ಶುಭಕರಿ ಕರುಣಾ ಪೂರಿತೆ ಕಾತ್ಯಾಯನೀ ಮಾತೆ
ಕವನ
ನವರೂಪ ಧಾರಿಣಿ ಶ್ರೀ ದುರ್ಗಾ ಮಾತೆ
ಆರನೆಯ ಅವತಾರ ಕಾತ್ಯಾಯನೀ |
ಕಾತ್ಯ ಗೋತ್ರ ವಂಶದಲಿ ಉದ್ಭವಿಸಿದೆ
ಕಾತ್ಯಾಯನ ಋಷಿಯ ಸಂಕಲ್ಪ ಪುತ್ರಿಯಾದೆ||
ಸೂಕ್ಷ್ಮ ಲಹರಿಗಳಲಿ ನಿನ್ನದೊಂದು ಅಂಶ
ನೀನಾದೆ ಜಗ ಬೆಳಗುವ ಕಲ್ಯಾಣಿ|
ದುರುಳ ಮಹಿಷಾಸುರನೆಂಬ ಧಾಷ್ಟ್ಯ
ದುರ್ಗಣಂಗಳ ಮೈಗೂಡಿಸಿ ಮಾಡಿದ ಅಟ್ಟಹಾಸ||
ಸುರವೃಂದವು ನೀಡಲು ಆಯುಧ ವಿಶೇಷ
ಮಹಾಮುನಿಗಳ ತೇಜ ಸಂಪನ್ನ ವಾಗಲು|
ತರಿದಿಕ್ಕಿದೆ ಚಾಮುಂಡಿ ದುರುಳನ ಶಿರವ
ಎದೆಯೊಡಲ ಬಗೆದು ಉಸಿರು ನಿಲ್ಲಿಸಿದೆ||
ಭಕುತರ ಪೂಜೆಯ ಸೇವಿಸಿ ಫಲಗಳ ಕೊಟ್ಟೆ
ಸಾಧಕರ ಮನವ ಆಜ್ಞಾಚಕ್ರದಲಿ ನೆಟ್ಟೆ||
ಸಂತಾನ ಫಲ ನೀಡುತ ಹರಸಿದೆ
ಭವ್ಯದಿವ್ಯ ರೂಪದಲಿ ಇಷ್ಟಾರ್ಥ ನೀಡಿದೆ||
ಚತುರ್ವಿದ ಪುರುಷಾರ್ಥ ಇಷ್ಟ ಸಿದ್ದಿ ಮಂದಸ್ಮಿತೆ
ಮಹಾಯೋಗಿನಿ ಶುಭಕರಿ ಕರುಣಾಪೂರಿತೆ |
ಶಾರ್ದೂಲವಾಹನೆ ಇಷ್ಟಸಿದ್ದಿ ದಾತೆ
ನಮೋ ಕಾತ್ಯಾಯನೀ ದೇವಿ ಮಾತೆ||
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
