ಶ್ರಾವಣ ಸಂಭ್ರಮ
ಜಗದ ತಂದೆ ಶಿವ ಶಂಕರನ ಆರಾಧನಾ ಮಾಸ
ಹಾಲಾಹಲವ ಗಂಟಲಲಿರಿಸಿ ನಂಜುಂಡನಾದ ವಿಶೇಷ
ಆಗಸವ ಶ್ರವಣ ನಕ್ಷತ್ರ ಆಳುವುದೆಂಬ ಪ್ರತೀತಿ
ಶುದ್ಧಜಲ ಸಿಹಿಯಾಳ ಅಭಿಷೇಕ ಪರಶಿವಗೆ ಅರ್ಪಿಸಿ
ಮಂಗಳಗೌರಿ ಪೂಜೆ ಮಹಾಭಾಗ್ಯ ಪ್ರಸಾದ
ನಾಗರಪಂಚಮಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಸಿದ್ಧ
ರುದ್ರಾಕ್ಷಿ ಧಾರಣೆ ಶುಭ ಶಕುನ ಪ್ರಾಪ್ತಿ ನಂಬಿಕೆ
ಅನಂತವ್ರತ ವರಮಹಾಲಕ್ಷ್ಮೀ ನೇಮ ಸೂತ್ರ ಹೇಳಿಕೆ
ಅಣ್ಣ-ತಂಗಿ ಬಾಂಧವ್ಯದ ಬೆಸುಗೆಯುಂಡು
ರಕ್ಷಾಬಂಧನದಿ ಹೆಣೆಯುವ ಭದ್ರತೆಯ ಕೊಂಡಿ
ಶುಭ ಶುಕ್ರವಾರ ಮುತ್ತ್ಯೆದೆ ದಿನದ ಸಂಭ್ರಮವು
ಹನ್ನೊಂದು ವಿಧದ ಪುಷ್ಪಗಳ ಚೂಡಿಪೂಜೆಯು
ಶ್ರೀರಾಘವೇಂದ್ರಸ್ವಾಮಿಗಳ ಆರಾಧನೆ
ಕಲಿಯುಗದ ಕಾಮಧೇನು ಮಂತ್ರಾಲಯದ ಪ್ರಭು
ಜಾತಿಮತ ಧರ್ಮ ಭೇದವಿಲ್ಲದ ಪುಣ್ಯಪುರುಷ
ಸಕಲರೂ ತಲೆಬಾಗುವ ರಾಯ ಜಗದ್ಗುರು
ವಿಶ್ವ ಸಂಸ್ಕೃತ ಭಾಷೆಯ ದಿನಾಚರಣೆ
ದೇವಭಾಷೆಗೆ ಸಕಲ ಪೂಜೆ
ಗೌರವ ಪ್ರೀತಿಯ ನಮ್ಮದಾದ ಭಾಷೆ
ವಿಶ್ವ ಮಾನ್ಯತೆಯ ಸಂಪ್ರೀತೆ
ಶ್ರಾವಣ ಸೋಮವಾರದ ವ್ರತ
ಮಹಾಶಿವನ ನೆನೆವ ಸುದಿನ
ಸಂಪತ್ ಶನಿವಾರದ ವ್ರತಾಚರಣೆ
ಲಕ್ಷ್ಮೀದೇವಿಯ ಪೂಜೆ ನೈವೇದ್ಯ ಆರಾಧನೆ
ತವರುಮನೆಯಲಿ ಜೋಕಾಲಿ ಜೀಕಾಟ
ಆಷಾಢ ಕಳೆದು ದಾಂಪತ್ಯ ಚೆಲುವಿನಾಟ
ಸ್ತೋತ್ರ ವ್ರತ ನೇಮ ಗಾಯನ ಶಿವ-ಶಿವೆಯ ಭಜನೆ
ರೈತಾಪಿ ವರ್ಗಕೆ ಬುವಿಯ ದುಡಿಮೆ ಆರಾಧನೆ
ಸನಾತನ ಸಂಸ್ಕೃತಿಯ ನೆಲೆವೀಡು
ನಮ್ಮ ಭಾರತ ಹೆಮ್ಮೆಯ ಬೀಡು
ಭಾವೈಕ್ಯತೆಯ ತವರಿನ ತೊಟ್ಟಿಲು
ಸಕಲರ ಹೃದಯದಲು ಪ್ರೀತಿ ನಂಬಿಕೆಯ ಕಟ್ಟಲು
-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
