ಸಣ್ಕತೆ- ಕಾರಣ.. ಯಾರು ?

ಮೌನವಾಗಿದ್ದ ಮಸಣದಲ್ಲಿ ಒಮ್ಮಿದೊಮ್ಮೆಲೆ ಆಕ್ರಂದನ ಆಲಾಪ. ಎಲ್ಲರೂ ಸೇರಿದರು. ಪ್ರೇಮಿಗಳ ರೂಪದಲ್ಲಿ ಇಹಲೋಕ ತ್ಯಜಿಸಿದವರ ಸಹಿತ. ಸುತ್ತಲೂ ನೀರವ ಮೌನ ಮುರಿದಿತ್ತು. ಯುವ ಉತ್ಸಾಹಿ ಯುವಕ ಯುವತಿಯ ಹೆಣಗಳು ಹೂವಿನಿಂದ ಅಲಂಕೃತಗೊಂಡು ಸ್ಮಶಾನದಲ್ಲಿ ಸುಮ್ಮನೆ ಮಲಗಿದ್ದವು !
ಕಾರಣ ಯಾರು? ಜಾತಿಯ ಅರಿಯದೆ ಯೌವನದ ಹುಚ್ಚಿನಲ್ಲಿ ಸೆಳೆತಕ್ಕೆ ಒಳಗಾದವರದ್ದೋ ? ಜಾತಿಯೇ ಪರಮ ದೈವ ಎನ್ನುವ ಹಿರಿಯರದ್ದೋ? ಜಾತಿಯ ಬೆಂಬಲಿಸುವ ಸಮಾಜದ್ದೋ? ಎಲ್ಲದ್ದಕ್ಕೂ ಜಾತಿಯೇ ಬೇಕೆನ್ನುವ ಸರಕಾರದ ಒಳ ಕಾನೂನುಗಳದ್ದೋ ? ಯಾರದ್ದು?!
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ