ಶುಭವಿಹುದೆ...?

ಶುಭವಿಹುದೆ...?

ಕವನ

ನೋಡು, ನನಗಿಹರು ಬಂಧುಗಳು --- ಚೆಲುವಾಗೇ ಇಹರವರು

ನನಗಿಂದು ಬಡತನ,ಬಾಳಲಾರದ ಸ್ಥಿತಿಯು -- ನೆಲ ಅಸೆಯೇ ಒಡಲು !

ಸೊರಗಿರುವ ಜೀವಕ್ಕೆ , ಚರ್ಮವಂಟಿದೆ -- ನೋವ ನುಂಗಿ !

ಸಾಯಲಾರೆ ದಿಟ, ಒಳ್ಳೆಯ ಮನ ಇರುವವಗೆ -- ಇಲ್ಲಿ ಸಾವಿಲ್ಲ

ಕಿರಿಯರಿಗೆ ಬೇಕಾಗಿ, ದುಡಿ ದುಡಿದು ಹಣ್ಣಾದೆ-- ಕೊಳೆತು ಹೋದೆ

ಕಿರಿಯರೆಲ್ಲ ಸಿರಿಯ ಕಂಡರು, ನಾನು ದಟ್ಟ ದರಿದ್ರನಾದೆ !

ನನ್ನ ಮಕ್ಕಳು ,ಹಲಸಿನ ಹಪ್ಪಳ ತಿನ್ನುತ್ತಾ ಬೆಳೆದರು

ಅವರ ಮಕ್ಕಳು ಮಸಾಲೆದೋಸೆ ತಿಂದು - ಸವಿದು ಬಾಳಿದರು

ನನ್ನ ಹಾಡು ಹಾಡಾಗಲಿಲ್ಲ

ಅವರ ಹಾಡಲ್ಲಿ ಸಂಗೀತವೇ ಎಲ್ಲ

ಜಾತ್ರೆ ಸಡಗರದ ಗೌಜಿಯಿಲ್ಲ, ಹಬ್ಬದೂಟವ ಉಂಡವರಲ್ಲ 

ಬಾಣ ಬಿರುಸುಗಳ ನೋಡಿದವರಲ್ಲ, ಮುದುಡಿ -- ಮಲಗಿದವರು

ಅನ್ನದೊಳಗಿನ ಅಗುಳುಗಳು ನನ್ನ ಮಕ್ಕಳು !

ಬಾಳಿನೊಳು ಮಳೆಯಿಲ್ಲ, ನಿತ್ಯ ವಸಂತವಿಲ್ಲ -- ಸುಖವಂತು ನೋಡಲೇ ಇಲ್ಲ

ನನ್ನ ಬಾಳಿಗಿಲ್ಲ ಸರಿದಾರಿ, ಕಾರಣ ನಾನು ಅಕ್ಷರದವನಲ್ಲ , ಅಲೆ ಅಲೆಯುವ ಅಲೆಮಾರಿ !

*ಬದುಕೇ ಮುಳ್ಳಿನ ಬೇಲಿ!* 

***

ಒಲವಿಂದ ಹರಸು

ಕರೆಸುತಲಿ ಪಕ್ಕದಲೆ ಕೂರಿಸುತ ಹರಸಿಂದು

ತಲೆಯೆತ್ತಿ ನಡೆವಂತೆ ಮಾಡುನೀ ಕೇಶವನೆ

ಎಲ್ಲವನು ಮನಸ್ಸಿಂದ ಗುಡಿಸುತಲೆ ಒಗೆಯುವೆನೆ 

ಕನಸಿನಲು ನಿನ್ನನ್ನು ಕಾಣುತಲೆ ಮಲಗುವೆನೆ

 

ಬೆಳಕಾಗಿ ಜಗವೆಲ್ಲ ಕತ್ತಲೆಯ ಸರಿಸಿರಲು

ತಮದೊಳಗು ಬೆಳಕಸುರಿ ಕೃಷ್ಣಯ್ಯ ನೀನೆಂದು 

ಜಪತಪವ ಗೈಯುತಿಹೆ ನಿಷ್ಠೆಯಲಿ ನಾನೆಂದು

ಇನ್ನೇನು ಬೇಕಿಹುದೊ ಹೇಳುವಿಯೊ ಕುಲದೊಡೆಯ

 

ಕಣ್ ಬಿಡುತ ನನ್ನಡೆಗೆ ಓಡುತಲಿ ಬಾಯಿಂದು

ಸೋತಿಹೆನು ಬುವಿಯೊಳಗೆ ಸಿಗಲಿಲ್ಲ ನೆಮ್ಮದಿಯು

ಕರುಣೆಯೊಳು ಸಾಗರನೆ ಜಗದಗಲ ಚೇತನವೆ

ಹರಸುತಲಿ ಕೈಹಿಡಿದು ಮುನ್ನಡೆಸಿ ಸಲಹಿಂದು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್