ಸಮಾನತೆ...
ಕವನ
ಮಾತುಗಳು ಮಾರುದ್ದ ಭಾಷಣದ ಸೋಗಿನಲಿ
ಸಮವಂತೆ ಎಲ್ಲರೂ ಲೋಕದ ದೃಷ್ಟಿಯಲಿ
ಸೂಟುಬೂಟಿನ ಹಮ್ಮಿನಲಿ ಮಾತುಗಳು ಬರುತಿರೆ
ಬಯಸಲ್ಲ ಅವನೆಂದೂ ಮನೆಯೊಳಗೆ ದಲಿತನ..
ದೇವರಲಿ ಮೊರೆಯಿಡಲು ಹೊರೆಗೆ ನಿಲ್ಲುತಲಿ
ಮಡಿವಂತರ ಸಂಗವದು ಡಂಭ ಭಕ್ತಿಯ ತೋರುತಲಿ
ಕಟ್ಟೆಯಲಿ ಕುಳಿತರೆ ಇರಿದು ಕೊಲ್ಲುವರೇ
ಜೀವವದು ನಿಮಗಿಲ್ಲಿ ಲಘುವಾಯಿತೇ..
ಸಮತೆಯನು ಸಾರಿದ ಸಂವಿಧಾನ ಪುಟಗಳನು
ಹರಿದು ಹೊತ್ತಿಸೋ ಕಾಲವಯ್ಯ..
ವೇತನಕೆ ಕೊಲೆಮಾಡಿ ನದಿಯಲ್ಲಿ ಎಸೆಯುವರೇ
ಕತ್ತಲಿದೆ ಇನ್ನು ಬೆಳಕಾಗಿಸಯ್ಯ..
ದೂರದೂರದ ಮಾತೇಕೆ ನಮ್ಮಯ ಬಾಯಲ್ಲಿ
ಅಮಾಯಕರ ರಕ್ತ ಹೊಳೆಯಾಗುವುದಿಲ್ಲಿ
ಗೆರೆಟೆಯನು ಹಿಡಿದಿಹರು ಗುಟುಗುಟುಕು ನೀರಿಗೆ
ಹೊಂಚುಸಂಚಿನಾ ಬದುಕು ಬದಲಾಗುವುದೆಲ್ಲಿ..
ಕಾನೂನು ಕಂಡವರೇ ಮೌನವಾಗಿ ಇರುವರೆ
ಬಡವನ ಕೋಪ ದವಡೆಯಡಿ ಸೇರಿರೆ
ಕಾಲರಾಯನೇ ಉತ್ತರ ಎಂದು ಸುಮ್ಮನೇ ಇದ್ದರೆ
ಮೈಲಿಗೆಯೇ ಮೆಲುಕು ಬೆಳಕಾಗದು ಬದುಕು..
-ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
