ಸಾಧನ ಕೇರಿಯ ಸಾಧಕ ಬೇಂದ್ರೆಯಜ್ಜ

ಸಾಧನ ಕೇರಿಯ ಸಾಧಕ ಬೇಂದ್ರೆಯಜ್ಜ

ಕವನ

ಸಾಧನಕೇರಿಯ ಸಾಧಕ ಗೌರವದ ಬೇಂದ್ರೆಯಜ್ಜ

ಕನ್ನಡ ಸಾಹಿತ್ಯ ಸತ್ವದಲಿ ಗೈದಿರಿ ಕಜ್ಜ

ಕನ್ನಡಮ್ಮನ ಮಡಿಲಲಿ ಪದಮಾಲೆಯ ಯಜ್ಞ

ಅಂಬಿಕೆ ರಾಮಚಂದ್ರರ ಹೆಸರ ಬೆಳಗಿದ ಮಹಾಪ್ರಾಜ್ಞ

ಅಂಬಿಕಾತನಯದತ್ತ ವರಕವಿ ದ.ರಾ.ಬೇಂದ್ರೆ ನಮ್ಮಜ್ಜ

 

ಬಡತನದ ಬವಣೆಯ ಕುಲುಮೆಯಲಿ ನೊಂದು ಬೆಂದಿರಿ

ಕೃಷ್ಣಕುಮಾರಿಯ ಹೊರತಂದು ನಾಕುತಂತಿಯ ಮೀಟಿದಿರಿ

ಉತ್ಕೃಷ್ಟ ಗರಿ ಜ್ಞಾನಪೀಠ ತಮ್ಮ ಮುಡಿಗೇರಿತು

ಪದ್ಮಶ್ರೀ ಜೊತೆಗೆ ಹಲವಾರು ಪ್ರಶಸ್ತಿ ಅರಸಿ ಬಂದಿತು

ಕವನದ ಸಾಲುಗಳಲಿ ನಿಜ ಜೀವನದ ಅಮೃತಧಾರೆಯಿತ್ತು 

 

ಜಾನಪದ ದೇಸಿಯತೆ ಸರಳ ಪದಗಳ  ಹಾದಿ ತೆರೆದಿಟ್ಟಿರಿ

ಆತ್ಮವಾಣಿಯ ಮಿಂಚಿನ ಸಂಚಾರ ಸತ್ಯಾಂಶ ಬರೆದಿರಿ

ಮಾತು ಮಂತ್ರ ಜೀವನ ಸ್ವತಂತ್ರ ಭಾವಗಳ ನೀಡಿದಿರಿ

ಮಾನವತಾವಾದಿ ಸಾಮಾಜಿಕ ಕಟ್ಟುಪಾಡುಗಳ ಬಿಂಬಿಸಿದಿರಿ

ಉಯ್ಯಾಲೆ ಗರಿ ನಾದಲೀಲೆಯಲಿ ಬೆಂದಷ್ಟೂ ಪಕ್ವತೆಯೆಂದಿರಿ

 

ಕಾಮಕಸ್ತೂರಿ ಗರಿ ಸೂರ್ಯಪಾನ ನಾದಲೀಲೆ ನೀಡಿದ ಸಾಹಸಿ

ನರಬಲಿಯಿಂದ ನಿಮಗಾಯಿತು ಹಿಂಸೆಯ ಸೆರೆಮಾನವಾಸ

ಇಳಿದು ಬಾ ತಾಯೇ ಜನಮಾನಸದಿ ಬೇರೂರಿತು

ಮೂಡಲ ಮನೆಯಲಿ ಮುತ್ತಿನ ತೋರಣ ಕಟ್ಟಿದಿರಿ

ಸಾಧನಕೆರೆ ನೆಚ್ಚಿನ ತಾಣ ಬೇಂದ್ರೆ ಅಜ್ಜನಿಗೆ ನಮನ

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್