ಶ್ರೀಯೋಗಿನಾರೇಯಣ ಯತೀಂದ್ರ ತಾತಯ್ಯನವರ ಕಾಲಜ್ಞಾನ - ಪುಸ್ತಕ ಸಾರಂಶ ರೂಪ (೧)
ಶ್ರೀಯೋಗಿ ನಾರೇಯಣ ಯತೀಂದ್ರ ತಾತಯ್ಯನವರ ಕಾಲಜ್ಞಾನ ಕನ್ನಡಕ್ಕೆ ಕೈಪು ಲಕ್ಷ್ಮೀನರಸಿಂಹಶಾಸ್ತ್ರಿಗಳು -ಈ ಪುಸ್ತಕದ ಸಾರಂಶರೂಪ ಈ ಲೇಖನ
ಕೋಲಾರ ಜಿಲ್ಲೆಯ ಕೈವಾರ ಒಂದು ಕಾಲಕ್ಕೆ ಕೈವಾರನಾಡು ಎಂದೆ ಪ್ರಸಿದ್ದ. ಅಲ್ಲಿನ 'ತಾತಯ್ಯ'ರೆಂದು ಪ್ರಸಿದ್ದರಾದ ಶ್ರೀಯೋಗಿ ನಾರೇಯಣ ಯತೀಂದ್ರರು ಸುಮಾರು ಕ್ರಿ.ಶ.1726 ರಲ್ಲಿ ತೆಲುಗಿನ ಬಳೆಬಣಜಿಗರಾಗಿ ನೆಲೆಸಿ ಗೃಹಸ್ತರಾಗಿ ನಂತರ ಗೃಹತ್ಯಾಗ ಮಾಡಿ ಯೋಗನರಸಿಂಹ ವನದಲ್ಲಿ ತಪಸಿದ್ದಿ ಪಡೆದವರು. ಅವರ ಜೀವನದಲ್ಲಿ ಹಲವು ಪವಾಡಗಳನ್ನು ತೋರಿಸಿ ನಂತರ ಕ್ರಿ.ಶ.1836 ರಲ್ಲಿ ಪೀಠ ತ್ಯಜಿಸಿ ಸಮಾದಿ ಬೃಂದವನಸ್ಥರಾದರು ಎನ್ನುವುದು ಸ್ಥಳದ ಇತಿಹಾಸ.
ಕನ್ನಡ ಮತ್ತು ತೆಲುಗಿನಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕ್ರಿ.ಶ.1813-14 ರಲ್ಲಿ ಅಂದರೆ 188 ವರ್ಷಗಳ ಹಿಂದೆ ತಾಳೆಗರಿಗಳಲ್ಲಿ ಬರೆದಿದ್ದ ಇವರ 'ಕಾಲಜ್ಞಾನ' ತೆಲುಗಿನಲ್ಲಿ ಪದ್ಯರೂಪದಲ್ಲಿದ್ದು ಇದರ ಭಾವಾರ್ಥರೂಪವನ್ನು ತೆಲುಗಿನಲ್ಲಿ ನಂತರ ಕನ್ನಡದಲ್ಲಿ ಕೈಪು ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಸಿದ್ದಪಡಿಸಿ ಆಶ್ರಮದ ವತಿಯಿಂದ ಪ್ರಕಟವಾಗಿದೆ. ಅಂಗ್ಲದ 'ನಾಷ್ಟ್ರಡಾಮಸ್' ನ ಭವಿಷ್ಯವಾಣಿಯಂತೆ ಇರುವ ಈ ಪದ್ಯಗಳು ಪ್ರಸ್ಥುತ ಹಾಗು ಭವಿಷ್ಯವನ್ನು ಸೂಚಿಸುತ್ತವೆ.
ಕಾಲಜ್ಞಾನ ಗ್ರಂಥವು ಎರಡು ಘಟಕಗಳಲ್ಲಿದ್ದು, 'ಗುರುವಾಣಿ' ಎಂದು ಕರೆಯುವ ಮೊದಲ ಬಾಗ 16 ಪದ್ಯಗಳಿಂದ ಕೂಡಿದ್ದು 'ಪ್ರಚಂಡ ನಾರೇಯಣ ಕವಿ ಪದ್ಯಮುಲು' ಎಂದು, ಎರಡನೆ ಘಟಕ ದೈವವಾಣಿಯಾಗಿದ್ದು 'ಸೂಕ್ಷ್ಮಭೀಮಲಿಂಗ ಶತಕಮು' ಎಂದು 27 ಪದ್ಯಗಳಿಂದ ಕೂಡಿದೆ.ಭವಿಷ್ಯವು ಚಿಕ್ಕ ಚಿಕ್ಕ ಪದ್ಯರೂಪದಲ್ಲಿದ್ದು ವಿಮರ್ಷಿಸುವುದು ಓದುಗರನ್ನು ಅವಲಂಬಿಸಿದ್ದು, ಅದರೆ ಅರ್ಥ ವಿವರಣೆ ದೊಡ್ಡ ಪುಸ್ತಕ ರೂಪದಲ್ಲಿದೆ.
ಗಣನಾಥ ಹಾಗು ಶಾರದ ಪ್ರಾರ್ಥನೆ ಜೊತೆಗೆ ಪ್ರಾರಂಬವಾಗುವ ಎಲ್ಲ ಪದ್ಯಗಳು ತೆಲುಗಿನಲ್ಲಿದ್ದು ಅದರ ಅರ್ಥವಿವರಣೆ ಕನ್ನಡದಲ್ಲಿದೆ.
ಪಾತಂಜಲ ಯೋಗದ ಒಂದು ಸೂತ್ರ :' "ಪರಿಣಾಮತ್ರಯ ಸಂಯಮಾದ್ ಅತೀತಾನಾಗತ ಜ್ಞಾನಮ್ " ಅಂದರೆ ಧಾರಣ-ದ್ಯಾನ-ಸಮಾದಿ ಎಂಬ ಮೂರು ಯೋಗಾಂಗಗಳಿಂದ ದರ್ಮ-ಲಕ್ಷಣ-ಅವಸ್ಥೆ ಎಂಬ ವಸ್ತುವಿನ ಮೂರು ಪರಿಣಾಮಗಳ ಮೇಲೆ ಮನಸ್ಸು ಕೇಂದ್ರಿಕರಿಸಿದಾಗ ಕಾಲಜ್ಞಾನ ಉಂಟಾಗುತ್ತದೆ ಎಂದು ಸೂತ್ರದ ಅಭಿಪ್ರಾಯ. ಹಾಗು ಯೋಗ ಸಾದನೆಗೆ ರಾತ್ರಿಯ ಮೂರನೆ ಜಾವ ಪ್ರಶಸ್ಥ .
ಹಾಗಾಗಿ ಆ ಸಮಯದಲ್ಲಿ ಅಂದರೆ ಶಾಲಿವಹನ 1735 ರ ಶ್ರೀಮುಖ ಸಂವತ್ನರ ಶ್ರಾವಣ ಶುದ್ದ ಪಂಚಮಿ ರಾತ್ರಿ ಇಪ್ಪತ್ತು ಗಳಿಗೆ ನಂತರ 'ಕಾಲಜ್ಞಾನ' ಸುಮಾರು ೧೮೮ ವರ್ಷಗಳ ಹಿಂದೆ ಜನನವಾಯಿತು ಅಂದರೆ ರಚಿತವಾಯಿತು.
ಪ್ರಯೋಜನ: ದಾರ್ಮಿಕ ಜಾಗೃತಿ ಲೋಕಕಲ್ಯಾಣ ಎಂತಹ ಕಷ್ಟಸಮಯದಲ್ಲು ಸಜ್ಜನರು ದರ್ಮಮಾರ್ಗದಿಂದ ವಿಮುಖರಾಗದಂತೆ ಎಚ್ಚರಿಸಲು ಇದರ ರಚನೆಯಾಗಿದೆ ಎನ್ನುತ್ತದೆ, ಮುಂದಿನ ವಿಪತ್ತನ್ನು ಸೂಚಿಸುವ ಕಾಲಜ್ಞಾನದ ಉಪದೇಶ.
ಪ್ರಚಂಡ ನಾರೇಯಣರ ಗುರುವಾಣಿಯ ಪದ್ಯಗಳು ಹದಿನಾರು ಅಂದರೆ ಒಂದು ಮತ್ತು ಆರು ಅಂದರೆ 1-ಪರಭ್ರಹ್ಮ ಮತ್ತು 6-ಭಗವಂತನ ಸ್ವಾಯುತ್ತ ಭಗಗಳು ಮತ್ತು ಕಲೆಗಳು
ಭಗ:ಐಶ್ವರ್ಯ, ಧರ್ಮ,ಯಶ , ಶ್ರೀ, ಜ್ಞಾನ ಹಾಗು ವೈರಾಗ್ಯ ತತ್ವ: ಉತ್ಪತ್ತಿ, ಪ್ರಶಯ ಆಗತಿ ವಿದ್ಯೆ ಅವಿದ್ಯೆ ಅದೇ ರೀತಿ 6- ಅವಸ್ಥೆಗಳು: ಶೈಶವ, ಕೌಮಾರ್ಯ, ಪೌಗಂಡ , ಕಿಶೋರ,ಯೌವನ ಹಾಗು ಜರ
ಅಲ್ಲದೆ ಪ್ರಶ್ನೋಪನಿಷತ್ತಿನಂತೆ ಹದಿನಾರು ಕಲೆಗಳು: ಪ್ರಾಣ,ಶ್ರದ್ದಾ, ಆಕಾಶ , ವಾಯು , ತೇಜ, ಜಲ, ಪೃಥ್ವಿ , ಇಂದ್ರೀಯ, ಮನಸ್ಸು, ಅನ್ನ, ವೀರ್ಯು, ತಪಸ್ಸು,ಮಂತ್ರ,ಕರ್ಮ ಲೋಕ ಮತ್ತು ನಾಮ.
ಗುರುವಾಣಿಯಲ್ಲಿ ತಾತಯ್ಯನವರು ನಾರೇಯಣ ಕವಿ ಎಂಬ ಕಾವ್ಯನಾಮದೊಂದಿಗೆ ಕಾಲಜ್ಞಾನವನ್ನು ರಚಿಸಿದ್ದಾರೆ.
ಗುರುವಾಣಿ
ಅಲ್ಪಾಯುಧಸ್ತಲು ಅವನಿಕಿ ದೊರಲಯಿರಿ|ಭೂದೇವತಕು ಎಂತೊ ಭಾರಮಾಯ| ಮೋಯಲೇನನುಚು ಮೊರಬೆಟ್ಟುಚುನ್ನದಿ | ನಿಂಡಾ ಪರತತ್ವಪ್ರಚಂಡ ನಾರೇಯಣ ಕವಿ||೧||
ಅಲ್ಪವಾದ ಆಯುದ ಹಿಡಿದ ಜನ ಭೂಮಂಡಲದ ಒಡೆಯರಾದರು, ಭೂದೇವತೆ ಹೆಚ್ಚಿನ ಬಾರ ಹೊರಲಾರದೆ ಮೊರೆಯಿಡುತ್ತಿದ್ದಾಳೆ.ಇದು ನಾರೇಯಣ ಕವಿಯ ಕಾಲಜ್ಞಾನವಾಣಿ.
ಇಲ್ಲಿ ಪಿಸ್ತೂಲು ಬಂದೂಕು ಸಿಡಿಮದ್ದನ್ನು ಅಲ್ಪಾಯುದವೆಂದು, ದರ್ಮತೊರೆದು ಆಳಿದ ಬ್ರೀಟಿಶರ ಆಳ್ವಿಕೆಯಿಂದ ಭೂಬಾರ ಹೆಚ್ಚಾಯಿತೆಂದು ಹೇಳಲಾಗಿದೆ.
ವಾನರುಲ ವಸುಧ ಪಾಲನ ತೀರೆನು|ಇಕ ಮೀದಲೇದು ವಚ್ಚೆನು ಅತ್ಯಂ|ಪಲಾಯನ ಮೈ ಪೋದುರು|ನಿಂಡಾ....||೨||
ಭೂಮಿ ಆಳುತ್ತಿರುವ ವಾನರ ಜನಾಂಗದ ಅದಿಕಾರದ ಅವದಿ ಮುಗಿಯುತ್ತಿದೆ ಅವರ ಅಂತ್ಯವು ಸಮೀಪಿಸಿ ಓಡಿಹೋಗುತ್ತಾರೆ ಎಂದಿದೆ. ಆದರೆ ತಾತಯ್ಯನವರ ಕಾಲಜ್ಞಾನ ರಚಿತವಾಗಿರುವುದು 188 ವರ್ಷಗಳ ಮೊದಲು ಸುಮಾರು 1813-14 ರಲ್ಲಿ ಅವರು ಭವಿಷ್ಯವನು ಮುಂಚೆಯೆ ನುಡಿದಿರುವುದು ಗಮನಿಸಬಹುದು. ಅವರು ಕೆಂಪುಮುಖದ ಶ್ವೇತವರ್ಣಿಯರನ್ನು ವಾನರರು ಎಂದಿರುವುದು ಸಹ ಗಮನಿಸಬಹುದು.
ತಮಲೋನೆ ತಮಕು ಕಲಹಮು ಪಡಿ|ಚತ್ತುರು ಪರಂಗಿವಾರು ಪಟ್ನಮು ಪಾಡವುನು|ಪ್ರಜಲಕು ಕ್ಷೇಮಮು |ನಿಂಡಾ...||೩||
ಶ್ವೇತವರ್ಣೀಯರಲ್ಲಿ ಕಲಹವು ಹುಟ್ಟಿ ಯುದ್ದದಲ್ಲಿ ಪರಂಗಿಯರು ಸೋತುಬಿದ್ದು ಸಾಯುತ್ತಾರೆ. ಪಟ್ಟಣಗಳು ನಾಶವಾಗುತ್ತದೆ. ಭಾರತದಲ್ಲಿ ಪ್ರಜಾಕ್ಷೇಮವುಂಟಾಗುತ್ತದೆ.
ಇಲ್ಲಿ ಐರೋಪ್ಯರನ್ನು ಪರಂಗಿವಾರು ಎಂದು, ಬ್ರೀಟಿಷ್ ಫ್ರೆಂಚರ ಯುದ್ದವನ್ನು, ರಕ್ತಕ್ರಾಂತಿಯನ್ನು ಅಣುತಲೆಗಳಿಂದ ನಾಶವಾದ ಹಿರೊಶಿಮ ನಾಗಸಾಕಿ ಪಟ್ಟಣಗಳ ನಾಶದ ಸೂಚನೆಯನ್ನು ನೀಡಲಾಗಿದೆ
ಅರಣ್ಯಪುರಮು ಮೀದಾಸಕ್ತಿಪುಟ್ಟಿಂದಿ|ಅದಿ ಕದಾ ಮೀರಕಿ ಹಾನಿ ವಚ್ಚೆ|ದೈವ ಬಲಮು ತೊಲಗಿ ಧರ ಪರುಲ ಪಾಲವುನು|ನಿಂಡಾ..||೪||
ಪ್ರಾಕೃತಿಕ ಸಂಪತ್ತಿನ ಮೇಲೆ ಅವರ ಆಸಕ್ತಿ ಹೆಚ್ಚಿ ಅರಣ್ಯನಾಶ ಗಣಿಗಾರಿಕೆಯಿಂದ ಭೂಮಿ ಜಲಗಳನ್ನು ನಾಶಗೊಳಿಸಿದರೆಂದು ಇದರಿಂದ ಅವರ ಆಳ್ವಿಕೆಗೆ ದೈವಬಲ ತಪ್ಪಿ ಅಂತ್ಯ ಬಂತೆಂದು ತಾತ್ಪರ್ಯವಾಗಿದೆ.
ಈ ವಾಣಿಯು ಶಾಪರೂಪದಲ್ಲಿದ್ದು ಇಂದಿನ ವರ್ತಮಾನಕ್ಕು ತುಲನೆ ಮಾಡಿ ನೋಡಬಹುದು.
ಜಯ ನಾಮಾಂತ್ಯಮು ಜನುಲುಕು ಬಹು ಘಾಸಿ|ವಕ ಕಾಸು ಪರಹಾನಿ ಲೇಮಿ ವರ್ತಕುಲುಕು|ಅಧಿ ಗಾಕ ಧಾನ್ಯಮು ಅಗ್ಗವ ಕಾದುರಾ||ನಿಂಡಾ...||೫||
ಜಯವೆಂಬ ಅಂತ್ಯಮುಟ್ಟಾಲು ದೂರವಿದೆ ಜನರಿಗೆ ಕಷ್ಟಕಾಲ ಪ್ರತಿ ಕಾಸಿಗೂ ಶೋಷಣೆ ಅಹಾರದಾನ್ಯಗಳ ವಿಪರೀತ ಬೆಲೆ ಏರುವುದು ಇದು ಬ್ರಿಟೀಷರು ಹೋದ ನಂತರದ ಸ್ಥಿಥಿ
ಪಂಟ ಪಂಡಿನ ಕರುವು ಪಂಟ ಯೆಂಡಿನ ಕರುವು|ಪ್ರಜಲೆಟ್ಲು ಬ್ರದಿಕೇರು ಪ್ರಾಪಂಚ ಮಂದು|ಶರಣುಲು ವಾಕ್ಕಾಲು ಚೇರ್ಚವಚ್ಚೆನು ಸುಮೀ|ನಿಂಡಾ..|೬||
ಸಮೃದ್ದ ಬೆಳೆ ಬೆಳೆದರು ಬರಗಾಲ ಬೆಳೆ ಇಲ್ಲದಿದ್ದರು ಬರಗಾಲ. ಹೀಗಾಗಿ ಪ್ರಪಂಚದಲ್ಲಿ ಜನರು ಬದುಕಿ ಬಾಳುವುದಾದರು ಹೇಗೆ ?. ಇದು ನಾರೇಯಣ ಕವಿಯ ಭವಿಷ್ಯ ಸೂಚನೆ. ಇದು ವ್ಯಾಪಾರಿಗಳ ಮಧ್ಯವರ್ತಿಗಳ ಸರ್ಕಾರಗಳ ಆಡಳಿತ ವೈಖರಿಯ ಸೂಚನೆ. ಅಪಾರ ದಾನ್ಯವಿದ್ದರು ಬೆಲೆ ಏರಿಕೆ ತಪ್ಪದು ಎನ್ನುತ್ತಿದ್ದಾನೆ.
ಪಿಡಗು ಪಡಿನ ವಿಧಮು ಪಡೆಮು ವಿಷಮಾಕ್ಷರಮು| ಸರ್ವೇಸ್ವರುಂಡೈನ ತಪ್ಪಿಂಚಲೇಡು|ಜನ್ಮದೇಶಮುನುಕು ಜರಗಿ ಪೊಯ್ಯೇರಯ|ನಿಂಡಾ..||೭||
ತಮ್ಮ ಬಾಯಿಂದ ಬಂದ ಈ ವಿಷಮಾಕ್ಷರಗಳು ಎಂದು ಸುಳ್ಳಾಗದೆಂದು ಭಗವಂತನು ಸಹ ಈ ಅವಗಡಗಳನ್ನು ತಪ್ಪಿಸುವದಿಲ್ಲವೆಂದು ಸ್ವತಾಂತ್ರ ನಂತರದ ಸ್ಥಿಥಿಯನ್ನು ಸೂಚಿಸುತ್ತಿದ್ದಾರೆ ಕವಿ ನಾರೇಯಣ
ಪಾಡು ವಾನರುಲಕು ವಚ್ಚೆನು ಅಂತ್ಯಂಬು|ದೈವಬಲಮು ಲೇಶ ಮಹಿನ ಲೇದು| ತಾನೆಂತವಾಡೈನ ತನ ಬಲಮು ಚೆಡುನುರಾ|ನಿಂಡಾ...|೮||
ಹಾಳು ವಾನರರ ಅಡಳಿತಕ್ಕೆ ಅಂತ್ಯವು ಬಂದಿದೆ. ಅವರಿಗೆ ದೈವಬಲವು ತಪ್ಪಿದೆ. ಮಾನವನು ಎಷ್ಟೆ ಸಮರ್ಥನಾದರು ಈ ಸಮಯದಲ್ಲಿ ದೃತಿಗೆಡುತ್ತಾನೆ. ಎಂದಿದ್ದಾನೆ ಕವಿ. ಪದ್ಯ 8 ರವರೆಗು ಬ್ರಿಟಿಶರ ನಿರ್ಗಮನವನ್ನು ಸೂಚಿಸುವ ಕವಿ ನಂತರ್ 9 ರಿಂದ 16 ವರೆಗು ಅವರ ನಂತರದ ಅಧಿಕಾರದ ಅದಃಪತನವನ್ನು ಹೇಳಿದ್ದಾನೆ.
ಚೋರುಲ ಪಟ್ಟಾಂಬಾಯೆನು|ರಾಜೆವ್ವುಡು ಲೇಕಪೋಯ,ರಾಜ್ಯಮು ಚೆಡೆರಾ|ದೊಂಗಲ ದೋಪೈಯುನ್ನದಿ|ನಿಂಡಾ..||೯||
ಕಳ್ಳರಿಗೆ ಆಳುವ ಪಟ್ಟವಾಯಿತು. ದೊರೆತನ ಇಲ್ಲವಾಗಿ ರಾಜ್ಯಕೆಟ್ಟು ದೋಚುವರಿಗೆ ಕಳ್ಳರಿಗೆ ಸುಳ್ಳರಿಗೆ ಸುಬೀಕ್ಷವಾಯಿತು. ದೋಚುವರಿಗೆ ಸಮೃದ್ದಿ ಇದನ್ನು ದೊಂಗಲು ದೋಪು ಎನ್ನುತ್ತಾನೆ, ಇವರ 'ನಾದಬ್ರಹ್ಮಾನಂದದ' 140 ನೆ ಪದ್ಯದಲ್ಲಿ
ಲಂಚಾಲು ಪ್ರಧಾನುಲು ಗುರಿಕಾಂಡ್ಲು |
ಲಂಚಾಲು ಕರಣಾಲು ವಾತಕಾಂಡ್ಲು|
ದೋರನದಂಡನಲ್ಯಾಕ ದೋಪುಲಂಚಾಲುರಾ|ನಾದಭ್ರಹ್ಮಾನಂದ ನಾರೇಯಣ ಕವಿ|
ಇಲ್ಲಿ ಎಲ್ಲ ಅದಿಕಾರಿಗಳು ಲಂಚ ಪಡೆಯುವರೆಂದು ಹೇಳಲಾಗಿದ್ದು. ಇದನ್ನು ರಚಿಸಿರುವ ಕಾಲವನ್ನು ಗಮನಿಸಿ.
ಪಾಪಮು ಚೆಗ್ಗಾಯ ಪಟ್ಟಭದ್ರುಡು ದ್ರೋಹಿ|ಪಾಡಾಯ ರಾಜ್ಯಮು ಪ್ರಜಲು ಚೆಡಿರಿ|ದಿನಮು ದೇಡೈಯುಂಡು ದಿಕ್ಕು ಪರಮಾತ್ಮುಡೇ|ನಿಂಡಾ...||೧೦||
ಪ್ರಜೆಗಳಲ್ಲಿ ಪಾಪಚರಣೆ ಹೆಚ್ಚಿತು. ಅದಿಕಾರದಲ್ಲಿ ಕುಳಿತ ಒಡೆಯನಾದರು ದೇಶದ್ರೋಹಿ. ಹೀಗಾಗಿ ನಿಯಂತ್ರಣವಿಲ್ಲದ ರಾಜ್ಯ ಹಾಳಾಯಿತು.ಪ್ರಜೆಗಳು ಕೆಟ್ಟರು.ದೀನರಿಗೆ ಒಂದೊಂದು ದಿನವು ವರ್ಷವಾಗುತ್ತಿದೆ.ಇಂತಹ ಸಮಯದಲ್ಲಿ ಸಾಮಾನ್ಯರಿಗೆ ಪರಮಾತ್ಮನೆ ದಿಕ್ಕು ಎನ್ನುತ್ತಾನೆ ನಾರೇಯಣ ಕವಿ ಅಂದರೆ ತಾತಯ್ಯನವರು
ಅಲ್ಪಬುದ್ದಿ ಪುಟ್ಟಿ ಅಂದರಿನಿ ವರುಸಗಾ|ಕುಲಬ್ರಷ್ಟುಚೇಯ ಬೂನಿ ನಾಡು|ಸವೇಶ್ವರುಡು ವಾನಿ ಚೆರಪಕ ವಿಡುಚುನಾ?|ನಿಂಡಾ..||೧೧||
ಅದಿಕಾರ ವಹಿಸಿ ಆಳುವವರಿಗೆ ಅಲ್ಪಬುದ್ದಿ ಎಲ್ಲವನ್ನು ಸರದಿಯಂತೆ ಕುಲಗೆಡಿಸುತ್ತಿದ್ದಾರೆ. ಆದರೆ ಸರ್ವೇಶ್ವರನು ಅವರನ್ನು ಕೆಡಿಸದೆ ಬಿಡುವನೆ. ಇದು ನಿಶ್ಚಯ ಅನ್ನುತಾರೆ ನಾರೇಯಣ ಕವಿ
ಇಪ್ರುಲ ಪಾಲಾಯ ಇರಸಾಲು ನಾಣ್ಯಾಲು|ನಾಲ್ಗಿಂಟ ವಕಪಾಲು ನಗರು ಚೇರು| ವ್ಯಧವ ದೊರತನಮಾಯ ಏಮನವಚ್ಚುರಾ|ನಿಂಡಾ...|೧೨||
ಆಗ ಕಂದಾಯ ವಸೂಲಿಗಾರರು ವಿಪ್ರರು ಹಾಗಾಗಿ ಸರ್ಕಾರಿ ಅದಿಕಾರಿಗಳನ್ನು ಗ್ರಾಮಾದಿಕಾರಿಗಳನ್ನು ವಿಪ್ರರೆಂದು ಕರೆಯುತ್ತಾನೆ ಕವಿ. ಅರಮನೆ ಖಜಾನೆ ಸೇರಬೇಕಾದ ಹಣ ಅದಿಕಾರಿಗಳ ಅಂದರೆ ವಿಪ್ರರ ಪಾಲಾಯ್ತು. ಸೇರಬೇಕಾದ ಹಣದ ಕಾಲುಬಾಗ ಮಾತ್ರ ಸರಕಾರದ ಪಾಲಾಯ್ತು. ವಿದವೆಯ ಒಡೆತನವಾಯ್ತು. ಎನ್ನುತ್ತಾನೆ. ಇಲ್ಲಿ ವಿದವೆಯ ಆಡಳಿತ ಅನ್ನುವದನ್ನು ಅರಾಜಕತೆಗೆ ಪ್ರತಿಯಾಗಿ ಬಳಸಿದಂತೆ ಕಾಣುತ್ತದೆ.
ದುರ್ಬುದ್ದಿಪುಟ್ಟಿಂದಿ ದೊರಲಕು ಬಹು ಚೇಟು|ಮರಣ ಕಾಲಮುನಕು ಮಂದು ಲೇದು|ಚೇಟು ಕಾಲಮುನಕು ಚೆಡುಬುದ್ದಿ ತೋಚುರಾ|ನಿಂಡಾ...||೧೩||
ಆಳುವ ದೊರೆಗಳಿಗೆ ದುರ್ಭುದ್ದಿ ಹುಟ್ಟಿದೆ, ಅದೆ ಅವರಿಗೆ ಕಾಲದಲ್ಲಿ ಮಾರಕವಾಗಲಿದೆ. ಮರಣಕಾಲದ ವ್ಯಾದಿಗೆ ಔಷದವಿಲ್ಲ ಇನ್ನುತ್ತಿದ್ದಾರೆ ತಾತಯ್ಯನವರು
ವಕ್ರಿಂಚಿರಿ ನವಗ್ರಹಮುಲು ವಕ್ರಿಂಚಿರಿ ಶಕ್ತುಲೆಲ್ಲ ರಕ್ತಾಹುತಿ ಕೊರಕೈ|ವಾನರ ವಂಶಮು ಲೇಕಾ|ನಿಂಡಾ..||೧೪||
ನವಗ್ರಹಗಳು ಕೄರದೃಷ್ಟಿ ಬೀರುತ್ತಿದ್ದಾರೆ. ಶಕ್ತಿದೇವತೆಗಳು ರಕ್ತಾಹುತಿ ಸ್ವೀಕರಿಸಲಿ ಸಿದ್ದವಿದ್ದಾರೆ. ಆಳುವ ಗುಂಪು ನಾಶವಾಗುತ್ತದೆ.
ಪರಮಾತ್ಮ ನಾಜಿಹ್ವ ಪಲುಕುಲ ಪಲಿಕಿಂಚಿ|ಅಪದ್ದಮಯಿತೇ ಅಪಕೀರ್ತಿ ನೀದೇ| ಕಾಲಜ್ಞಾನಮುನಕು ಕರ್ತವು ನೀವಯಾ||ನಿಂಡಾ..||೧೫||
ಪರಮಾತ್ಮ ನಿನ್ನ ಕೃಪೆಯಿಂದ ನನ್ನ ನಾಲಿಗೆಯಿಂದ ಈ ಭವಿಷ್ಯದ ನುಡಿಗಳು ಹೊರಬಿದ್ದವು. ಸುಳ್ಳಾದರೆ ಅದರ ಅಪಕೀರ್ತಿಯು ನಿನ್ನದೆ.ವಾಸ್ತವವಾಗಿ ಕಾಲಜ್ಞಾನ ಕರ್ತನು ನೀನೆ ಎನ್ನುತ್ತಿದಾನೆ ನಾರೇಯಣ ಕವಿ ಅಂದರೆ ತಾತಯ್ಯನವರು.
ಪದಿ ಆಯಿದು ಪದ್ಯಾಲು ಪಾಟಿ ವಚ್ಚುನು ಚೂಡು|ಪ್ರಖ್ಯಾತಿ ಕಾವಲೆಪ್ರಾಪಂಚಮಂದು|ಚುಡಿ ವಚ್ಚಿ ಮದಟಿಕಿ ಚೆದುಲು ಪಟ್ಟುನು ಸುಮೀ|ನಿಂಡಾ..||೧೬||
ಹಿಂದಿನ ಹದಿನೈದು ಪದ್ಯಗಳು ನಿಜವಾಗುತ್ತವೆ. ಅದನ್ನು ಪರೀಕ್ಷಿಸಿನೋಡು. ಹಳೆ ಲೋಕ ಗೆದ್ದಲು ಹಿಡಿದು ನಾಶವಾಗಿ ಹೊಸಲೋಕ ಉದಯವಾಗುತ್ತದೆ.
**ಪ್ರಚಂಡ ನಾರೇಯಣ ಕವಿ ಪದ್ಯಮುಲು ಸಂಪೂರ್ಣಮು*****
----------------------------------------------------------------------------------------------------
ಕಾಲಜ್ಞಾನ ಭವಿಷ್ಯವಾಣಿ
ಪ್ರಕಾಶಕರು: ಶ್ರೀ ಯೋಗಿನಾರೇಯಣ ಯತೀಂದ್ರ ಆಶ್ರಮ ಟ್ರಶ್ಟ್
ಕೈವಾರ. ಕೋಲಾರ ಜಿಲ್ಲೆ.
----------------------------------------------------------------------------------------------------
ಮುಂದುವರೆಯುವುದು :
ಮುಂದಿನ ಬಾಗದಲ್ಲಿ : ಇಪ್ಪತ್ತೇಳು 'ಸೂಕ್ಷ್ಮ ಬೀಮಲಿಂಗ ಶತಕಮು" ಗಳ ಸಾರಂಶ