 
(ಗೌಡೀ = ಬಂಗಾಳ = ಬಾಂಗ್ಲಾಮುಸ್ಲಿಮರು)
 
01-12-2012               - ಎಸ್ ಎನ್ ಸಿಂಹ, ಮೇಲುಕೊಟೆ