ಸತ್ಯ ಮತ್ತು ವಾಸ್ತವ

ಸತ್ಯ ಮತ್ತು ವಾಸ್ತವ

ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ,

ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ,

ಇಡೀ ದೇಹದಲ್ಲಿರುವ ನೀರು ಹಿಂಗುವಂತೆ ಕಣ್ಣೀರಾಗಿದ್ದೇನೆ,

ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ,

ಹಲವಾರು ಸಲ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಶೋಷಣೆಗೊಳಗಾಗಿದ್ದೇನೆ,

ಈ ಬದುಕು ಸಾಕೆನಿಸುವಷ್ಡು ನೊಂದಿದ್ದೇನೆ,

ಜೀವನದಲ್ಲಿ ಮತ್ತೆಂದೂ ಮೇಲೇರಲು ಸಾಧ್ಯವಾಗದಷ್ಟು ಸೋತಿದ್ದೇನೆ,

ಸಮಾಜದ ಯಾರೂ ಗಮನಿಸದಷ್ಟು ಅಲಕ್ಷಿತನಾಗಿದ್ದೇನೆ,

ಇಲ್ಲಿಯವರೆಗೂ ಗಳಿಸಿದ್ದೆಲ್ಲವನ್ನೂ ಕಳೆದುಕೊಂಡಿದ್ದೇನೆ,

ಅನಾಥಪ್ರಜ್ಙೆ ಹಗಲಿರುಳು ಕಾಡುತ್ತಾ ಬಸವಳಿದಿದ್ದೇನೆ,

ಆದರೂ,..............

ಬದುಕನ್ನು ಎದುರಿಸುತ್ತಿದ್ದೇನೆ,

ಈ ಕ್ಷಣಕ್ಕೂ ನಗು ನಗುತಲಿದ್ದೇನೆ,

ಮತ್ತೆ ಮತ್ತೆ ಮನದಲ್ಲಿ ಸುಂದರ ಭವಿಷ್ಯದ ಕನಸು ಕಾಣುತ್ತಿದ್ದೇನೆ,

ನಾನೀಗ ಎಲ್ಲದರಿಂದ ಮುಕ್ತ, ಸಂತೃಪ್ತ, ನಿರ್ಲಿಪ್ತ,

ಬದುಕೇನು ಭಾರವಲ್ಲ, ಅನುಭವಿಸಿ.

ಜೀವನ ಒಂದು ಅದ್ಬುತ ಮೈದಾನ ಹೊಂದಿದ ಪಾಠಶಾಲೆ - ನೆನಪಿರಲಿ,

ಓದಿ, ಬರೆಯಿರಿ, ಪ್ರವಾಸ ಮಾಡಿ, 

ಸಾಧ್ಯವಾಗದಿದ್ದರೆ ಆಟವಾಡಿ.

ಮತ್ತೆಲ್ಲವೂ ನಿಮ್ಮದಾಗುತ್ತದೆ.

ಇದು ಬಹುತೇಕ ಸತ್ಯ ಮತ್ತು ವಾಸ್ತವ.

ಇದರಲ್ಲಿ ನಿಮ್ಮೊಂದಿಗೆ ನಾನು....

  • ಜ್ಞಾನ ಭಿಕ್ಷಾ ಪಾದಯಾತ್ರೆಯ 143 ನೆಯ ದಿನ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಲೇಖನ.

ಮುಂದಿನ ಜಿಲ್ಲೆ ಬಳ್ಳಾರಿ - ವಿಜಯಪುರ. ಮಾರ್ಗಸೂಚಿ ಈ ಕೆಳಗಿನಂತಿದೆ.

ಕಂಪ್ಲಿ, ಸಿರಗುಪ್ಪ, ತೆಕ್ಕಲಕೋಟೆ, ಕುರಗೋಡ, ಬಳ್ಳಾರಿ, ಕುಡತಿನಿ, ತೋರಣಗಲ್ಲು, ಸಂಡೂರು, ಹೊಸಪೇಟೆ, ಕೂಡ್ಲಿಗಿ, ಕೊಟ್ಟರು, ಹಗರಿ ಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ : ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದ ಸಮಾನ ಮನಸ್ಕರು.