ಶ್ರೀರಾಮಸೇನೆಯ ಕತೆ: ಎಷ್ಟು ಸತ್ಯ - ಎಷ್ಟು ಸುಳ್ಳು?
ಬರಹ
ಶ್ರೀರಾಮಸೇನೆ ನಮ್ಮ ಸಮಾಜದಲ್ಲಿ ಮತೀಯ ಗಲಭೆಗಳನ್ನು ಹುಟ್ಟುಹಾಕುವುದಕ್ಕೆ ಹಣಪಡೆಯುತ್ತದೆ ಎನ್ನುವ ಮಹತ್ತರವಾದ ಆಪಾದನೆಯೊಂದಿಗಿನ ಸುದ್ದಿಗಳು, ದೂರದರ್ಶನದ ವಿವಿಧ ವಾಹಿನಿಗಳಲ್ಲಿ ನಿನ್ನೆಯಿಂದ ಪ್ರಸಾರವಾಗುತ್ತಿವೆ ಮತ್ತು ಇಂದಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇದರಲ್ಲಿ ಎಷ್ಟು ಸತ್ಯ ಇದೆ ಮತ್ತು ಇದು ಎಷ್ಟು ಸುಳ್ಳು ಎನ್ನುವುದು ಇನ್ನೂ ತಿಳಿಯಬೇಕಾದ ವಿಷಯ.
ಒಂದು ವೇಳೆ ನಿಜವಾದರೆ, ನಮ್ಮ ನಾಡಿನ ಹೆಣ್ಣುಮಕ್ಕಳಿಗೆ ನೀತಿಪಾಠ ಹೇಳಿ ಅವರ ರಕ್ಷಣೆಗೆ ನಿಲ್ಲುತ್ತೇವೆಂದು ಮುಂದೆ ಬರುವವರನ್ನು ಗೋಮುಖವ್ಯಾಘ್ರರೆಂದು ಪರಿಗಣಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾಗಬಹುದು ಮತ್ತು ಅಂತಹ ಸಂಘಟನೆಗಳನ್ನು ನಿಷೇಧಿಸಬೇಕಾಗಬಹುದು.
ಒಂದು ವೇಳೆ ಅದು ಸುಳ್ಳು ಎಂದು ಸಾಬೀತಾದರೆ, ಸಮಾಜದ ಒಂದು ಪ್ರಮುಖ ಸಂಘಟನೆಯ ವಿರುದ್ಧ ಸುಖಾ ಸುಮ್ಮನೆ ಆಪಾದನೆ ಹೊರಿಸಿ, ಮುಖಕ್ಕೆ ಮಸಿಬಳಿಯುವ, ಈ ಪ್ರಯತ್ನಗಳಿಗೆ ಕಡಿವಾಣ ಹಾಕುವತ್ತ, ಕಾನೂನಿನಲ್ಲಿ ಬದಲಾವಣೆ ಮಾಡಬೇಕಾಗಬಹುದು.
ಓದುಗರೇ,ನೀವೇನಂತೀರಿ?
- ಆತ್ರಾಡಿ ಸುರೇಶ ಹೆಗ್ಡೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಶ್ರೀರಾಮಸೇನೆಯ ಕತೆ: ಎಷ್ಟು ಸತ್ಯ - ಎಷ್ಟು ಸುಳ್ಳು?