ಸತ್ಯಾಗ್ರಹ
ಕವನ
ಅಧಿಕಾರ ಪೀಠದಿ ಕುಳಿತಿಹ ಜನರ
ಮನವ ಸೆಳೆಯಲು ಸತ್ಯಾಗ್ರಹ
ಆಡಳಿತ ಯಂತ್ರಕೆ ಚುರುಕು ಮುಟ್ಟಿಸಲು
ಹೂಡುವ ಬಾಣವೇ ಸತ್ಯಾಗ್ರಹ//
ಭೃಷ್ಟಾಚಾರ ಕಪಟ ಮೋಸ
ಬೀದಿಗೆ ಎಳೆಯಲು ಈ ಆಟ
ನಾನಾ ರೂಪದಿ ಹಾಕುತ ವೇಷ
ಗಮನ ಸೆಳೆಯುವ ನವ ತಂತ್ರ//
ಜನಾಂದೋಲನ ಭಾಷಣ ಕಮ್ಮಟ
ಜಾಗೃತಿ ಗೊಳಿಸುವ ಮಹಾಮಂತ್ರ
ದುಷ್ಟರ ಆಟವ ಮಣ್ಣು ಗೂಡಿಸಲು
ಎಲ್ಲರು ಸೇರುವ ವೇದಿಕೆ ಅಂಗಳ//
ಭಾರತ ದೇಶದ ಸ್ವಾತಂತ್ರ್ಯ ಕ್ಕಾಗಿ
ಸಾರಿದರಂದು ಅಹಿಂಸಾ ತತ್ವ
ನೊಂದು ಬೆಂದು ಬಸವಳಿದವರ
ಕಣ್ಣೀರು ಒರೆಸಲು ದಾಸ್ಯವ ಬಿಡಿಸಲು//
ಸ್ವರಾಜ್ ಚಳುವಳಿ ಸ್ವದೇಶಿ ನೀತಿ
ಉಪ್ಪಿನಕರವು ಖಾದಿಯ ಒಲವು
ನೇತಾರರೆಲ್ಲ ಸೇರಿದ ನೆಲವು
ರಾಷ್ಟ್ರಪಿತ ಬಾಪು ದೇವರ ವರವು//
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ್
