ಸಂಪದಿಗರಿಗೆ ಆಹ್ವಾನ

ಸಂಪದಿಗರಿಗೆ ಆಹ್ವಾನ

ಪ್ರೀತಿಯ ಸಂಪದ ಓದುಗರೆ,

 ಕನ್ನಡದ ವಿದ್ವಾಂಸ ಜಗತ್ತಿಲ್ಲಿ ನಮ್ಮ ಸಮಾಜದ ಮತ್ತು ಸಮಾಜವಿಜ್ಞಾನದ ಕುರಿತು ವೈಜ್ಞಾನಿಕವಾಗಿ ಹೆಚ್ಚು ಚರ್ಚೆಯಾಗಬೇಕೆಂಬ ಉದ್ದೇಶದಿಂದ ಬಾಲಗಂಗಾಧರರ ಹಲವಾರು ಆಂಗ್ಲ ಭಾಷೆಯ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿಲಾದ ’ಪೂರ್ವಾವಲೋಕನ’ ಕೃತಿಯನ್ನು (ಅಭಿನವ ಪ್ರಕಾಶನ) ಇತ್ತೀಚೆಗೆ ಪ್ರಕಟಿಸಲಾಗಿದೆ. ಈ ಪುಸ್ತಕದಲ್ಲಿರುವ ಕೆಲವಾರು ಲೇಖನಗಳ ಆಧಾರದ ಮೇಲೆ "ಪೂರ್ವಾವಲೋಕನ : ಒಂದು ಸಂವಾದ"  ಒಂದು ದಿನ ಕಾರ್ಯಾಗಾರವನ್ನು ಇದೇ ತಿಂಗಳ ೨೪ ರಂದು ಸರ್ಕಾರಿ ಕಲಾ  ಕಾಲೇಜು, ಕೆ.ಆರ‍್. ಸರ್ಕಲ್ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

 
ಸಂಪದದಲ್ಲಿ ನಾವು ಬರೆದ ಲೇಖನಗಳಿಗೆ ಹಾಗೂ ಇತರ ಗೆಳೆಯರ ಲೇಖನಗಳಿಗೆ ಪ್ರತಿಕ್ರಿಯೆ ಬರೆದಂತಹ ಸಂದರ್ಭದಲ್ಲಿ ಆಸಕ್ತಿದಾಯಕವಾಗಿ ಚರ್ಚೆಗೆ ಅನುವು ಮಾಡಿಕೊಡಲಾಗಿದೆ. ಆದಕಾರಣ ಇದು ಕೇವಲ ಅಂತರ್ಜಾಲದಲ್ಲಿ ನಡೆಯುವ ಚರ್ಚೆಗೆ ಸೀಮಿತವಾಗದೆ, ನೇರವಾಗಿ ಮುಖಾಮುಖಿಯಾಗಿ ಚರ್ಚಿಸಲು ಒಂದು ಸುಸಂದರ್ಭ ಎಂದು ತಿಳಿದು ತಮ್ಮೆಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ. ಕಾರ್ಯಾಗಾರಕ್ಕೆ ಬರಲು ಯಾವುದೇ ಪ್ರವೇಶ ಶುಲ್ಕವಿಲ್ಲ, ನಿಮ್ಮ ಆಸಕ್ತಿಯೇ ಶುಲ್ಕವಾಗಿದೆ. ಹಾಗೂ ಕೆಳಕಂಡ ಲೇಖನಗಳನ್ನು ಓದಿಕೊಂಡು ಬಂದು ಚರ್ಚಿಸಬಹುದು
 
ರಾಜಾರಾಮ ಹೆಗ್ಡೆಯವರು " Why Understand Western Culture" which is translated as " ಪಾಶ್ಚಾತ್ಯ ಸಂಸ್ಕತಿಯನ್ನು ಯಾಕೆ ಅರ್ಥ ಮಾಡಿಕೊಳ್ಳಬೇಕು? (ಪುಟ ಸಂಖ್ಯೆ ೧೦೦ - ೧೧೫  ಪೂರ್ವಾವಲೋಕನ) ಲೇಖನದ ಕುರಿತು ಚರ್ಚಿಸಲಿದ್ದಾರೆ
ಪ್ರೊ. ಜಿ ಸಿವರಾಮಕ್ರಷ್ಣನ್  " To Follow Our fore Fathers..." which is translated as "ನಮ್ಮ ಪೂರ್ವಜರನ್ನು ಅನುಸರಿಸಿ..." ಸಂಪ್ರದಾಯದ ಸ್ವರೂಪ" (ಪುಟ ಸಂಖ್ಯೆ ೮೫-೧೦೦  ಪೂರ್ವಾವಲೋಕನ) ಲೇಖನದ ಕುರಿತು ಚರ್ಚಿಸಲಿದ್ದಾರೆ.

ಪ್ರೊ. ಸದಾನಂದ ಅವರು Dark hour of Secularism"   which is translated as "ಸೆಕ್ಯುಲರಿಸಂನ ಕರಿನೆರಳು - ಭಾರತದಲ್ಲಿ ಹಿಂದೂ ಮೂಲಭೂತವಾದ ಮತ್ತು ವಸಾಹತುಶಾಹಿ ಉದಾರವಾದ" (ಪುಟ ಸಂಖ್ಯೆ223- 260 ಪೂರ್ವಾವಲೋಕನ)

 
ಈ ಕಾರ್ಯಾಗಾರವನ್ನು ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ,  

ಕುವೆಂಪು ವಿಶ್ವವಿದ್ಯಾನಿಲಯ 

ಹಾಗೂ ಸಮಾಜ ಅಧ್ಯಯನ ಹಾಗೂ ಶಿಕ್ಷಣದ ಕೇಂದ್ರ (CESS) ಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
 
ಕಾರ್ಯಾಗಾರ ನಡೆಯುವ ಸ್ಥಳ: ಸರ್ಕಾರಿ ಕಲಾ  ಕಾಲೇಜು, ಕೆ.ಆರ‍್. ಸರ್ಕಲ್, ಬೆಂಗಳೂರು.
ದಿನಾಂಕ: 23-4-2011 
ಸಮಯ: ಬೆಳಗ್ಗೆ ೧೦.೦೦ ಗಂಟೆ
 
ಸಂದೀಪ್ ಕುಮಾರ್ ಶೆಟ್ಟಿ
ಕಾರ್ಯಕ್ರಮ ನಿರ್ವಹಣಾಧಿಕಾರಿ
ಸ್ಥಳೀಯ 
ಸಂಸ್ಕೃತಿಗಳ ಅಧ್ಯಯನ ಕೇಂದ್ರ
 
 
ಕುವೆಂಪು ವಿಶ್ವವಿದ್ಯಾನಿಲಯ, ಶಿವಮೊಗ್ಗ
 


Ph: +91 8282 - 257316 (O)

+91-8147953299 (M)